



ಕಡಬ: ಉಪ್ಪಿನಂಗಡಿ- ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಕಡಬ ಸಮೀಪದ ಹಳೆಸ್ಟೇಷನ್ ಬಳಿ ಕಾರು- ಜೀಪು ನಡುವೆ ಅಪಘಾತ ಸಂಭವಿಸಿ ವಾಹನದಲ್ಲಿದ್ದವರು ಪ್ರಾಣಾಪಾಯದಿಂದ ಪಾರಾದ ಘಟನೆ ಡಿ.21 ಸಂಜೆ ಕಡಬದಿಂದ ವರದಿಯಾಗಿದೆ.
![]() |
ಕಾರು-ಜೀಪು ನಡುವೆ ಅಪಘಾತ ನಡೆದ ಸ್ಥಳದ ಚಿತ್ರ( Kadaba Times) |
ಮರ್ದಾಳ ಕಡೆಯಿಂದ ಕಡಬದತ್ತ ಗುರುಚರಣ್ ಎಂಬವರು ಚಲಾಯಿಸುತ್ತಿದ್ದ ಕಾರು ಮತ್ತು ಕಡಬದಿಂದ ಕೊಣಾಜೆಗೆ ದೀಕ್ಷಿತ್ ಎಂಬವರು ಚಲಾಯಿಸುತ್ತಿದ್ದ ಜೀಪಿನ ನಡುವೆ ಅಪಘಾತ ನಡೆದಿದೆ
ವಾಹನದಲ್ಲಿದ್ದ ಪ್ರಯಾಣಿಕರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಕಡಬ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ಪಡೆದಿದ್ದಾರೆ.ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ವ್ಯಾಪ್ತಿಯಲ್ಲಿ ಹಿಂದೆಯೂ ಹಲವು ಅಪಘಾತಗಳು ಸಂಭವಿಸಿತ್ತು.