




ಕಡಬ ಟೈಮ್ಸ್, ಸುಬ್ರಹ್ಮಣ್ಯ: ಅಖಿಲ ಹವ್ಯಕ ಮಹಾಸಭಾ ಕೊಡಮಾಡುವ ಹವ್ಯಕ ಸಾಧಕ ರತ್ನ ಪ್ರಶಸ್ತಿಗೆ ಪಾಕ ಪ್ರವೀಣ ಇಳಂತಿಲದ ಕೃಷ್ಣ ಪ್ರಶಾಂತ್ ಸರಳಿ ಭಾಜನರಾಗಿದ್ದಾರೆ.
ಡಿ.27 ರಂದು ಬೆಂಗಳೂರಿನಲ್ಲಿ ನಡೆಯುವ ತೃತೀಯ ವಿಶ್ವ ಹವ್ಯಕ ಸಮ್ಮೇಳನದಲ್ಲಿ ಈ ಪುರಸ್ಕಾರ ನೀಡಿ ಗೌರವಿಸಲಿದ್ದಾರೆ.
![]() |
ಪಾಕ ಪ್ರವೀಣ ಕೃಷ್ಣ ಪ್ರಶಾಂತ್ ಸರಳಿ |
ಕಳೆದ ಎರಡು ವರ್ಷಗಳಲ್ಲಿ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಚಂಪಾಷಷ್ಟಿ ವೇಳೆ ಅನ್ನ ಪ್ರಸಾದ ಮತ್ತು ಶ್ರೀ ದೇವರ ಕೊಪ್ಪರಿಗೆ ಏರುವ ಸಂದರ್ಭದಲ್ಲಿ ನೈವೇದ್ಯ ತಯಾರು ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಬೆಂಗಳೂರಿನಲ್ಲಿ ಸರಳಿ ಕ್ಯಾಟರಿಂಗ್ ಸೇವೆ ಆರಂಭಿಸುವ ಮೂಲಕ ಹಲವು ಮಂದಿಗೆ ಉದ್ಯೋಗ ಮಾಡಲು ಅವಕಾಶ ನೀಡಿದಲ್ಲದೆ,ದಕ್ಷಿಣ ಭಾರತ- ಉತ್ತರ ಭಾರತದ ಸಸ್ಯಹಾರ ಅಡುಗೆಯಲ್ಲಿ ತನ್ನದೇ ಶೈಲಿಯನ್ನು ಪರಿಚಯಿಸಿದವರು.ಜೊತೆಗೆ ಸ್ಥಳೀಯ ಸಂಪ್ರದಾಯಿಕ ಅಡುಗೆ ಮೂಲಕ ಜನ ಮೆಚ್ಚುಗೆ ಗಳಿಸಿದವರು.
ಹೆಸರಾಂತ ಬಾಣಸಿಗರಾದ ರವಿ ಕುಂಟಿಣಿ ,ಕಿರಣ ಕುಂಟಿಣಿ ಅವರ ಗರಡಿಯಲ್ಲಿ ಸುಮಾರು 18 ವರ್ಷಗಳ ಕಾಲ ಪಲಗಿದ್ದಾರೆ. ಇವರು ಉಪ್ಪಿನಂಗಡಿ ಸಮೀಪದ ಇಳಂತಿಲದ ದಿ. ಮಹಾಬಲೇಶ್ವರ ಭಟ್ ಮತ್ತು ಶ್ರೀ ಮತಿ ಕಮಲಾವತಿ ದಂಪತಿಗಳ ಪುತ್ರ.