ಕೆಲಸಕ್ಕೆಂದು ಹೋದ ಬಿಳಿನೆಲೆಯ ವ್ಯಕ್ತಿ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ

ಕೆಲಸಕ್ಕೆಂದು ಹೋದ ಬಿಳಿನೆಲೆಯ ವ್ಯಕ್ತಿ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ

Kadaba Times News



ಕಡಬ ಟೈಮ್ಸ್, ಬಿಳಿನೆಲೆ:  ಕೆಲಸಕ್ಕೆಂದು ಹೋದ ವ್ಯಕ್ತಿಯೊಬ್ಬರು ಕುಕ್ಕೆ ಸುಬ್ರಹ್ಮಣ್ಯದ ಸವಾರಿ ಮಂಟಪದ ಬಳಿ ಅಸ್ವಸ್ಥಗೊಂಡು ಶವವಾಗಿ ಪತ್ತೆಯಾದ ಘಟನೆ ವರದಿಯಾಗಿದೆ.


ಕಡಬ ತಾಲೂಕು ಬಿಳಿನೆಲೆ ಗ್ರಾಮದ ಚೇರು ನಿವಾಸಿ  ವಿಶ್ವಾನಥ ಗೌಡ( 45ವ) ಮೃತಪಟ್ಟವರು.


ಡಿ. 26ರಂದು   ಸುಬ್ರಹ್ಮಣ್ಯದ ಕುಶಾಲಪ್ಪ ಗೌಡರವರು ಕೂಲಿ ಕೆಲಸಕ್ಕೆಂದು ಕರೆದುಕೊಂಡು ಹೋಗಿದ್ದರು ಎನ್ನಲಾಗಿದೆ. ಅಡುಗೆ ಕೆಲಸಕ್ಕೆಂದು ಹೋಗಿದ್ದು  ಸಂಜೆಯಾದರೂ ಮನೆಗೆ ಬಾರದಿರುವುದನ್ನು ಗಮನಿಸಿ ಅಲ್ಲಿಯೇ ಉಳಿದುಕೊಂಡಿರಬಹುದೆಂದು ಸುಮ್ಮನಾಗಿದ್ದರು.


ಡಿ.27 ರಂದು  ಮುಂಜಾನೆ  ಮೃತ ಪಟ್ಟು ಸುಬ್ರಹ್ಮಣ್ಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿರುವ ಬಗ್ಗೆ ಮನೆಯವರಿಗೆ ವಾಟ್ಸಪ್ ಮೂಲಕ ತಿಳಿದು ಬಂದಿತ್ತು. ವಿಚಾರಿಸಿದಾಗ   ಸುಬ್ರಹ್ಮಣ್ಯ ಗ್ರಾಮದ ಸವಾರಿ ಮಂಟಪದ ಬಳಿ ಅಸ್ವಸ್ಥಗೊಂಡು ಬಿದ್ದು ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.


ಮೃತರ ಮಗ ವಿನ್ಯಾಸ ಎಂಬವರು ನೀಡಿದ ದೂರಿನಂತೆ ಸುಬ್ರಹ್ಮಣ್ಯ ಠಾಣೆ  ಯುಡಿಆರ್ ನಂಬ್ರ: 28/2024 ಕಲಂ:   194(3)(IV) BNSS ಯಂತೆ ಪ್ರಕರಣ ದಾಖಲಾಗಿದೆ.

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top