ಬಿಳಿನೆಲೆ: ಶಿಕ್ಷಕರನ್ನು ನೇಮಿಸುವುದಾಗಿ ಭರವಸೆ ನೀಡಿ ಮಾತು ತಪ್ಪಿದ ಅಧಿಕಾರಿಗಳು: ಗ್ರಾ.ಪಂ ವಠಾರದಲ್ಲಿ ಶಾಲಾ ಮಕ್ಕಳೊಂದಿಗೆ ಊರವರ ಪ್ರತಿಭಟನೆ

Kadaba Times News

 


ಬಿಳಿನೆಲೆ : ಶಾಲೆಗೆ ಶಿಕ್ಷಕರನ್ನು ಒದಗಿಸುವ ಭರವಸೆ ನೀಡಿ ಮಾತು ತಪ್ಪಿದ ಅಧಿಕಾರಿಗಳ  ವಿರುದ್ದ ನ.8 ರಂದು ಶಾಲಾಭಿಮಾನಿಗಳು ಬಿಳಿನೆಲೆ ಗ್ರಾ.ಪಂ ಮುಂಭಾಗ ಪ್ರತಿಭಟನೆ ನಡೆಸಿದ್ದಾರೆ.

 

 ಚೇರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯನ್ನು ಶೈಕ್ಷಣಿಕ ವರ್ಷದಲ್ಲಿ  ಮಕ್ಕಳಿಲ್ಲದ ನೆಪದಲ್ಲಿ ಮುಚ್ಚಲಾಗಿತ್ತು. ಬಳಿಕ ಊರವರು ಅಧಿಕಾರಿಗಳ ಗಮನ ಸೆಳೆದ ಬಳಿಕ   ಅಲ್ಲಿಗೆ ಆತಿಥಿ ಶಿಕ್ಷಕರನ್ನು  ನೇಮಿಸಿ ಕೊಡುವುದಾಗಿ  ಶಿಕ್ಷಣಾಧಿಕಾರಿಗಳು ಭರವಸೆ ನೀಡಿದ್ದರು.


 ಆದರೆ ಓರ್ವ ಮುಖ್ಯ ಶಿಕ್ಷಕರನ್ನು ನೇಮಿಸಿದರೂ  ಅತಿಥಿ ಶಿಕ್ಷಕರನ್ನು ನೇಮಿಸಿದ ಕಾರಣ ಮಕ್ಕಳಿಗೆ ತೊಂದರೆಯಾಗುತ್ತಿದೆ,  ಗ್ರಾಮ ಸಭೆಯಲ್ಲೂ ಪ್ರಸ್ತಾಪಗೊಂಡು ಶಿಕ್ಷರರನ್ನು ನೇಮಿಸುವ ಬಗ್ಗೆ ಭರವಸೆ ನೀಡಿ ಬಳಿಕ ಮಾತು ತಪ್ಪಿದ್ದಾರೆ  ಇನ್ನು   ನಿಯಮ ಬಾಹಿರವಾಗಿ  ಶಾಲೆ ಮುಚ್ಚಲು  ಕಾರಣಕರ್ತರಾದವರ ವಿರುದ್ದ ಯಾವುದೇ ಕ್ರಮ ಜರುಗಿಸಿಲ್ಲ ಎಂಬ ಆರೋಪ ಪ್ರತಿಭಟನಾ ನಿರತರದ್ದಾಗಿದೆ.


ಪ್ರತಿಭಟನೆ ಮುಂದಾಳತ್ವ ವಹಿಸಿದ್ದ  ವಿನೇಶ್ ಬಿಳಿನೆಲೆ  ಅವರು ಮಾತನಾಡಿ , ಊರಿನವರಿಗೆ ಈ ಶಾಲೆ ಬೇಕೆಂಬ ಇರಾದೆ ಇದೆ,ಆದರೆ ಅಧಿಕಾರಿಗಳಿಗೆ ಇಚ್ಚಾಶಕ್ತಿ ಇಲ್ಲದಂತಾಗಿದೆ. ಶಿಕ್ಷಕರ ಒಂದು ತಿಂಗಳ ಸಂಬಳ ಸೇರಿಸಿ ಅತಿಥಿ ಶಿಕ್ಷಕರನ್ನು ನೇಮಿಸಬೆಕು. ಗ್ರಾ.ಪಂಗೆ ಬೇಡಿಕೆ ಈಡೇರಿಸುವಂತೆ ಎರಡು ದಿನದ ಕಾಲಾವಕಾಶ ನೀಡಿದ್ದೆವು.ನಮ್ಮ ಬೇಡಿಕೆ ಈಡೇರದಕ್ಕೆ ಪ್ತತಿಭಟನೆ ನಡೆಸಿದ್ದೇವೆ ಎಂದಿದ್ದಾರೆ.

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top