ಗೋಳಿತೊಟ್ಟು ಗ್ರಾಮದಲ್ಲಿ ನಡೆದ ಘಟನೆ: ವ್ಯಕ್ತಿಯೋರ್ವನ ಕೊಲೆ

ಗೋಳಿತೊಟ್ಟು ಗ್ರಾಮದಲ್ಲಿ ನಡೆದ ಘಟನೆ: ವ್ಯಕ್ತಿಯೋರ್ವನ ಕೊಲೆ

Kadaba Times News
0


ಉಪ್ಪಿನಂಗಡಿ :  ನೆರೆಮನೆಯವರೊಂದಿಗಿನ ಜಗಳ ಕೊಲೆಯಲ್ಲಿ ಅಂತ್ಯವಾದ ಘಟನೆ ನೆಲ್ಯಾಡಿ ಸಮೀಪದ  ಗೋಳಿತ್ತೊಟ್ಟುವಿನಲ್ಲಿ ನಡೆದಿದೆ.

ಕಡಬ ತಾಲೂಕು ಗೋಳಿತ್ತೊಟ್ಟು ಗ್ರಾಮದ ಅಲಾಂತಾಯ ನಿವಾಸಿ ವೆಂಕಪ್ಪ ಗೌಡರ ಪುತ್ರ ರಮೇಶ್ (51 ವ)  ಕೊಲೆಯಾದವರು. 

ನೆರೆಮನೆಯ ಸಂಬಂಧಿ ಹರೀಶ ಎಂಬಾತ ಕತ್ತಿಯಿಂದ ಕಡಿದು   ಕೊಲೆ ಮಾಡಿದ ಆರೋಪಿ  ಎಂದು ತಿಳಿದು ಬಂದಿದೆ.  

 ಕೊಲೆಗೆ ಜಾಗದ ತಕರಾರು ಕಾರಣ ಎನ್ನಲಾಗಿದ್ದು  ಈ ಬಗ್ಗೆ ಖಚಿತ ಮಾಹಿತಿ ತಿಳಿದಿಲ್ಲ, ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿದ್ದಾರೆ. 


ಘಟನೆ ನಡೆದ ಸ್ಥಳದಲ್ಲಿ  ಬೈಕ್ ರಸ್ತೆಯಲ್ಲೇ ಬಿದ್ದಿರುವುದು ಕಂಡು ಬಂದಿದೆ. ಇನ್ನು ಸ್ಥಳದಲ್ಲಿ ಅಧಿಕ ಸಂಖ್ಯೆಯಲ್ಲಿ ಜನ ಸೇರಿದ್ದಾರೆ. ಹೆಚ್ಚಿನ ಮಾಹಿತಿ ಅಪ್ ಡೇಟ್ ಮಾಡಲಾಗುವುದು.


Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top