




![]() |
ಪೆರಿಯಶಾಂತಿ-ಧರ್ಮಸ್ಥಳ ರಸ್ತೆ (KADABA TIMES) |
ಕಡಬ ಟೈಮ್, ಪೆರಿಯಶಾಂತಿ: ಪೆರಿಯಶಾಂತಿ-ಧರ್ಮಸ್ಥಳ-ಉಜಿರೆ ನಡುವಿನ ರಾಷ್ಟ್ರೀಯ ಹೆದ್ದಾರಿಯ ಸ್ಪರ್ ರಸ್ತೆ ನಿರ್ಮಾಣಕ್ಕೆ ಭೂಸ್ವಾಧೀನ ಪ್ರಕ್ರಿಯೆಗೆ ಚಾಲನೆ ದೊರೆತಿದೆ. ರಾಷ್ಟ್ರೀಯ ಹೆದ್ದಾರಿ ಸಚಿವಾಲಯದಿಂದ ಎರಡನೇ ಅಧಿಸೂಚನೆ ಪ್ರಕಟಗೊಂಡಿದ್ದು, 103 ಜಮೀನುಗಳಿಗೆ ಸಂಬಂಧಿಸಿದ ಸರ್ವೆ ನಂಬರ್, ಜಮೀನುಗಳ ವಿಸ್ತೀರ್ಣ ಪ್ರಕಟಿಸಲಾಗಿದೆ.
ಮಂಗಳೂರು-ತುಮಕೂರು ರಾಷ್ಟ್ರೀಯ ಹೆದ್ದಾರಿ 73ರಿಂದ ಉಜಿರೆಯಲ್ಲಿ ಬಲಕ್ಕೆ ಧರ್ಮಸ್ಥಳ ಮಾರ್ಗವಾಗಿ ಪೆರಿಯಶಾಂತಿಗೆ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ನ್ನು ಸಂಪರ್ಕಿಸುವ 28.49 ಕಿ.ಮೀ. ಉದ್ದದ ಸ್ಪರ್ ರಸ್ತೆ ಇದಾಗಿದೆ. ಈಗ ಸಚಿವಾಲಯ ಪ್ರಕಟಿಸಿರುವ ಭೂಸ್ವಾಧೀನ ಅಧಿಸೂಚನೆ ಎರಡನೇ(3ಎ) ಹಂತದ್ದಾಗಿದ್ದು, ಭೂಮಾಲೀಕರ ಅಹವಾಲು ಪರಿಶೀಲನೆ ಬಳಿಕ ಅಂತಿಮ ಅಧಿಸೂಚನೆ(3ಡಿ)ಯನ್ನು ಸಚಿವಾಲಯ ಪ್ರಕಟಿಸಲಿದೆ
ಅಧಿಸೂಚನೆಯಲ್ಲಿ ಏನಿದೆ? ರಸ್ತೆ ನಿರ್ಮಾಣ- ಅಗಲೀಕರಣ ಯೋಜನೆಗೆ ಸಂಬಂಸಿ ಕಟ್ಟಡ ಸಹಿತ ಹಾಗೂ ಕಟ್ಟಡ ರಹಿತ ಸರಕಾರಿ ಮತ್ತು ಖಾಸಗಿ ಭೂಮಿಗಳ ಸ್ವಾಧೀನಕ್ಕಾಗಿ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಅ.22ರಂದು ಅಧಿಸೂಚನೆ ಹೊರಡಿಸಿದೆ. ಕೇಂದ್ರ ಸರಕಾರದ ರಾಷ್ಟ್ರೀಯ ಹೆದ್ದಾರಿ ಕಾಯಿದೆ 1956 (1956ರ 48)ರ ಪ್ರಕಾರ ನಿಯಮ 3ಎ ಉಪನಿಯಮ(1)ರಲ್ಲಿ ದತ್ತವಾದ ಅಧಿಕಾರವನ್ನು ಚಲಾಯಿಸಿ ಜಮೀನುಗಳ ಭೂಸ್ವಾಧೀನಕ್ಕೆ ಸೂಚನೆ ನೀಡಲಾಗಿದೆ. ಜಮೀನುಗಳ ಮಾಲೀಕರು ಅಥವಾ ಸಂಬಂಧಪಟ್ಟವರು ಪ್ರಕಟಣೆಯ 21 ದಿನಗಳೊಳಗೆ ಕಾಯಿದೆಯ ಕಲಂ 3ಸಿ(1)ರಂತೆ ಆಕ್ಷೇಪಣೆ ಸಲ್ಲಿಸಲು ಅವಕಾಶವಿದೆ.
ವಿಶೇಷ ಭೂಸ್ವಾಧೀನಾಕಾರಿ ಮತ್ತು ಸಕ್ಷಮ ಪ್ರಾಧಿಕಾರಿ, ರಾಷ್ಟ್ರೀಯ ಹೆದ್ದಾರಿಗಳು - 73 ಮತ್ತು 275, ವಿಠಲ್ ಆರ್ಕೇಡ್ ಒಂದನೇ ಮಹಡಿ, ಕೊಟ್ಟಾರಚೌಕಿ, ಅಶೋಕ ನಗರ, ಮಂಗಳೂರು-575006 ಇಲ್ಲಿಗೆ ಲಿಖಿತವಾಗಿ ಸಕಾರಣಗಳೊಂದಿಗೆ ಆಕ್ಷೇಪಣೆಗಳಿದ್ದರೆ ಸಲ್ಲಿಸಬಹುದು. ಸಕ್ಷಮ ಪ್ರಾಕಾರಿಗಳು ಆಕ್ಷೇಪಣೆ ಸಲ್ಲಿಸಿದವರನ್ನು ಅಥವಾ ಅವರ ವಕೀಲರ ಮೂಲಕ ವಿಚಾರಣೆ ನಡೆಸಿ ಪರಿಶೀಲನೆ ನಡೆಸುತ್ತಾರೆ. ಕಾಯಿದೆಯ ಕಲಂ 3(ಸಿ)(2)ರ ಅನ್ವಯ ವಿಶೇಷ ಭೂಸ್ವಾಧೀನಾಕಾರಿ ಹಾಗೂ ಸಕ್ಷಮ ಪ್ರಾಕಾರಿ ವಿಚಾರಣೆ ನಡೆಸಿ ಹೊರಡಿಸುವ ಆದೇಶ ಅಂತಿಮವಾಗಿರುತ್ತದೆ ಎಂದು ಆದೇಶದಲ್ಲಿತಿಳಿಸಲಾಗಿದೆ.
ಜಮೀನು ಮಾರಾಟ ಮಾಡುವಂತಿಲ್ಲ: ಹೆದ್ದಾರಿ ಸಚಿವಾಲಯ ಪ್ರಕಟಿಸಿರುವ ಅಧಿಸೂಚನೆಯಲ್ಲಿ ಒಳಗೊಂಡಿರುವ ಜಮೀನುಗಳನ್ನು ಮಾರುವಂತಿಲ್ಲಅಥವಾ ಲೀಸ್ಗೆ ನೀಡುವಂತಿಲ್ಲ. ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವಂತಿಲ್ಲಎಂದು ಆದೇಶದಲ್ಲಿ ತಿಳಿಸಲಾಗಿದೆ.
ಮೊದಲ ಅಧಿಸೂಚನೆ : ಈ ರಸ್ತೆಯ ಕುರಿತು ಮಾ.12ರಂದು ಮೊದಲ ಬಾರಿ ಅಧಿಸೂಚನೆ ಹೊರಡಿಸಲಾಗಿತ್ತು. ಆಗ ಸುಮಾರು 14 ಹೆಕ್ಟೇರ್ ಜಾಗವನ್ನು ಸೇರ್ಪಡೆಗೊಳಿಸಲಾಗಿತ್ತು. ಆದರೆ, ಈಗ ಪ್ರಕಟಗೊಂಡಿರುವ ಅಧಿಸೂಚನೆಯಲ್ಲಿ 11.92 ಎಕರೆ ಮಾತ್ರ ಕಾಣಿಸಲಾಗಿದೆ. ಅಂತಿಮ ಅಧಿಸೂಚನೆ (3ಡಿ) ಪ್ರಕಟವಾಗುವ ಹೊತ್ತಿಗೆ ಇನ್ನಷ್ಟು ಜಮೀನು ಕಡಿಮೆಯಾಗಬಹುದು ಎಂದು ನಿರೀಕ್ಷಿಸಲಾಗಿದೆ. ಈಗ ಪ್ರಕಟಗೊಂಡಿರುವ ಅಧಿಸೂಚನೆ ಪ್ರಕಾರ ಒಳಗೊಂಡಿರುವ ಜಮೀನುಗಳ ವಿವರ ಗ್ರಾಮವಾರು ಈ ಕೆಳಗೆ ನೀಡಲಾಗಿದೆ.
ಭೂಸ್ವಾಧೀನ
ಅಧಿಸೂಚನೆ ಪ್ರಕಟಗೊಂಡಿದೆ. ಸದ್ಯದಲ್ಲಿ3ಡಿ ನಕ್ಷೆ ಹಾಗೂ 3ಜಿ ಅವಾರ್ಡ್ ಆದ ತಕ್ಷಣವೇ ಸ್ವಾಧೀನ ಪ್ರಕ್ರಿಯೆ ಆರಂಭಿಸುತ್ತೇವೆ. ಟೆಂಡರ್ ಪ್ರಕ್ರಿಯೆ ಆರಂಭವಾಗಿದ್ದು 8 ಗುತ್ತಿಗೆದಾರರು, ಟೆಂಡರ್ ಸಲ್ಲಿಸಿದ್ದಾರೆ ಎಂದು ಮಂಗಳೂರು ರಾಷ್ಟ್ರೀಯ ಹೆದ್ದಾರಿ ಪ್ರಾಕಾರ ವಿಭಾಗದ
ಎಕ್ಸಿಕ್ಯೂಟಿವ್ ಎಂಜಿನಿಯರ್
ಶಿವಪ್ರಸಾದ್ ತಿಳಿಸಿದ್ದಾರೆ.