




ಕಡಬ: ಕಡಬ ತಾಲೂಕಿಗೆ ಸರಕಾರಿ ಮೌಲಾನ ಅಜಾದ್ ಮಾದರಿ ಆಂಗ್ಲ ಮಾಧ್ಯಮ ಶಾಲೆ ಮಂಜೂರಾತಿಯಾಗಿದ್ದು ಈ ಬಗ್ಗೆ ಅಲ್ಪಸಂಖ್ಯಾತರ ಕಲ್ಯಾಣ ಹಜ್ ಮತ್ತು ವಕ್ಪ್ ಇಲಾಖೆಯ ಅಧೀನ ಕಾರ್ಯದರ್ಶಿ ನಾಗರಾಜ ಅವರು ಆದೇಶ ಹೊರಡಿಸಿದ್ದಾರೆ.
ಈ
ಬೆನ್ನಲ್ಲೇ ದ.ಕ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯು
ಪುತ್ತೂರು ಮೌಲಾನ ಅಜಾದ್ ಮಾದರಿಯ ಮುಖ್ಯೋಪಾಧ್ಯಯರಾದ ಅವಿನಾಶ್ ಟಿ.ಸಿ ಅವರನ್ನು ಕಡಬಕ್ಕೆ ಹೆಚ್ಚುವರಿ ಪ್ರಭಾರ ಜವಾಬ್ದಾರಿ ನೀಡಿ ಅದೇಶ ಹೊರಡಿಸಿದೆ.
ಶಾಲೆಗೆ
ಸ್ಥಳ ಎಲ್ಲಿ?: ಕಡಬದಲ್ಲಿ ನೂತನವಾಗಿ ನಿರ್ಮಾಣಗೊಂಡು
ವಿದ್ಯಾರ್ಥಿಗಳು ಇಲ್ಲದೆ ಬಂಗಲೆಯಂತಿರುವ ಅಲ್ಪಸಂಖ್ಯಾತ ಹಾಸ್ಟೇಲ್ ನಲ್ಲಿ ಶಾಲೆ ಆರಂಭವಾಗಲಿದೆ. ಎಲ್ಲವೂ ಅಂದುಕೊಂಡಂತೆ
ನಡೆದರೆ ಈ ವರ್ಷದಿದಂದಲೇ ಆರನೇ ತರಗತಿಗೆ ಪ್ರವೇಶ ದೊರೆಯಲಿದೆ ಎಂದು ತಾ.ಪಂ ಮಾಜಿ ಸದಸ್ಯ ಪಝಲ್ ಕೋಡಿಂಬಾಳ
ತಿಳಿಸಿದ್ದಾರೆ.
ಈಗಾಗಲೇ
ರಾಜ್ಯದಲ್ಲಿ 50 ಹೊಸ ಅಲ್ಪಸಂಖ್ಯಾತರ ಮೌಲಾನ ಅಜಾದ್
ಮಾದರಿ ಶಾಲೆಗಳನ್ನು ತೆರೆಯಲು ಸರಕಾರ ಮಂಜೂರಾತಿ ನೀಡಿ, ಅಗತ್ಯ ಹುದ್ದೆಗಳನ್ನು ಸೃಜಿಸಿ ಭರ್ತಿ ಮಾಡಲು
ಸರಕಾರ ಆದೇಶ ನೀಡಿದೆ. ಮೌಲಾನ ಆಜಾದ್ ಶಾಲೆಗೆ 7 ಹುದ್ದೆಗಳಂತೆ ಒಟ್ಟು 350 ಬೋಧಕ ಹುದ್ದೆಗಳನ್ನು
ಸೃಷ್ಟಿಸಲಾಗಿದ್ದು ಈ ಬಗ್ಗೆಯೂ ಆದೇಶ ನೀಡಲಾಗಿದೆ. ಈ ಪೈಕಿ ದ.ಕ. ಜಿಲ್ಲೆಯಲ್ಲಿ ಉಳ್ಳಾಲ, ಮಂಗಳೂರಿನ
ಮಲ್ಲೂರು ಹಾಗೂ ಕಡಬದಲ್ಲಿ ಶಾಲೆ ಮಂಜೂರಾಗಿದೆ.
ಕಡಬದ
42 ಗ್ರಾಮಗಳನ್ನೊಳಗೊಂಡ ಅಲ್ಪಸಂಖ್ಯಾತರ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಇರುವುದನ್ನು ಪರಿಗಣಿಸಿ ವಿದ್ಯಾರ್ಥಿಗಳ ಉನ್ನತಿಕರಣಕ್ಕೆ ಮೌಲಾನ ಅಜಾದ್ ಆಂಗ್ಲ ಮಾಧ್ಯಮ ಶಾಲೆಯ ಬೇಡಿಕೆಯನ್ನು ಸಚಿವರಾದ ಜಮೀರ್ ಅಹ್ಮದ್ ಮತ್ತು ಸ್ವೀಕರ್ ಯು.ಟಿ.ಖಾದರ್ ಮತ್ತು ಕಡಬದ ಜನಸ್ಪಂಧನ ಸಭೆಯಲ್ಲಿ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರಿಗೆ ತಾ.ಪಂ ಮಾಜಿ ಸದಸ್ಯ
ಪಝಲ್ ಕೋಡಿಂಬಾಳ ಸಲ್ಲಿಸಿದ್ದರು. ಅದರ ಫಲವಾಗಿ ಈ ಶಾಲೆ ಮಂಜೂರಾತಿ ಆಗಿದೆ.
ಪ್ರವೇಶ ಪಡೆಯುವುದು ಹೇಗೆ?:
ಅಲ್ಪಸಂಖ್ಯಾರ ಕಲ್ಯಾಣ ಇಲಾಖೆ ವತಿಯಿಂದ ಕಡಬದಲ್ಲಿ
ಕಾರ್ಯನಿರ್ವಹಿಸಲಿರುವ ಮೌಲಾನಾ ಆಜಾದ್ ಮಾದರಿ ಶಾಲೆಗೆ 2023-24ನೇ ಸಾಲಿನ 6ನೇ ತರಗತಿ ಉಚಿತ ಪ್ರವೇಶಕ್ಕೆ ಆಂಗ್ಲ ಮಾಧ್ಯಮ ಶಾಲೆಗೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿಸಲ್ಲಿಸಬಹುದಾಗಿದೆ.
ವಿದ್ಯಾರ್ಥಿಗಳು ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಸಿಖ್ಖ್, ಬೌದ್ಧ ಮತ್ತು ಪಾರ್ಸಿ ಸಮುದಾಯಕ್ಕೆ ಸೇರಿರಬೇಕು. ಸರ್ಕಾರದ ಅಥವಾ ಅಂಗೀಕೃತ ಶಾಲೆಗಳಲ್ಲಿ 5ನೇ ತರಗತಿ ಉತ್ತೀರ್ಣರಾಗಿರಬೇಕು. ಅಲ್ಪಸಂಖ್ಯಾತರ ವರ್ಗಗಳಿಗೆ ಶೇಕಡಾ 75 ರಷ್ಟು ಮತ್ತು ಹಿಂದುಳಿದ ವರ್ಗದವರಿಗೆ ಶೇಕಡ 25 ರಷ್ಟು ಮೀಸಲಾತಿ ಇರುತ್ತದೆ. ಹೆಚ್ಚಿನ
ಮಾಹಿತಿಗಾಗಿ ನಿಯೋಜನೆಗೊಂಡ ಮುಖ್ಯೋಪಾಧ್ಯಯರಾದ ಅವಿನಾಶ್
ಟಿ.ಸಿ ( ಮೊಬೈಲ್ ಸಂಖ್ಯೆ 8660948731) ಸಂಖ್ಯೆಯನ್ನು ಸಂಪರ್ಕಿಸಬಹುದು.