ಕೊಕ್ಕಡದ ಸೌತಡ್ಕ ದೇಗುಲಕ್ಕೆ ಹಿಂದೂ ಯುವತಿ ಜೊತೆ ಬಂದ ಯುವಕ: ಪೊಲೀಸರಿಗೆ ಒಪ್ಪಿಸಿದ ಹಿಂದೂ ಸಂಘಟನೆಯ ಕಾರ್ಯಕರ್ತರು

Kadaba Times News

 


ಕೊಕ್ಕಡ:ಶ್ರೀ ಕ್ಷೇತ್ರ ಮಹಾಗಣಪತಿ ಸೌತಡ್ಕ ಕ್ಷೇತ್ರಕ್ಕೆ ಹಿಂದೂ ಯುವತಿ ಜೊತೆ ಯುವಕನೋರ್ವ ಕಾಣಿಸಿಕೊಂಡಿದ್ದು ಹಿಂದೂಪರ ಸಂಘಟನೆಯ ಕಾರ್ಯಕರ್ತರು ಪೊಲೀಸರಿಗೆ ಒಪ್ಪಿಸಿದ ಘಟನೆ ಶನಿವಾರ ನಡೆದಿದೆ.

 

ಕೊಪ್ಪಳ ಮೂಲದ   ಯುವಕ  ಮತ್ತು ಬೆಂಗಳೂರು ಮೂಲದ ಹಿಂದೂ ಯುವತಿ ಕೊಕ್ಕಡದಿಂದ ರಿಕ್ಷಾದ ಮೂಲಕ ಸೌತಡ್ಕ ದೇವಸ್ಥಾನಕ್ಕೆ ಬಂದು ರಿಕ್ಷಾದಿಂದ ಇಳಿದಿದ್ದರು.


ಆಟೋ ಚಾಲಕನಿಗೆ   ಫೋನ್ ಪೇ ಮೂಲಕ ಹಣ ಪಾವತಿಸಿದಾಗ ಹುಡುಗನ ಹೆಸರು ಬೇರೆ ಸಮುದಾಯಕ್ಕೆ ಸೇರಿರುವ ಮಾಹಿತಿ   ತಿಳಿದು ಬಂದಿದ್ದು  ಕೂಡಲೇ  ರಿಕ್ಷಾ ಚಾಲಕ ಹಿಂದೂ ಸಂಘಟನೆಗಳ ಗಮನಕ್ಕೆ ತಂದಿದ್ದಾರೆ.


ಅನ್ಯ ಕೋಮಿನ ಜೋಡಿಯನ್ನು ಹಿಡಿದು ಪೊಲೀಸರಿಗೋಪ್ಪಿಸಿದ ಹಿಂದೂ ಸಂಘಟನೆಯ ಕಾರ್ಯಕರ್ತರು   ಯುವಕ ಮತ್ತು ಯುವತಿಯ ಮನೆಯವರನ್ನು ಕರೆಯಿಸಿದ ನಂತರವೇ  ಬಿಟ್ಟು ಕಳುಹಿಸಬೇಕು ಎಂದು ಒತ್ತಾಯಿಸಿದ್ದಾರೆ. ಧರ್ಮಸ್ಥಳ ಠಾಣೆಯ ಪೊಲೀಸರು ಠಾಣೆಗೆ ಕರೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.


#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top