


![]() |
ಬಂಧಿತ ವಾರೆಂಟ್ ಆರೋಪಿ(KADABA TIMES) |
ಕಡಬ:ಕತ್ತಿಯಿಂದ ಚುಚ್ಚಿ ಹಲ್ಲೆಗೈದು ಜೀವ ಬೆದರಿಕೆ ಒಡ್ಡಿದ ಪ್ರಕರಣಗಳಲ್ಲಿ ಭಾಗಿಯಾಗಿ ಹೊರ ರಾಜ್ಯದಲ್ಲಿ ತಲೆ ಮರೆಸಿಕೊಂಡಿದ್ದ ವಾರೆಂಟ್ ಆರೋಪಿಯನ್ನು ಕಡಬ ಪೊಲೀಸರು ಪತ್ತೆ ಹಚ್ಚಿ ದಸ್ತಗಿರಿ ಮಾಡಿದ್ದಾರೆ.
ಕಡಕಲ್ ತಾಲೂಕು ಕುನ್ನಪುರಂ ನಿವಾಸಿ ವಾರೆಂಟ್ ಆರೋಪಿ ಅಜಿತನ್ ಬಂಧಿತ ವ್ಯಕ್ತಿ. ಕಳೆದ 2 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆ ಮರೆಸಿಕೊಂಡಿದ್ದ. ಕೊಲ್ಲಂಕೇರಳ ರಾಜ್ಯದ ತಿರುವನಂತಪುರದಲ್ಲಿ ಪೊಲೀಸರು ದಸ್ತಿಗಿರಿ ಮಾಡಿ ಪುತ್ತೂರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.
ಉಪ್ಪಿನಂಗಡಿ ವೃತ್ತ ನಿರೀಕ್ಷರ ನಿರ್ದೇಶನಂತೆ ಕಡಬ ಎಸ್.ಐ ಅಭಿನಂದನ್ ಅವರ ಮಾರ್ಗದರ್ಶನದಂತೆ ಠಾಣಾ ಎಚ್.ಸಿ ರಾಜು ನಾಯ್ಕ್, ಪಿಸಿ ಸಿರಾಜುದ್ದೀನ್, ಪಿಸಿ ವಿನೋದ್ ಪತ್ತೆ ಹಚ್ಚಿ ದಸ್ತಿಗಿರಿ ಮಾಡಿದ್ದಾರೆ.
ಪ್ರಕರಣದ
ಹಿನ್ನೆಲೆ: ಆರೋಪಿ ರಬ್ಬರ ಟ್ಯಾಪಿಂಗ್ ವೃತ್ತಿ ಮಾಡಿಕೊಂಡಿದ್ದು ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು.
ಈತನ ಜೊತೆಯಲ್ಲಿ ಪರಿಜಯಸ್ಥ ಬಂಟ್ರ ಗ್ರಾಮದ ಪ್ರಸಾದ್ ಎಂಬವರು ಮಾತನಾಡುವ ವೇಳೆ ಅಮಾಲು ಪದಾರ್ಥ ಹೆಚ್ಚಾಗಿ ನೀಡಿಲ್ಲವೆಂದು
ತಗಾದೆ ತೆಗೆದು ಟ್ಯಾಪಿಂಗ್ ಮಾಡುವ
ಕತ್ತಿಯಿಂದ ಚುಚ್ಚಿರುವುದಾಗಿ ಆರೋಪಿಸಲಾಗಿತ್ತು.ಗಾಯಗೊಂಡ
ವ್ಯಕ್ತಿ ಮಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಈ ಬಗ್ಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.