


ಕಡಬ:ಕರ್ನಾಟಕ ರಾಜ್ಯ ಉಪವಲಯ ಅರಣ್ಯ ಅಧಿಕಾರಿಗಳ ಸಂಘ ಮಂಗಳೂರು ವಿಭಾಗ ಇದರ ವತಿಯಿಂದ ವನ್ಯಜೀವಿ ಸಪ್ತಹ ಪ್ರಯುಕ್ತ ಜಿಲ್ಲಾಮಟ್ಟದ ಚಿತ್ರಕಲಾ ಸ್ಪರ್ಧೆಯ ಆಯ್ಕೆಯ ಸಲುವಾಗಿ ತಾಲೂಕು ಮಟ್ಟದ ಚಿತ್ರಕಲಾ ಸ್ಪರ್ಧೆಯು ಕಡಬದ ಸೈಂಟ್ ಜೋಕಿಮ್ ಸಭಾಭವನದಲ್ಲಿ ನಡೆಯಿತು
ಸುಬ್ರಹ್ಮಣ್ಯ
ವಲಯ ಅರಣ್ಯ ಅಧಿಕಾರಿ ವಿಮಲ್ ಬಾಬು
ಅವರು ಅಧ್ಯಕ್ಷತೆವಹಿಸಿ
ಮಾತನಾಡಿ ಪರಿಸರ ಸಂರಕ್ಷಣೆಯ ಮತ್ತು ವನ್ಯಜೀವಿಗಳ ಮಹತ್ವದ ತಿಳಿಸಿದರು. ಉಪ ವಲಯ ಅರಣ್ಯ ಅಧಿಕಾರಿಗಳ ಸಂಘದ
ಗೌರವಧ್ಯಕ್ಷ ಸಂತೋಷ್ ರೈ, ಸೈಂಟ್ ಜೋಕಿಮ್ಸ್ ವಿದ್ಯಾಸಂಸ್ಥೆಗಳ ಚಿತ್ರಕಲಾ ಶಿಕ್ಷಕ ಸತೀಶ್ ಪಂಜ ಉಪಸ್ಥಿತರಿದ್ದರು.
ಡಿ.ಸಿ.ಎಫ್ ಅಂಟೋನಿ ಮರಿಯಪ್ಪ ಅವರು
ವಿದ್ಯಾರ್ಥಿಗಳಿಗೆ
ಪರಿಸರದ ಬಗ್ಗೆ ಅರಿವು ಮೂಡಿಸಿದರು. ಕಾರ್ಯಕ್ರಮದಲ್ಲಿ
ಸುಬ್ರಹ್ಮಣ್ಯ ವಲಯ
ಎ. ಸಿ. ಎಫ್ ಪ್ರವೀಣ್ ಕುಮಾರ್,
ಯಶೋಧರ (ಡಿ ವೈ ಆರ್ ಎಫ್ ಪಂಜ ವಲಯ), ಅಜಿತ್ ಕುಮಾರ್ (ಡಿ ವೈ ಆರ್ ಎಫ್ ಪಂಜ ವಲಯ)
, ಪ್ರಕಾಶ್ ಅಗಸಿ ಮನಿ (ಪಂಜ ವಲಯ೦
ಯೋಗೀಶ್ ಜಿ. ಸಿ ( ಡಿ ವೈ ಆರ್ ಎಫ್ ಸುಬ್ರಹ್ಮಣ್ಯ ವಲಯ)
, ಮೋತಿಲಾಲ್ (ಡಿ ವೈ ಆರ್ ಎಫ್ ಸುಬ್ರಮಣ್ಯ ವಲಯ)
, ಶಿವಾನಂದ ಶಿಂಪಿ( ಸುಬ್ರಹ್ಮಣ್ಯ ವಲಯ) ಉಪಸ್ಥಿತರಿದ್ದರು
ಚಿತ್ರಕಲಾ ಸ್ಪರ್ಧೆಯಲ್ಲಿ ಸುಮಾರು 170 ವಿದ್ಯಾರ್ಥಿಗಳು ಭಾಗವಹಿಸಿದ್ದು
ಅವರಿಗೆ ಪ್ರಮಾಣ ಪತ್ರ ನೀಡಲಾಯಿತು .ಅರಣ್ಯ
ಇಲಾಖೆಯ ಅಧಿಕಾರಿಗಳಾದ ಯೋಗೀಶ್ ಜಿ ಸ್ವಾಗತಿಸಿ, ಅಜಿತ್ ಕುಮಾರ್ ವಂದಿಸಿದರು.
ಯಶೋಧರ ಕಾರ್ಯಕ್ರಮ ನಿರೂಪಿಸಿದರು.