ಸುಳ್ಯದಲ್ಲಿ ಸಂಸದ ಯುದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ : ತನ್ನ ಮುಂದಿನ ಯೋಜನೆ ಬಗ್ಗೆ ಹೇಳಿದ್ದೇನು?

Kadaba Times News

 ಕಡಬ ಟೈಮ್ಸ್: ಸಹಕಾರ ಸಂಘಗಳು ಭಾರತದಲ್ಲಿನ ಅತ್ಯದ್ಭುತ ವ್ಯವಸ್ಥೆ, ಜನರಿಗೆ ಸ್ವಾವಲಂಬಿ ಬದುಕು ಕಲ್ಪಿಸಿದೆ ಎಂದು ಮೈಸೂರುಕೊಡಗು ಲೋಕಸಭಾ  ಸಂಸದ ಯುದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್  ಅಭಿಪ್ರಾಯ ಪಟ್ಟವರು.

ಅವರು ಸೆ 10 ರಂದು ಸುಳ್ಯ ಪೆರಾಜೆಯ ಖಾಸಗಿ ಕಾರ್ಯಕ್ರಮವೊಂದರಲ್ಲಿ   ನೂತನ ಸಭಾಭವನ ಮತ್ತು ಕಛೇರಿ ಉದ್ಘಾಟಿಸಿ  ಮಾತನಾಡಿದರು. 



ಸುಳ್ಯ ಭಾಗಕ್ಕೆ ನಾನು ಈ ಹಿಂದೆ ಬೇಟಿ ನೀಡಿ ಇಲ್ಲಿಯ ಯಕ್ಷಗಾನದ ಸವಿಯನ್ನು ಅನುಭವಿಸಿದ್ದೇನೆ,   ಇಲ್ಲಿನ ಜ್ವಲಂತ ಸಮಸ್ಯೆಗಳ ಅರಿವಿದೆ, ಎಲ್ಲಾ  ಸಮಸ್ಯೆಗಳ ಪರಿಹಾರಕ್ಕೆ ಪ್ರಯತ್ನಿಸುತ್ತೇನೆ ಎಂದರಲ್ಲದೆ,  ಕೊಡಗು- ಮೈಸೂರು ರೈಲು ಸಂಪರ್ಕ ವ್ಯವಸ್ಥೆ ಮುಂದಿನ ಯೋಜನೆಯಿದೆ.

 ಕೊಡಗಿನ ಕಾಫೀ ಬೆಳೆಗಾರರ ಸಮಸ್ಯೆ ಸೇರಿದಂತೆ ಹಲವು ಸಮಸ್ಯೆಗಳು ಇವೆ,  ಮುಂದೆ ಮಡಿಕೇರಿಯಲ್ಲೂ ಕಚೇರಿ ತೆರೆದು, ಭಾಗದ ಜನರ ಸಮಸ್ಯೆಗೆ ಸ್ಪಂದಿಸುವ ಕೆಲಸ ಮಾಡುತ್ತೇವೆ,ಮುಂದಿನ ದಿನದಲ್ಲಿ ಪ್ರಧಾನಿಯವರ  ಚಿಂತನೆಯಂತೆ  2047 ಹೊತ್ತಿಗೆ ಭಾರತ ಶೇಷ್ಟ ಭಾರತವಾಗುತ್ತಾ  ಸಾಗಲು ಎಲ್ಲರೂ ಸಹಕಾರಬೇಕಾಗಿದೆ, ಕೊಡಗು - ಮೈಸೂರು ಮಾದರೀ ಕ್ಷೇತ್ರವಾಗಿಸುವ ಗುರಿ ಹೊಂದೆದ್ದೇನೆ  ಎಂದಿದ್ದಾರೆ.

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top