




ಕಡಬ ಟೈಮ್ಸ್: ಇಲ್ಲಿನ ಸರಕಾರಿ ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕದ 2024 ನೇ ಸಾಲಿನ ವಾರ್ಷಿಕ ವಿಶೇಷ ಶಿಬಿರವನ್ನು ಸಮಾಜ ಸೇವಕ ಕರುಣಾಕರ ಗೋಗಟೆ ನಾಡೋಳಿ ನೆರವೇರಿಸಿ ಮಾತನಾಡಿದರು.
ಶ್ರೀ ವಿಶ್ವನಾಥ ಶೆಟ್ಟಿ ಉಪನ್ಯಾಸಕರು ಮತ್ತು ಕಾರ್ಯಕ್ರಮಾಧಿಕಾರಿ ಸಂತ ಜೋರ್ಜ್ ಪದವಿಪೂರ್ವ ಕಾಲೇಜು ನೆಲ್ಯಾಡಿ ಅತಿಥಿಗಳಾಗಿ ಶಿಬಿರಾರ್ಥಿ ಗಳಿಗೆ ತಮ್ಮ ಅನುಭವದ ಹಿತವಚನಗಳನ್ನು ನುಡಿದರು.
ಕಡಬ ನೂಜಿಬಾಳ್ತಿಲ ಕ್ಲಿಷ್ಟ ರ್ ಸಿ.ಆರ್.ಪಿ ಶ್ರೀ ಗಣೇಶ್ ನಡುವಾಲ್,ಶ್ರೀ ರಾಮಕೃಷ್ಣ ಮಲ್ಲಾರ, ಅಧ್ಯಕ್ಷರು ಪ್ರಾಥಮಿಕ ಶಾಲಾಶಿಕ್ಷಕರಸಂಘ ಕಡಬ,ಶ್ರೀ ಇ.ಸಿ.ಚೆರಿಯಾನ್ ನಿವೃತ್ತ ಪ್ರಾಂಶುಪಾಲರು,ಶ್ರೀ ಶಿವಪ್ರಸಾದ ಮೈಲೇರಿ, ಅಧ್ಯಕ್ಷರು ಯುವಜನ ಒಕ್ಕೂಟ ರಿ ಕಡಬ ತಾಲೂಕು,ಶ್ರೀ ದಯಾನಂದ ಉಂಡಿಲ ಅಧ್ಯಕ್ಷರು ಪೂರ್ವ ವಿನದ್ಯಾರ್ಥಿ ಸಂಘ, ಅತಿಥಿಗಳಾಗಿ ಮಾತನಾಡಿದರು.ಶಿಬಿರದ ಸಂಚಾಲಕರಾದ ಶ್ರೀ ಕಾಶಿನಾಥ ಗೋಗಟೆ ಶಿಬಿರದ ಆಯೋಜನೆಯ ಉದ್ದೇಶ ಮತ್ತು ಅಗತ್ಯಗಳನ್ನು ತಿಳಿಸಿದರು.