ಕಡಬ ತಹಶಿಲ್ದಾರ್ ಪ್ರಕಟಣೆ:ಸೆ.16 ರವರೆಗೆ ಪಹಣಿಗಳಿಗೆ ಆಧಾರ್ ಜೋಡಣೆ ಆಂದೋಲನ

Kadaba Times News

 ಕಡಬ: ರೈತರಿಗೆ ನಿಗದಿತ ಸಮಯದಲ್ಲಿ ಸರ್ಕಾರದ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಆಧಾರ್ ಕಾಯ್ದೆಗಳಡಿ ಆಧಾರ್ ಜೋಡಣೆ ಮಾಡಲು ಅವಕಾಶ ಕಲ್ಪಿಸಲಾಗಿತ್ತು. 


ಆದರೆ ಕಡಬ ತಾಲೂಕಿನಲ್ಲಿ ಆಧಾರ್ ಜೋಡಣೆ ಪ್ರಗತಿ ಕಡಿಮೆಯಾಗಿರುವ ಕಾರಣ ಕಡಬ ತಾಲೂಕಿನಾದ್ಯಂತ ಸೆಪ್ಟಂಬರ್.16 ರವರೆಗೆ ಆಂದೋಲನ ಹಮ್ಮಿಕೊಳ್ಳಲಾಗಿದೆ.


ಆಧಾರ್‌ ಜೋಡನೆ ಬಾಕಿಯಿರುವ ಖಾತದಾರರು ಪಹಣಿಗಳೊಂದಿಗೆ ತಮ್ಮ ಗ್ರಾಮ ಆಡಳಿತಾಧಿಕಾರಿ ಕಚೇರಿಗೆ ತೆರಳಿ ಆಧಾರ್ ಜೋಡಣೆ ಮಾಡಿಕೊಳ್ಳಬೇಕಾಗಿ ಕಡಬ ತಹಶೀಲ್ದಾರ್ ಪ್ರಭಾಕರ ಖಜೂರೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top