ಓಮ್ನಿ ಕಾರಿನಲ್ಲಿ ಕೊಳೆತ ಸ್ಥಿತಿಯಲ್ಲಿದ್ದ ಶವದ ಗುರುತು ಪತ್ತೆ ಹಚ್ಚಿದ ಪೊಲೀಸರು

Kadaba Times News

 ಕಡಬ ಟೈಮ್ :ಸುಳ್ಯದ  ಪರಿವಾರಕಾನದಲ್ಲಿ ಕಲ್ಲುಮುಟ್ಲು ಕಡೆಗೆ ಹೋಗುವ ರಸ್ತೆ ಬದಿ ನಿಲ್ಲಿಸಲ್ಪಟ್ಟಿದ್ದ ಓಮ್ನಿ ಕಾರಿನಲ್ಲಿ  ಪತ್ತೆಯಾದ ಕೊಳೆತ ಸ್ಥಿತಿಯಲ್ಲಿದ್ದ ಶವದ  ಗುರುತು ಪತ್ತೆಯಾಗಿದೆ.


ಕಾರಿನಲ್ಲಿ  ಮೃತಪಟ್ಟ ಯುವಕ ಕಲ್ಲುಮುಟ್ಲು ನಿವಾಸಿ ಮನೋಹರ್ ಎಂದು ಪೊಲೀಸರು ಮಾಹಿತಿ ಕಲೆ ಹಾಕಿ ಗುರುತಿಸಿದ್ದಾರೆ.



ಅಮಲು ಪದಾರ್ಥ ಸೇವಿಸುವ ಚಟ ಹೊಂದಿದ್ದ ಇವರು  ಮನೆಗೆ ಹೆಚ್ಚಾಗಿ ಹೋಗುತ್ತಿರಲಿಲ್ಲ ಎನ್ನಲಾಗಿದ್ದು ಹೀಗಾಗಿ ಮನೆಯವರು ವಿಚಾರಿಸುವ ಕೆಲಸಕ್ಕೆ ಮುಂದಾಗಿರಲಿಲ್ಲ ಎಂಬ ಮಾಹಿತಿ ಲಭಿಸಿದೆ.ಹೀಗಾಗಿ ಓಮ್ನಿಯೊಳಗೆ ಮೃತಪಟ್ಟು ಮೂರ್ನಾಲ್ಕು ದಿನವಾಗಿದ್ದರೂ ಮನೆಯವರು ಹುಡುಕಲಾಗಲೀ, ಪೋಲೀಸ್ ದೂರು ನಿಡುವ ಪ್ರಯತ್ನಕ್ಕೆ ಮುಂದಾಗಲಿಲ್ಲ.  


ಆತನ ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ. ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಮೃತ  ವ್ಯಕ್ತಿಗೆ ಪತ್ನಿ ಮತ್ತು ಮಕ್ಕಳು ಇರುವುದಾಗಿ ಪೊಲೀಸರ ಪರಿಶೀಲನೆ ವೇಳೆ ಗೊತ್ತಾಗಿದೆ.

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top