ಕಡಬ: ಕೋಡಿಂಬಾಳದಲ್ಲಿ ರಸ್ತೆದಾಟಲು ನಿಂತಿದ್ದ ವ್ಯಕ್ತಿಗೆ ಸ್ಕೂಟರ್ ಢಿಕ್ಕಿ: ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಪಾದಚಾರಿ ಮೃತ್ಯು

Kadaba Times News

 ಕಡಬ: ರಸ್ತೆದಾಟಲು ನಿಂತಿದ್ದ ವೃದ್ದರೊಬ್ಬರಿಗೆ ಸ್ಕೂಟರ್ ಡಿಕ್ಕಿ ಹೊಡೆದ ಪರಿಣಾಮ ಗಂಭೀರ ಗಾಯಗೊಂಡು ಬಳಿಕ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ಕೋಡಿಂಬಾಳದಿಂದ ವರದಿಯಾಗಿದೆ.


ಕೋಡಿಂಬಾಳ ಗ್ರಾಮದ  ಶ್ಯಾಮಿಯಾನ  ಅಂಗಡಿಯೊಂದರ   ಬಳಿ ಸ್ಕೂಟರ್ ಸವಾರ  ಸ್ಕೂಟರ್  ಸವಾರ  ಮಹಮ್ಮದ್ ನೌಫಾಲ್ ಎಂಬಾತ ಅಜಾಗರೂಕತೆ ಮತ್ತು ನಿರ್ಲಕ್ಷತನದಿಂದ  ಚಲಾಯಿಸಿ  ರಸ್ತೆಯ ಬದಿಯಲ್ಲಿ  ರಸ್ತೆ  ದಾಟಲು  ನಿಂತಿದ್ದ ಕೋಡಿಂಬಾಳದ   ಹುಕ್ರ  (ವ 75 ) ಎಂಬವರಿಗೆ  ಡಿಕ್ಕಿ ಹೊಡೆದಿರುವುದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ಉಲ್ಲೇಖಿಸಲಾಗಿದೆ  .



ಅಪಘಾತದ ಪರಿಣಾಮ  ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದು  ಸ್ಥಳದಲ್ಲಿದ್ದವರು  ಕಡಬ ಸರಕಾರಿ  ಆಸ್ಪತ್ರೆಗೆ   ಕರೆತಂದು ಪ್ರಥಮ ಚಿಕಿತ್ಸೆ  ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ  ಮಂಗಳೂರಿನ  ವೆನ್ ಲಾಕ್  ಆಸ್ಪತ್ರೆಗೆ ಒಳರೋಗಿಯಾಗಿ  ದಾಖಲಿಸಿದ್ದರು. ಗಾಯಾಳು ಆ.11 ರಂದು   ಚಿಕಿತ್ಸೆ  ಫಲಕಾರಿಯಾಗದೇ  ಮೃತ ಪಟ್ಟಿರುವುದಾಗಿ ತಿಳಿದು ಬಂದಿದೆ.


ದೋಳ್ಪಾಡಿ ಗ್ರಾಮದ  ಲಕ್ಷ್ಮೀಶ ಎಂಬವರ ದೂರಿನಂತೆ   ಕಡಬ ಪೊಲೀಸು ಠಾಣೆಯಲ್ಲಿ .ಕ್ರ :81/2024.ಕಲಂ: 281,106 BNS-2023 ರಂತೆ ಪ್ರಕರಣ ದಾಖಲಾಗಿದೆ.

Tags

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top