




ಕಡಬ ಟೈಮ್ಸ್: ನಿಫಾ ವೈರಸ್ಗೆ ತುತ್ತಾಗಿ ಕಳೆದ ಎಂಟು ತಿಂಗಳಿಂದ ಕೇರಳದ ಆಸ್ಪತ್ರೆಯಲ್ಲಿ ಕೋಮಾವಸ್ಥೆಯಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿರುವ ಕಡಬದ ಯುವಕನಿಗೆ ಮಂಗಳೂರಿನ ಪ್ರಸಿದ್ದ ಆಸ್ಪತ್ರೆ ಯೊಂದರಲ್ಲಿ ಚಿಕಿತ್ಸೆ ನೀಡಬೇಕು ಹಾಗೂ ಆ ಚಿಕಿತ್ಸೆಯ ವೆಚ್ಚವನ್ನು ಕೇರಳ ಸರಕಾರ ಭರಿಸಬೇಕು ಎಂದು ಮಲೆಯಾಳಿ ಕ್ರಿಶ್ಚಿಯನ್ ಅಸೋಸಿಯೇಶನ್ ಆಗ್ರಹಿಸಿದೆ.
ಅಸೋಸಿಯೇಶ್ ತಾಲೂಕು ಅಧ್ಯಕ್ಷ ಕ್ಷೇವಿಯರ್ ಬೇಬಿ ಅವರು ಕಡಬದಲ್ಲಿ ಪತ್ರಿಕಾಗೋಷ್ಟಿ ನಡೆಸಿ ಈ ಬಗ್ಗೆ ಮಾತನಾಡಿದರು. ನಿಫಾ ವೈರಸ್ ಪೀಡಿತ ಯುವಕ ಕಡಬ ತಾಲೂಕಿನ ಐತ್ತೂರು ಗ್ರಾಮದ ಮರ್ಧಾಳ ಸಮೀಪದ ತುಂಬ್ಯ ನಿವಾಸಿ ಟಿಟ್ಟೋ ಥಾಮಸ್ ಈಗಕೇರಳದ ಕ್ಯಾಲಿಕಟ್ ನ ಆಸ್ಪತ್ರೆಯಲ್ಲಿ ಕೋಮಾವಸ್ಥೆಯಲ್ಲಿದ್ದು, ಚಿಕಿತ್ಸೆಗೆಸ್ಪಂದಿಸುತ್ತಿಲ್ಲ ಎನ್ನುವ ಮಾಹಿತಿ ಸಿಕ್ಕಿದೆ. ಮನೆಯ ವರೆಲ್ಲರೂ ಅಲ್ಲಿ ಆತನ ಆರೈಕೆಯಲ್ಲಿ ತೊಡಗಿದ್ದಾರೆ. ಇದರಿಂದ ಯುವಕನ ಕುಟುಂಬ ಕಂಗಾಲಾಗಿದೆ. ತಕ್ಷಣ ಅವರಿಗೆ ಮಂಗಳೂರಿನ ಪ್ರತಿಷ್ಠಿತ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆಗೆ ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿದರು.
ಈ ಬಗ್ಗೆ ಸೋಮವಾರ ಸಂಜೆ ಮಂಗಳೂರಿನಲ್ಲಿ, ಮಲೆಯಾಳಿ ಕ್ರಿಶ್ಚಿಯನ್ ಅಸೋಸಿಯೇಶನ್ ರಾಜ್ಯಾಧ್ಯಕ್ಷ ಎ.ಸಿ.ಜಯರಾಜ್ ಹಾಗೂ ಮಂಗಳೂರು ಕಾರ್ಪೊರೇಟರ್ ಎ.ಸಿ. ವಿನಯರಾಜ್ ನೇತೃತ್ವದಲ್ಲಿ ಕರ್ನಾಟಕ ವಿಧಾನಸಭೆ ಅಧ್ಯಕ್ಷ ಯು.ಟಿ. ಖಾದರ್ ಅವರನ್ನು ಭೇಟಿ ಮಾಡಿ ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಾಯಿತು. ಇದಕ್ಕೆ ಸ್ಪಂದಿಸಿದ ಯು.ಟಿ.ಖಾದರ್ ಕೇರಳದ ಆರೋಗ್ಯ ಸಚಿವೆ ವೀಣಾ ಜಾರ್ಜ್ ಅವರನ್ನು ಸಂಪರ್ಕಿಸಿ ಸೂಕ್ತ ಕ್ರಮಕ್ಕೆಸಲಹೆ ನೀಡಿದರು. ಮಾತ್ರವಲ್ಲ ಕೇರಳದ ಮುಖ್ಯಮಂತ್ರಿ ಹಾಗೂ ವಿಧನಸಭಾಧ್ಯಕ್ಷರಿಗೆ ಯು.ಟಿ.ಖಾದರ್ ಪತ್ರ ಬರೆದು ಟಿಟ್ಟೋ ತೊಮಸ್ ಬಗ್ಗೆ ಸೂಕ್ತ ವ್ಯವಸ್ಥೆ ಮಾಡುವಂತೆ ಮನವಿ ಮಾಡಿದ್ದಾರೆ. ಕ್ರಿಶ್ಚಿಯನ್ ಅಸೋಶಿಯೇಶನ್ ಮುಖಂಡರು ಕೇರಳದ ಪ್ರತಿಪಕ್ಷದ ನಾಯಕರಾದ ವಿ.ಡಿ. ಸತೀಶ್ ಅಮಗೂ ಮನವಿ ಮಾಡಿದ್ದಾರೆ ಎಂದು ವಿವರಿಸಿದರು.
ಮಲೆಯಾಳಿ ಕಿಶ್ಚಿಯನ್ ಅಸೋಸಿಯೇಶನ್ ಜಿಲ್ಲಾಧ್ಯಕ್ಷ ಮನೋಜ್ ಪುಕಲಂ , ಕಡಬ ತಾಲೂಕು ಪ್ರಧಾನ ಕಾಯದರ್ಶಿ ಜೋಮೊನ್ ಎಂ.ಜೆ., ಉಪಾಧ್ಯಕ್ಷ ತೋಮಸ್ ಇಡೆಯಾಲ್, ಜತೆ ಕಾರ್ಯದರ್ಶಿ ಬಿನೋಯ್ , ಗೌರವಾಧ್ಯಕ್ಷ ವರ್ಗೀಸ್ ಅಬ್ರಹಾಂ, ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ ಉಷಾ .ಕೆ. ಉಪಸ್ಥಿತರಿದ್ದರು.