




ಉಪಗ್ರಹ ಆಧಾರಿತ ಮಾಹಿತಿಯ ಸಮೀಕ್ಷೆ
ಉಪಗ್ರಹ ಆಧಾರಿತ ಮಾಹಿತಿ ಪ್ರಕಾರ ದ.ಕ.ಜಿಲ್ಲೆಯ ಪುತ್ತೂರು,ಕಡಬ,ಸುಳ್ಯ, ಮಂಗಳೂರು, ಮೂಲ್ಕಿ, ಬಂಟ್ವಾಳ,ಬೆಳ್ತಂಗಡಿ ಹಾಗೂ ಉಳ್ಳಾಲ ತಾಲೂಕಿನಲ್ಲಿ ಹಲವು ಪ್ರದೇಶಗಳನ್ನು ನೆರೆ ಅಪಾಯದಲ್ಲಿರುವ ಪ್ರದೇಶಗಳೆಂದು ಗುರುತಿಸಲಾಗಿದೆ.
- ಕಡಬ ತಾಲೂಕಿನಲ್ಲಿ ಸುಬ್ರಹ್ಮಣ್ಯ, ಐನೆಕಿದು, ಏನೆಕಲ್ಲು, ಕುಟ್ರುಪ್ಪಾಡಿ, ಬಲ್ಯ, ಕೌಕ್ರಾಡಿ, ಇಚ್ಲಂಪಾಡಿ ಗ್ರಾಮಗಳು ಸಂಭಾವ್ಯ ನೆರೆ ಪ್ರದೇಶಗಳಾಗಿವೆ ಎಂದು ಉಪಗ್ರಹಾಧಾರಿತ ಸಮೀಕ್ಷೆ ಗುರುತಿಸಿದೆ.
- ಪುತ್ತೂರು ತಾಲೂಕಿನಲ್ಲಿ ಉಪ್ಪಿನಂಗಡಿ, 34 ನೆಕ್ಕಿಲಾಡಿ, ಬೆಳ್ಳಿಪ್ಪಾಡಿ, ಬಜತ್ತೂರು ಪ್ರದೆಶಗಳನ್ನು ಗುರುತಿಸಿದೆ.
- ಬಂಟ್ವಾಳ ತಾಲೂಕಿನಲ್ಲಿ ಬಂಟ್ವಾಳ ಬಿ.ಕಸಬಾ, ನಾವೂರು, ಮಣಿನಾಲ್ಕೂರು, ಸರಪಾಡಿ ಬಿ.ಮೂಡ, ಪಾಣೆಮಂಗಳೂರು,ಕಡೇಶ್ವಾಲ್ಯ, ಬರಿಮಾರು, ಸಜಿಪಮುನ್ನೂರು, ಪುದು, ಸಜಿಪಮೂಡ ಪ್ರದೆಶಗಳನ್ನು ಗುರುತಿಸಿದೆ.
- ಸುಳ್ಯ ತಾಲೂಕಿನ ಹರಿಹರ ಪಳ್ಳತ್ತಡ್ಕ, ಕೊಲ್ಲಮೊಗ್ರು, ಕಲ್ಮಕಾರ್ ಪ್ರದೆಶಗಳನ್ನು ಗುರುತಿಸಿದೆ.
- ಬೆಳ್ತಂಗಡಿ ತಾಲೂಕಿನ ಮಿತ್ತಬಾಗಿಲು, ಕಡಿರುದ್ಯಾವರ, ಮಲವಂತಿಗೆ, ದಿಡುಪೆ, ಲಾಲ, ಕೊಯ್ಯೂರು, ನಡಾ, ಕನ್ಯಾಡಿ, ಚಾರ್ಮಾಡಿ, ತೋಟತಡಿ, ನೆರಿಯಾ, ಧರ್ಮಸ್ಥಳ, ಬೆಳಾಲು, ಬಂದಾರು, ಮೊಗರು, ಇಳಂತಿಲ, ನಿಡ್ಲೆ, ಶಿಶಿಲ, ನಾರಾವಿ, ಕುತ್ಲೂರು, ವೇಣೂರು, ಬಜಿರೆ, ಕೊರಿಮಾಣಿಲು, ಮೂಡುಕೋಡಿ, ಬಡಗ ಕಾರಂದೂರು, ಸುಲ್ಕೇರಿಮೊಗರು, ಪಿಳ್ಯ, ಶಿರ್ಲಾಲು, ಕರಂಬಾರು, ಅರಂಬೋಡಿ, ಗುಂಡುರಿ ಪ್ರದೇಶಗಳನ್ನು ಸಂಭಾವ್ಯ ನೆರೆಪೀಡಿತ ಪ್ರದೇಶಗಳೆಂದು ಗುರುತಿಸಲಾಗಿದೆ.