ಕಡಬ ತಾಲೂಕಿನ 7 ಸ್ಥಳಗಳು ನೆರೆ ಅಪಾಯದ ಪ್ರದೇಶಗಳೆಂದು ಗುರುತು:ಆ ಗ್ರಾಮಗಳು ಯಾವುವು?

ಕಡಬ ತಾಲೂಕಿನ 7 ಸ್ಥಳಗಳು ನೆರೆ ಅಪಾಯದ ಪ್ರದೇಶಗಳೆಂದು ಗುರುತು:ಆ ಗ್ರಾಮಗಳು ಯಾವುವು?

Kadaba Times News

ಉಪಗ್ರಹ ಆಧಾರಿತ ಮಾಹಿತಿಯ ಸಮೀಕ್ಷೆ

 ಕಡಬ:ಭಾರೀ ಮಳೆಯಿಂದ ಕೃತಕ ನೆರೆ ಸಂಭವಿಸಿದ ಹಾಗೂ ಉಂಟಾಗಿರುವ ಅಪಾಯ,ಅನಾಹುತಗಳ ವರದಿ ಅನುಭವದ ಹಿನ್ನೆಲೆಯಲ್ಲಿ ಉಪಗ್ರಹ ಅಧಾರಿತ ಮಾಹಿತಿ ಮೂಲಕ ಅಪಾಯಕಾರಿ ಪ್ರದೇಶಗಳ ಸಮೀಕ್ಷಾ ವರದಿ ಸಿದ್ದಪಡಿಸಲಾಗಿದೆ.ಅದರಂತೆ  ಕಡಬದಲ್ಲಿ 7 , ಪುತ್ತೂರಿನಲ್ಲಿ 4 ಪ್ರದೇಶಗಳು  ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 128 ಪ್ರದೇಶಗಳನ್ನು ನೆರೆ ಅಪಾಯದ ಪ್ರದೇಶಗಳೆಂದು ಗುರುತಿಸಲಾಗಿದೆ.

ಉಪಗ್ರಹ ಆಧಾರಿತ ಮಾಹಿತಿ ಪ್ರಕಾರ ..ಜಿಲ್ಲೆಯ ಪುತ್ತೂರು,ಕಡಬ,ಸುಳ್ಯ, ಮಂಗಳೂರು, ಮೂಲ್ಕಿ, ಬಂಟ್ವಾಳ,ಬೆಳ್ತಂಗಡಿ ಹಾಗೂ ಉಳ್ಳಾಲ ತಾಲೂಕಿನಲ್ಲಿ ಹಲವು ಪ್ರದೇಶಗಳನ್ನು ನೆರೆ ಅಪಾಯದಲ್ಲಿರುವ ಪ್ರದೇಶಗಳೆಂದು ಗುರುತಿಸಲಾಗಿದೆ.


  1. ಕಡಬ ತಾಲೂಕಿನಲ್ಲಿ ಸುಬ್ರಹ್ಮಣ್ಯ, ಐನೆಕಿದು, ಏನೆಕಲ್ಲು, ಕುಟ್ರುಪ್ಪಾಡಿ, ಬಲ್ಯ, ಕೌಕ್ರಾಡಿ, ಇಚ್ಲಂಪಾಡಿ ಗ್ರಾಮಗಳು ಸಂಭಾವ್ಯ ನೆರೆ ಪ್ರದೇಶಗಳಾಗಿವೆ ಎಂದು ಉಪಗ್ರಹಾಧಾರಿತ ಸಮೀಕ್ಷೆ ಗುರುತಿಸಿದೆ.
  2. ಪುತ್ತೂರು ತಾಲೂಕಿನಲ್ಲಿ ಉಪ್ಪಿನಂಗಡಿ, 34 ನೆಕ್ಕಿಲಾಡಿ, ಬೆಳ್ಳಿಪ್ಪಾಡಿ, ಬಜತ್ತೂರು ಪ್ರದೆಶಗಳನ್ನು ಗುರುತಿಸಿದೆ.
  3. ಬಂಟ್ವಾಳ ತಾಲೂಕಿನಲ್ಲಿ ಬಂಟ್ವಾಳ ಬಿ.ಕಸಬಾ, ನಾವೂರು, ಮಣಿನಾಲ್ಕೂರು, ಸರಪಾಡಿ ಬಿ.ಮೂಡ, ಪಾಣೆಮಂಗಳೂರು,ಕಡೇಶ್ವಾಲ್ಯ, ಬರಿಮಾರು, ಸಜಿಪಮುನ್ನೂರು, ಪುದು, ಸಜಿಪಮೂಡ ಪ್ರದೆಶಗಳನ್ನು ಗುರುತಿಸಿದೆ.
  4. ಸುಳ್ಯ ತಾಲೂಕಿನ ಹರಿಹರ ಪಳ್ಳತ್ತಡ್ಕ, ಕೊಲ್ಲಮೊಗ್ರು, ಕಲ್ಮಕಾರ್ ಪ್ರದೆಶಗಳನ್ನು ಗುರುತಿಸಿದೆ.
  5. ಬೆಳ್ತಂಗಡಿ ತಾಲೂಕಿನ ಮಿತ್ತಬಾಗಿಲು, ಕಡಿರುದ್ಯಾವರ, ಮಲವಂತಿಗೆ, ದಿಡುಪೆ, ಲಾಲ, ಕೊಯ್ಯೂರು, ನಡಾ, ಕನ್ಯಾಡಿ, ಚಾರ್ಮಾಡಿ, ತೋಟತಡಿ, ನೆರಿಯಾ, ಧರ್ಮಸ್ಥಳ, ಬೆಳಾಲು, ಬಂದಾರು, ಮೊಗರು, ಇಳಂತಿಲ, ನಿಡ್ಲೆ, ಶಿಶಿಲ, ನಾರಾವಿ, ಕುತ್ಲೂರು, ವೇಣೂರು, ಬಜಿರೆ, ಕೊರಿಮಾಣಿಲು, ಮೂಡುಕೋಡಿ, ಬಡಗ ಕಾರಂದೂರು, ಸುಲ್ಕೇರಿಮೊಗರು, ಪಿಳ್ಯ, ಶಿರ್ಲಾಲು, ಕರಂಬಾರು, ಅರಂಬೋಡಿ, ಗುಂಡುರಿ ಪ್ರದೇಶಗಳನ್ನು ಸಂಭಾವ್ಯ ನೆರೆಪೀಡಿತ ಪ್ರದೇಶಗಳೆಂದು ಗುರುತಿಸಲಾಗಿದೆ.
ನಿಟ್ಟಿನಲ್ಲಿ ಇಲ್ಲಿ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ.

Tags

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top