ಬಿಳಿನೆಲೆ ಬಳಿ ಎರಡು ಬಸ್ ಗಳ ನಡುವೆ ಅಪಘಾತ ವಿಚಾರ: ಪ್ರಯಾಣಿಕನ ದೂರಿನಂತೆ ಪ್ರಕರಣ ದಾಖಲು

ಬಿಳಿನೆಲೆ ಬಳಿ ಎರಡು ಬಸ್ ಗಳ ನಡುವೆ ಅಪಘಾತ ವಿಚಾರ: ಪ್ರಯಾಣಿಕನ ದೂರಿನಂತೆ ಪ್ರಕರಣ ದಾಖಲು

Kadaba Times News
ಕಡಬ: ಬಿಳಿನೆಲೆ ಬಳಿ ಎರಡು ಸರ್ಕಾರಿ ಬಸ್ಸುಗಳು ಮುಖಾಮುಖಿ ಢಿಕ್ಕಿ ಹೊಡೆದು ಅಪಘಾತ ಸಂಭವಿಸಿದ ಘಟನೆಗೆ ಸಂಬಂಧಿಸಿ ವ್ಯಕ್ತಿ ಯೊಬ್ಬರ  ದೂರಿನ ಮೇರೆಗೆ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಿಳಿನೆಲೆಯ ಪ್ರಕಾಶ ಪಿ.ಎಸ್ ಎಂಬವರು ದೂರು ನೀಡಿದ್ದು ತಮ್ಮ  ದೊಡ್ಡಮ್ಮ ಆ.೧ ರಂದು ಮಧ್ಯಾಹ್ನ  ಕೈಕಂಬದಲ್ಲಿ  ಬಸ್ಸಿನಲ್ಲಿ ಬಿಳಿನೆಲೆ ಕಡೆಗೆ ಬರುತ್ತಾ, ಬಿಳಿನೆಲೆ ಗ್ರಾಮದ ಕಿದು ಎಂಬಲ್ಲಿಗೆ ತಲುಪಿದಾಗ, ಕಡಬ ಕಡೆಯಿಂದ ಸುಬ್ರಹ್ಮಣ್ಯ ಕಡೆಗೆ ಹೋಗುತ್ತಿದ್ದ ಇನ್ನೊಂದು  ಬಸ್ಸಿನ ಚಾಲಕ ಅಜೀತ್‌ ಜೆ ಎಂಬವರು ಬಸ್ಸನ್ನು ಅಜಾಗರೂಕತೆಯಿಂದ ಚಲಾಯಿಸಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.

 ಅಪಘಾತದ ಪರಿಣಾಮ ಬಸ್ಸಿನಲ್ಲಿದ್ದ ತನ್ನ ದೊಡ್ಡಮ್ಮ  ಹಾಗೂ ಎರಡೂ ಬಸ್ಸಿನಲ್ಲಿದ್ದ ಇತರ ಪ್ರಯಾಣಿಕರಿಗೆ ಗಾಯವಾಗಿದ್ದು, ಸ್ಥಳದಲ್ಲಿದ್ದ ಪ್ರಕಾಶ್  ಮತ್ತು ಇತರರು ಗಾಯಾಳುಗಳನ್ನು ಉಪಚರಿಸಿದ್ದರು.

 ನಂತರ ತನ್ನ ದೊಡ್ಡಮ್ಮನ್ನು  ಚಿಕಿತ್ಸೆಗಾಗಿ ಪುತ್ತೂರು ಖಾಸಗಿ ಆಸ್ಪತ್ರೆಗೆ  ದಾಖಲಿಸಿರುತ್ತಾರೆ ಎಂಬುದಾಗಿ ನೀಡಿದ ದೂರಿನ ಮೇರೆಗೆ ಕಡಬ ಪೊಲೀಸು ಠಾಣೆಯಲ್ಲಿ ಅ.ಕ್ರ:78/2024.ಕಲಂ:281.125 BNS-2023 ರಂತೆ ಪ್ರಕರಣ ದಾಖಲಾಗಿರುತ್ತದೆ.

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top