



ಕಡಬ/ನೆಟ್ಟಣ: ಇಲ್ಲಿನ ಸುಬ್ರಹ್ಮಣ್ಯ ರೋಡ್ ರೈಲು ನಿಲ್ದಾಣದ ಕಾಡು ಪ್ರದೇಶದಿಂದ ಕೂಡಿದ ಸ್ಥಳದಲ್ಲಿ ಅಪರಿಚಿತ ವ್ಯಕ್ತಿಯೊಬ್ಬರ ಮೃತದೇಹದ ಎಲುಬುಗಳು, ರುಂಡ ಪತ್ತೆಯಾದ ಘಟನೆ ಆ.13 ರಂದು ನಡೆದಿದೆ.
ಮಾಹಿತಿ ತಿಳಿದು ಕಡಬ ಠಾಣಾ ಎಸ್.ಐ ಅಭಿನಂದನ್ ನೇತೃತ್ವದ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇನ್ನು ಕೊಲೆಯೊ ಅಥವಾ ಆತ್ಮಹತ್ಯೆಯೊ ,ಆಕಸ್ಮಿಕ ಸಾವೊ ಇತ್ಯಾದಿ ಊಹಾಪೋಹಗಳು ಹರಿದಾಡುತ್ತಿದೆ.
ಮೃತ ದೇಹ ಸಂಪೂರ್ಣ ಕೊಳೆತು ಬರೇ ಎಲುಬುಗಳು, ರುಂಡ ದ ಭಾಗಗಳು ಮಾತ್ರ ಉಳಿದಿದೆ. ಇತ್ತೀಚೆಗೆ ಭಾರೀ ಪ್ರಮಾಣದಲ್ಲಿ ಸುರಿದ ಮಳೆಗೆ ಮೃತ ದೇಹ ಸಂಪೂರ್ಣ ಕೊಳೆತು ನೀರಿನಲ್ಲಿ ಸೇರಿರಬಹುದು ಎಂದು ಅಂದಾಜಿಸಲಾಗಿದೆ.
ತನಿಖೆಯ ಬಳಿಕವಷ್ಟೇ ಅಧಿಕೃತ ಮಾಹಿತಿ ದೊರೆಯಲಿದೆ.