




ಕಡಬ: ಇಲ್ಲಿನ ವಿದ್ಯಾನಗರದಲ್ಲಿರುವ ಸರಸ್ವತೀ ವಿದ್ಯಾಲಯದಲ್ಲಿ ಇಂದು (ಜು.26) 25ನೇ ಕಾರ್ಗಿಲ್ ವಿಜಯ ದಿವಸ್ ಆಚರಿಸಲಾಯಿತು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಮಾಜಿ ಯೋಧ ರಾಧಾಕೃಷ್ಣ ಕುಳ ಬಳ್ಪ ಅವರು ಮಾತನಾಡಿ ಪ್ರಜ್ಞಾವಂತ ನಾಗರಿಕರಾಗಿ ದೇಶದ ಏಳ್ಗೆ, ಏಕತೆ, ಸಾರ್ವಭೌಮತ್ವವನ್ನು ಹೆಚ್ಚಿಸುವ ನಿರ್ಧಾರವನ್ನು ನಾವು ಕೈಗೊಳ್ಳಬೇಕಾಗಿದೆ ಎಂದು ಹೇಳಿ ಕಾರ್ಗಿಲ್ ಯುದ್ಧದಲ್ಲಿ ಸ್ವತಃ ಭಾಗವಹಿಸಿದ ಅನುಭವ ಮತ್ತು ಅಲ್ಲಿನ ನೈಜ ಘಟನೆಯನ್ನು ವಿವರಿಸಿದರು .ಅಲ್ಲದೆ ಭಾರತಮಾತೆಯ ಸೇವೆಗೆ ತಯಾರಾಗಬೇಕು ಎಂದು ಮಕ್ಕಳಿಗೆ ಕರೆ ನೀಡಿದರು.
ಮಾಜಿ ಯೋಧ ರಾಧಾಕೃಷ್ಣ ಕುಳ ಬಲ್ಪ ಮಾತನಾಡುತ್ತಿರುವುದು
ಈ ವೇಳೆ ಸಂಸ್ಥೆಯ ಅಧ್ಯಕ್ಷರಾದ ರವಿರಾಜ್ ಶೆಟ್ಟಿ ಅವರ ನೇತೃತ್ವದಲ್ಲಿ ಯೋಧ ನಮನ ಸಲ್ಲಿಸಿ ಸಲಾಯಿತು. ಬಳಿಕ ಅಧ್ಯಕ್ಷೀಯ ನೆಲೆಯಲ್ಲಿ ಮಾತನಾಡಿ, ವಿದ್ಯಾರ್ಥಿಗಳಾದ ತಾವುಗಳು ಭವಿಷ್ಯದಲ್ಲಿ ಭಾರತೀಯ ಸೇನೆಗೆ ಸೇರಿ ಯೋಧರಾಗಿ ದೇಶಸೇವೆ ಮಾಡುವ ಸಂಕಲ್ಪ ಮಾಡಬೇಕಾಗಿದೆ ಎಂದರು.
![]() |
ಸಂಸ್ಥೆಯ ಅಧ್ಯಕ್ಷರಾದ ರವಿರಾಜ್ ಶೆಟ್ಟಿ ಅವರ ನೇತೃತ್ವದಲ್ಲಿ ಯೋಧ ನಮನ |
ವೇದಿಕೆಯಲ್ಲಿ
ಆಡಳಿತ ಮಂಡಳಿಯ ಸದಸ್ಯರಾದ ಶ್ರೀಮತಿ ಪ್ರಮೀಳಾ ಲೋಕೇಶ್, ಉಮೇಶ್ ಶೆಟ್ಟಿ ಸಾಯಿರಾಂ ಕಲ್ಲುಗುಡ್ಡೆ , ಯಶೋಧರ್ ಕೊಣಾಜೆ, ಚಿನ್ನಪ್ಪ ಗೌಡ ಪಂಜ. ಉಪಸ್ಥಿತರಿದ್ದರು. ಮುಖ್ಯಗುರುಗಳಾದ
ಮಾಧವಕೋಲ್ಪೆ ಸ್ವಾಗತಿಸಿ , ಶಿಕ್ಷಕ ಗಿರೀಶ್ ಚೆನ್ನಕಜೆ ಧನ್ಯವಾದವಿತ್ತರು. ಶಿಕ್ಷಕಿ ಪ್ರೇಮಲತಾ ಸನ್ಮಾನ
ಪತ್ರ ವಾಚಿಸಿದರು. ಶಿಕ್ಷಕಿ ವನಿತಾ ಕಾರ್ಯಕ್ರಮ ನಿರೂಪಿದರು.