




ಕಡಬ: ಇಲ್ಲಿನ ಪಟ್ಟಣ ಪಂಚಾಯತ್ ವ್ಯಾಪ್ತಿಯ ಕೋಡಿಂಬಾಳ ಗ್ರಾಮದ ದಾಸರಗುಡ್ಡೆಯ ಪರಿಶಿಷ್ಟ ಸಮುದಾಯ ಜನರು ಈ ಮಳೆಗಾಲದಲ್ಲೂ ಕೊಳಚೆ ನೀರು ಕುಡಿಯುವಂತಾಗಿದೆ.
ಅಲ್ಲಿನ ನಿವಾಸಿಗಳು ಕೆಸರು ನೀರು
ಟ್ಯಾಂಕ್ ಗೆ ಹೋಗುತ್ತಿರುವುದನ್ನು ಚಿತ್ರೀಕರಿಸಿಕೊಂಡಿದ್ದಾರೆ. ಕಳೆದೆರಡು ದಿನಗಳಿಂದ ಕೆಸರು ತುಂಬಿದ
ನೀರನ್ನೇ ಬಳಕೆ ಮಾಡುತ್ತಿರುವುದಾಗಿ ಅಲ್ಲಿನ ನಿವಾಸಿಗಳು ತಿಳಿಸಿದ್ದಾರೆ. ಅಲ್ಲದೆ ರೋಗ ಬಂದರೆ ಯಾರು ಹೊಣೆ ಎಂದು ಪ್ರಶ್ನಿಸುತ್ತಿದ್ದಾರೆ.
ಕೆಸರು
ನೀರು ಟ್ಯಾಂಕ್ ಸೇರಲು ಕಾರಣ ಎನು?: ಇಲ್ಲಿನ
ಕುಡಿಯುವ ನೀರಿನ ಸ್ಥಾವರಕ್ಕೆ ರಸ್ತೆ ಬದಿ ಬೋರ್ ವೆಲ್ ಕೊರೆಯಲಾಗಿದ್ದು ಅದರ ಸುತ್ತ ಅರೆಬರೇ ಇಂಗುಗುಂಡಿ
ನಿರ್ಮಾಣ ಮಾಡಲಾಗಿದೆ . ಹೀಗಾಗಿ ರಸ್ತೆಯಲ್ಲಿ ಹರಿಯುವ ನೀರು ನೇರ ಇಂಗುಗುಂಡಿಗೆ ಇಳಿಯುತ್ತಿದ್ದು
ಟ್ಯಾಂಕ್ ಪೂರ್ತಿ ಕೆಸರುಯುಕ್ತ ಕೊಳಚೆ ನೀರು ಭರ್ತಿಯಾಗಿದೆ.
ಬೊರ್ ವೆಲ್ ಕೊಳವೆಗೆ ನಾಲ್ಕು ಕಡೆ ರಂದ್ರ ಕೊರೆಯಲಾಗಿದೆ ಎಂಬ ಆರೋಪ ಅಲ್ಲಿನ ನಿವಾಸಿಗಳದ್ದು. ಇದರಿಂದ
ಕಾಲನಿ ನಿವಾಸಿಗಳು ಆಕ್ರೋಶಗೊಂಡಿದ್ದಾರೆ.
ಇನ್ನು ಜನರ ಆಕ್ರೋಶದ ಬೆನ್ನಲ್ಲೇ ಇಂಗುಗುಂಡಿಯನ್ನು ದುರಸ್ತಿ ಮಾಡಲು ಪಟ್ಟಣ ಪಂಚಾಯತ್ ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ.