




ಕಡಬ: ಇಲ್ಲಿನ ಕಳಾರದ ಸಮೀಪದ ಓರೋಡಿ ಮನೆಯ ಸೂಫಿ ಬ್ಯಾರಿ ಪುತ್ರ ಮಹಮ್ಮದ್ ಶರೀಫ್ ( 33 ವ) ಹಳೆಯ ಮನೆಯೊಂದರಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದ ಘಟನೆ ಬೆಳಕಿಗೆ ಬಂದಿತ್ತು.
ಇದೀಗ ಮೃತ ಯುವಕನ ಅಣ್ಣ ಅಬ್ದುಲ್ ಅಜೀಜ್ ಎಂಬವರು ಕಡಬ ಠಾಣೆಗೆ ದೂರು ನೀಡಿದ್ದು ಅದರಂತೆ ಪ್ರಕರಣ ದಾಖಲಾಗಿದೆ. ಅಲ್ಲದೆ ದೂರಿನಲ್ಲಿ ಆತ್ಮಹತ್ಯೆಗೆ ಕಾರಣವನ್ನೂ ಉಲ್ಲೇಖಿಸಿದ್ದಾರೆ.
ತಮ್ಮನು ಶಾಮಿಯಾನ ಕೆಲಸವನ್ನು ಮಾಡಿಕೊಂಡಿದ್ದು ಹಲವರಿಂದ ಕೈಸಾಲ ಪಡೆದುಕೊಂಡಿದ್ದ. ಹೀಗಾಗಿ ಸಾಲ ತೀರಿಸಲಾಗದೆ ಮಾನಸಿಕವಾಗಿ ನೊಂದು ಜುಲೈ 29 ರ ಮುಂಜಾನೆ ಮನೆಯಿಂದ ಹೋಗಿದ್ದ.
ಸುಮಾರು 10.45 ಗಂಟೆಗೆ ಕಳಾರದ ಗುಜಿರಿ ಲತೀಪ್ ರವರ ಹಳೆಯ ಮನೆಯಲ್ಲಿ ಫ್ಯಾನಿನ ಉಕ್ಕಿಗೆ ಹಳೆಯ ಲುಂಗಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ವಿಚಾರ ತಿಳಿದು ಬಂದಿದೆ
ಘಟನಾ ಸ್ಥಳಕ್ಕೆ ಹೋದ ವೇಳೆ ತನ್ನ ತಮ್ಮ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡು ಬಂದಿದೆ.
ತಮ್ಮ ವಿಪರೀತವಾಗಿ ಕೈ ಸಾಲ ಮಾಡಿಕೊಂಡು ಸಾಲವನ್ನು ತೀರಿಸಲಾಗದೆ ಹಣಕಾಸಿನ ವ್ಯವಹಾರದಲ್ಲಿ ಮನನೊಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ಈ ಸಾವಿನಲ್ಲಿ ಬೇರೆ ಸಂಶಯವಿರುವುದಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ. ಕಡಬ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.