




ಕಡಬ : ಕಳೆದ ರಾತ್ರಿಯಿಂದ ಸುರಿಯುತ್ತಿರುವ ಭಾರೀ ಮಳೆ ಯಿಂದಾಗಿ ಗುಂಡ್ಯ ಹೊಳೆ ತುಂಬಿ ಹರಿಯುತ್ತಿದೆ. ಕಡಬ ಸಮೀಪದ ಇಚ್ಲಂಪಾಡಿಯಲ್ಲಿ ನೀರು ರಸ್ತೆಗೆ ನುಗ್ಗಿ ಸಂಪರ್ಕ ಸ್ಥಗಿತಗೊಂಡ ಘಟನೆ ಇಂದು ನಡೆದಿದೆ.
ನೀರು
ರಸ್ತೆಗೆ ನುಗ್ಗಿದ ಪರಿಣಾಮ ಇಚ್ಲಂಪಾಡಿ – ಕಲ್ಲುಗುಡ್ಡೆ, ಇಚ್ಲಂಪಾಡಿ – ಮಡಿಪು ರಸ್ತೆ ಗೆ ನೀರು
ಬಂದು ಸಂಪರ್ಕ ಸ್ಥಗಿತ ಗೊಂಡಿದೆ.
ಇಲ್ಲಿನ
ತಗ್ಗು ಪ್ರದೇಶದ ತೋಟಕ್ಕೆ ನೀರು ನುಗ್ಗಿದ್ದು ಇಚ್ಲಂಪಾಡಿ ಉಳ್ಳಾಕ್ಲು ದೈವಸ್ಥಾನ, ಗಂಗಾಧರೇಶ್ವರ ದೇವಸ್ಥಾನದ
ಆವರಣಕ್ಕೆ ನೀರು ನುಗ್ಗಿದೆ.
ಹೊಳೆ
ಬದಿಯಿರುವ ಕೃಷಿಕರ ತೋಟಕ್ಕೆ ನೀರು ನುಗ್ಗಿದೆ. ಹೊಳೆಯಲ್ಲಿ ನೀರಿನ ಹರಿವು ಹೆಚ್ಚಳವಾಗುತ್ತಿದೆ ಎಂದು ವರದಿಯಾಗಿದೆ.