ಕಡಬ: ರೆಂಜಿಲಾಡಿಯಲ್ಲಿ ಉಚಿತ ಜೇನು ಕೃಷಿ ತರಬೇತಿ ಶಿಬಿರ ಉದ್ಘಾಟನೆ

ಕಡಬ: ರೆಂಜಿಲಾಡಿಯಲ್ಲಿ ಉಚಿತ ಜೇನು ಕೃಷಿ ತರಬೇತಿ ಶಿಬಿರ ಉದ್ಘಾಟನೆ

Kadaba Times News

ಕಡಬ: ರೆಂಜಿಲಾಡಿ ಗ್ರಾಮದ ಪೇರಡ್ಕ ರಬ್ಬರ್ ಉತ್ಪಾದಕರ ಸಹಕಾರಿ ಸಂಘದ ಆಶ್ರಯದಲ್ಲಿ ಉಚಿತ ಜೇನು ಕೃಷಿ ತರಬೇತಿ ಶಿಬಿರವು ಜೂ.25ರಂದು ಉದ್ಘಾಟನೆಗೊಂಡಿತು.

 ಶಿಬಿರವನ್ನು ತರಬೇತಿ ಶಿಬಿರದ ಎಡಿಒ  ದೀಪ್ತಿ ಸಿ.ವಿ ಇವರು ಉದ್ಘಾಟಿಸಿ ಜೇನು ಕೃಷಿ ಕುರಿತು ಮಾಹಿತಿ ನೀಡಿದರು.


ರಬ್ಬರ್ ಉತ್ಪಾದಕರ ಸಂಘದ ಅಧ್ಯಕ್ಷ ವರ್ಗೀಸ್ ವಿ.ಕೆ. ಸಭೆಯ ಅಧ್ಯಕ್ಷತೆ  ವಹಿಸಿದ್ದರು. ವೇದಿಕೆಯಲ್ಲಿ ತರಬೇತಿ ಅಧಿಕಾರಿ ಅನೂಪ್ ಬೇಬಿ ಉಪಸ್ಥಿತರಿದ್ದರು.  ಪೇರಡ್ಕ ರಬ್ಬರ್ ಉತ್ಪಾದಕರ ಸಂಘದ ಕಲೆಕ್ಷನ್ ಏಜೆಂಟ್ ಇಮ್ಯಾನುವೇಲ್ ಅವರು ಸ್ವಾಗತಿಸಿ, ವಂದಿಸಿದರು. ಕಾರ್ಯಕ್ರಮದಲ್ಲಿ ಶಿಬಿರಾರ್ಥಿಗಳು ಉಪಸ್ಥಿತರಿದ್ದರು.

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top