




ಕಡಬ/ಆಲಂಕಾರು: ಕಾಲನಿಗೆ ತೆರಳಿ ಕಡಬ ಠಾಣಾ ಎಸ್.ಐ ಅಭಿನಂದನ್ ಅವರು ದಲಿತರ ಕುಂದು ಕೊರತೆ ಆಲಿಸಿದ್ದಾರೆ.
ಜುಲೈ
14ರಂದು ಆಲಂಕಾರು ಗ್ರಾಮದ ಗಾನಂತಿ ಪ್ರದೇಶಕ್ಕೆ ತೆರಳಿ ಅಲ್ಲಿನ ಕಾಲನಿ ನಿವಾಸಿಗಳ ಜೊತೆ ಸುದೀರ್ಘ
ಮಾತುಕತೆ ನಡೆಸಿದರು . ನಿವಾಸಿಗಳು ಸಾಮಾಜಿಕ, ಆರ್ಥಿಕ
ವಿಚಾರಗಳನ್ನು ಹಂಚಿಕೊಂಡರು.
![]() |
ಕಾಲನಿ ನಿವಾಸಿಗಳ ಜೊತೆ ಮಾತನಾಡುತ್ತಿರುವ ಎಸ್.ಐ ಅಭಿನಂದನ್ |
ಈ ವೇಳೆ ಎಸ್.ಐ ಪೋಕ್ಸೋ ಕಾಯ್ದೆಯ ಕುರಿತು ಸಮಗ್ರ ಮಾಹಿತಿ ನೀಡಿದರು. ಅಲ್ಲದೆ ಶಾಲಾ ಮಕ್ಕಳನ್ನು ಉನ್ನತ ಶಿಕ್ಷಣಕ್ಕೆ ಕಳುಹಿಸಲು ಹಲವು ಅವಕಾಶಗಳಿದ್ದು ಸರ್ಕಾರದ ಸೌಲಭ್ಯವನ್ನು ಪಡೆದುಕೊಳ್ಳುವಂತೆ ತಿಳಿಸಿದರು. ಯಾವುದೇ ಸಮಸ್ಯೆಗಳು ಆದರಲ್ಲಿ ಠಾಣೆಗೆ ಮಾಹಿತಿ ನೀಡುವಂತೆ ಸೂಚಿಸಿದರು .
ಈ ಸಂದರ್ಭದಲ್ಲಿ ಠಾಣೆಯ ಹೆಡ್ ಕಾನ್ಸ್ಟೇಬಲ್ ಭವಿತ್ , ಚಾಲಕ ನಾರಾಯಣ ಪಾಟಾಳಿ ಜೊತೆಗೆಗಿದ್ದರು. ಕರ್ನಾಟಕ ಭೀಮ್ ಆರ್ಮಿ ಅಧ್ಯಕ್ಷ ರಾಘವ ಕಳಾರ ಸ್ವಾಗತಿಸಿ ಧನ್ಯವಾದವಿತ್ತರು.
ಕಾಲನಿಯ ಮೋಹನ ಉಜುರ್ಲಿ , ಕೃಷ್ಣ ಗಾನಂತಿ ಕರಿಯ ಗಾನಂತಿ, ದಿನೇಶ್ ಗಾನಂತಿ , ವಿಜಯ ಗಾನಂತಿ , ಪ್ರಸನ್ನ ,ಕೃಷ್ಣಪ್ಪ ಗಿರಿಜಾ, ಶ್ರೀಧರ, ಗುಡ್ಡಪ್ಪ, ಜಯಂತ ಸೇರಿದಂತೆ ಪ್ರಮುಖರಿದ್ದರು.