




ನಮ್ಮ ಇಂಡಿಯಾ ಕನ್ನಡ: ಪರಸ್ಪರ ವಾಗ್ವಾದ ನಡೆದು ಗಲಾಟೆಗೆ ಕಾರಣವಾಗಿ ವ್ಯಕ್ತಿಯೊಬ್ಬ ಚೂರಿ ಇರಿತಕ್ಕೊಳಗಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಕೊಯಿಲ ಗ್ರಾಮದ ಎಂತಾರು ಎಂಬಲ್ಲಿ ಸೋಮವಾರ ತಡರಾತ್ರಿ ನಡೆದಿದೆ.
ನವಾಜ್ ಚೂರಿ ಇರಿತಕ್ಕೊಳಗಾದ ವ್ಯಕ್ತಿಯಾಗಿದ್ದು ನೌಫಾಲ್ ಚೂರಿ ಇರಿದ ಆರೋಪಿ.ನವಾಜ್ ತೀವ್ರ ಗಾಯಗೊಂಡಿದ್ದು, ಸದ್ಯ ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮೊಬೈಲ್ಗೆ ರಿಚಾರ್ಜ್ ಮಾಡಿಸಲೆಂದು ಮನೆಯ ಪಕ್ಕದಲ್ಲಿದ್ದ ನೌಫಲ್ ಅಂಗಡಿಗೆ ಹೋಗಿದ್ದು ಈ ವೇಳೆ ಹಳೆಯ ಘಟನೆಯೊಂದನ್ನು ಕಾರಣವಾಗಿಟ್ಟುಕೊಂಡು ನೌಫಾಲ್ ಅವಾಚ್ಯ ಪದಳಿಂದ ಬೈದಿದ್ದಲ್ಲದೇ ನವಾಜ್ಗೆ ಚಾಕುವಿನಿಂದ ಹೊಟ್ಟೆಗೆ ಚುಚ್ಚಿದ್ದಾರೆ ಎಂದು ತಿಳಿದುಬಂದಿದೆ.
ಸದ್ಯ ನವಾಜ್ ಚೇರಿಸಿಕೊಳ್ಳುತ್ತಿದ್ದಾರೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.