BREAKING UPDATE-ಕಡಬ:ವಿದ್ಯುತ್ ಶಾಕ್: ಶಿರಾಡಿಯ ಯುವಕ ಸಾವು

BREAKING UPDATE-ಕಡಬ:ವಿದ್ಯುತ್ ಶಾಕ್: ಶಿರಾಡಿಯ ಯುವಕ ಸಾವು

Kadaba Times News

ಕಡಬ ಟೈಮ್ಸ್(KADABA TIMES):ನೆಲ್ಯಾಡಿ: ವಿದ್ಯುತ್ ಶಾಕ್ ಗೆ ಒಳಗಾಗಿ ಯುವಕನೋರ್ವ ಮೃತಪಟ್ಟ ಘಟನೆ  ಕಡಬ ತಾಲೂಕಿನ ಶಿರಾಡಿ ಗ್ರಾಮದ ಅಡ್ಡಹೊಳೆಯಲ್ಲಿ ಜು.26ರಂದು ಸಂಜೆ ನಡೆದಿದೆ.

ಅಡ್ಡಹೊಳೆ ನಿವಾಸಿ ಮೋನುಚ್ಚ ಎಂಬವರ ಪುತ್ರ ರೋಫಿನ್(15ವ.)ಮೃತಪಟ್ಟ ಯುವಕ.

ಈತ ಮಧ್ಯಾಹ್ನ ಮನೆಯಲ್ಲಿ ಚಾರ್ಜ್ ಗೆ ಇಟ್ಟ ಮೊಬೈಲ್ ತೆಗೆಯುತ್ತಿದ್ದಂತೆ  ಸಿಡಿಲು ಬಡಿದ ಕಾರಣ  ವಿದ್ಯುತ್ ಶಾಕ್ ಗೆ ಒಳಗಾಗಿ ಗಂಭೀರ ಸ್ಥಿತಿಗೆ ತಲುಪಿದ್ದರು. ತಕ್ಷಣ ಮನೆಯವರು ಆಸ್ಪತ್ರೆಗೆ ಕರೆದೊಯ್ಯಿದರಾದರೂ ಆ ವೇಳೆಗೆ ಆತ ಮೃತಪಟ್ಟಿದ್ದ ಎಂದು ವರದಿಯಾಗಿದೆ.

ಘಟನೆ ಕುರಿತು ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿಯಬೇಕಾಗಿದೆ.

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top