




ಕಡಬ ಟೈಮ್ಸ್(KADABA TIMES):ಆಕಸ್ಮಿಕವಾಗಿ ಕೋವಿಯಿಂದ ಸಿಡಿದ ಗುಂಡು ತಗುಲಿ ಸಿಪಿಐ ಮುಖಂಡರೋರ್ವರು ಮೃತಪಟ್ಟ ದಾರುಣ ಘಟನೆ ಕಾಸರಗೋಡಿನ ಪೊಯಿನಾಚಿ ಕರಿಚ್ಚೇರಿಯಲ್ಲಿ ನಡೆದಿದೆ.
ಸಿಪಿಐ ಸ್ಥಳೀಯ ಮುಖಂಡ ಮಾಧವನ್ (65) ಮೃತ ದುರ್ದೈವಿ.

ಹಲಸಿನ ಹಣ್ಣು ಕೊಯ್ಯಲೆಂದು ತೆರಳಿದ್ದ ಸಂದರ್ಭ ನೆಲದಲ್ಲಿಟ್ಟಿದ್ದ ಕೋವಿಯನ್ನು ಆಕಸ್ಮಿಕವಾಗಿ ತುಳಿದು ಅದರ ಗುಂಡು ಕಾಲಿಗೆ ತಗಲಿದೆ.
ಈ ಘಟನೆ ಮನೆಮಂದಿಗೆ ತಡವಾಗಿ ಗೋಚರಕ್ಕೆ ಬಂದ ಹಿನ್ನೆಲೆ ತಕ್ಷಣವೇ ಮಂಗಳೂರು ಆಸ್ಪತ್ರೆಗೆ ಕೊಂಡೊಯ್ದರೂ ಮೃತಪಟ್ಟಿದ್ದಾರೆ.ಬೇಕಲ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ