ಯುವವಾಹಿನಿ ಕಡಬ ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ

ಯುವವಾಹಿನಿ ಕಡಬ ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ

Kadaba Times News
0

ಕಡಬ ಟೈಮ್ಸ್ (KADABA TIMES):ಯುವವಾಹಿನಿ ಕಡಬ ಘಟಕದ ನೂತನ  ಪದಾಧಿಕಾರಿಗಳ  ಪದಗ್ರಹಣ  ಸಮಾರಂಭವು ನವಂಬರ್1 ರಂದು  ಶ್ರೀ ದುರ್ಗಾಂಬಿಕ ದೇವಸ್ಥಾನದ ಸಭಾಂಗಣದಲ್ಲಿ  ನಡೆಯುತು.

ಬಿ ಎಲ್ ಜನಾರ್ದನ   ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮವನ್ನು ಸಾಮಾಜಿಕ ಮುಂದಾಳು  ರವಿ ಕಕ್ಕೆ ಪದವು ಉದ್ಘಾಟಿಸಿದರು  . ನೂತನ ಅಧ್ಯಕ್ಷರಾಗಿ ಶಿವಪ್ರಸಾದ್ ನೂಚಿಲ, ಉಪಾಧ್ಯಕ್ಷರಾಗಿ  ಸುಂದರ ಪೂಜಾರಿ ಅಂಗಣ, ಪ್ರದಾನ ಕಾರ್ಯದರ್ಶಿಯಾಗಿ  ದೀಕ್ಷಿತ್  ಪಣೆಮಜಲು, ಜೊತೆ ಕಾರ್ಯದರ್ಶಿಯಾಗಿ ಕೃಷ್ಣಪ್ಪ ಅಮೈ, ಕೋಶಾಧಿಕಾರಿಯಾಗಿ   ಪ್ರವೀಣ್ ಕುಮಾರ್ ಒಂಕಲ್ ,ಸಂಘಟನಾ ಕಾರ್ಯದರ್ಶಿಯಾಗಿ ಲಕ್ಷ್ಮಿಶ ಬಂಗೇರ ಅವರು ಆಯ್ಕೆಯಾಗಿದ್ದಾರೆ.

ಸ್ಥಾಪಕ ಅಧ್ಯಕ್ಷ   ಯೋಗೀಶ್ ಕುಮಾರ್ ಅಗತ್ತಾಡಿ ನೂತನ ಪದಾಧಿಕಾರಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು.  ಮೂರ್ತೆದಾರರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಮುತ್ತಪ್ಪ ಪೂಜಾರಿ, ಬಿಲ್ಲವ ಸಂಘದ ಕಡಬ ವಲಯ ಸಂಚಾಲಕ  ಲಕ್ಷ್ಮೀಶ ಬಂಗೇರ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.  ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಾದ  ಧನುಷ್ ಕೆಸಿ ,ವರ್ಷ ಕುಮಾರಿ ,ನವ್ಯಶ್ರೀ ಹಾಗೂ ಶ್ರೇಯಾ   ಅವರುಗಳನ್ನು  ಸನ್ಮಾನಲಾಯಿತು.

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top