




ಕಡಬ ಟೈಮ್ಸ್ (KADABA TIMES): ಸರಕಾರಗಳು ಜಾರಿಗೊಳೀಸುವ ಜನಪರ ಯೋಜನೆಯನ್ನು ಪ್ರತೀ ಮನೆಗೆ ತಲುಪಬೇಕು. ಅದರಲ್ಲಿಯೂ ಅರೋಗ್ಯಕ್ಕೆ ಸಂಬಂಧಿಸಿರುವ ಈ ರೀತಿಯ ಯೋಜನೆಗಳು ಪ್ರತಿಯೊಬ್ಬರಿಗೂ ತಲುಪಿ ಜನರು ಆರೋಗ್ಯಪೂರ್ಣ ಜೀವನ ನಡೆಸುಂತಾಗಬೇಕು ಎಂದು ಶಾಸಕ ಎಸ್.ಅಂಗಾರ ಹೇಳಿದರು.

ಅವರು ಶುಕ್ರವಾರ ಗ್ರಾಮ ವಿಕಾಸ ಸಮಿತಿ ಅಜ್ಜಾವರ ಇದರ ಆಶ್ರಯದಲ್ಲಿ ಸುಳ್ಯ ಸಿ.ಎ. ಬ್ಯಾಂಕ್ ನ ಸಹಕಾರದೊಂದಿಗೆ ಅಜ್ಜಾವರದಲ್ಲಿ ನಡೆದ ಉಚಿತ ಆಯುಷ್ಮಾನ್ ಕಾರ್ಡ್ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ತಾ.ಪಂ ಅಧ್ಯಕ್ಷ ಚನಿಯ ಕಲ್ತಡ್ಕ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸುಳ್ಯ ಸಿ.ಎ. ಬ್ಯಾಂಕ್ ಅಧ್ಯಕ್ಷ ಹರೀಶ್ ಬೂಡುಪನ್ನೆ, ಜಿ.ಪಂ.ಸದಸ್ಯೆ ಪುಷ್ಪಾವತಿ ಬಾಳಿಲ, ಸಿ.ಎ. ಬ್ಯಾಂಕ್ ಉಪಾಧ್ಯಕ್ಷ ವೆಂಕಟ್ರಮಣ ಮುಳ್ಯ,ಬಿಜೆಪಿ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಗುರುದತ್ ನಾಯಕ್ ವೇದಿಕೆಯಲ್ಲಿ ದ್ದರು. ಬ್ಯಾಂಕಿನ ಕಾರ್ಯನಿರ್ವಹಣಾಧಿಕಾರಿ ಸುದರ್ಶನ ಸೂರ್ತಿಲ, ನಿರ್ದೇಶಕರಾದ ಶೀನಪ್ಪ ಬಯಂಬು ಮನ್ಮಥ ಅಡ್ಪಂಗಾಯ, ಅಬ್ದುಲ್ ಕುಂಞಿ ನೇಲ್ಯಡ್ಕ, ವಾಸುದೇವ ನಾಯಕ್ ಉಪಸ್ಥಿತರಿದ್ದರು