




ಕಡಬ ಟೈಮ್ಸ್, ಕಲ್ಲುಗುಡ್ಡೆ: ಕಲ್ಲುಗುಡ್ಡೆ-ಜಾಲು ರಸ್ತೆಯ ಬದಿಯಲ್ಲಿ ಅಳವಡಿಸಿರುವ ವಿದ್ಯುತ್ ತಂತಿಗಳು ಹಳೆಯದಾಗಿದ್ದು, ಅಪಾಯಕಾರಿಯಾಗಿದೇ ಈ ಬಗ್ಗೆ ಮೂರು ತಿಂಗಳ ಹಿಂದೆ ಇಲಾಖೆಗೆ ಸರಿಪಡಿಸುವಂತೆ ಸೂಚಿಸಿದರೂ ಇನ್ನೂ ದುರಸ್ತಿಗೆ ಮುಂದಾಗಿಲ್ಲ ಎಂದು ಜನರ ಬಳಿ ನಮ್ಮ ಗ್ರಾ.ಪಂ. ಕಾರ್ಯಕ್ರಮದಲ್ಲಿ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜನರ ಜೀವದ ಜೊತೆ ಚೆಲ್ಲಾಟವಾಡುವ ಕೆಲಸವನ್ನು ಮೆಸ್ಕಾಂ ಮಾಡುತ್ತಿದ್ದೇಯೇ ಎಂಬುದು ತಿಳಿಯುತ್ತಿಲ್ಲ ಎಂದು ಗ್ರಾಮಸ್ಥೆ ಸುಂದರಿ ಕಲ್ಲುಗುಡ್ಡೆ ಆರೋಪಿಸಿದರು. ಈ ಬಗ್ಗೆ ಗ್ರಾ.ಪಂ. ಅಧ್ಯಕ್ಷ ಸದಾನಂದ ಗೌಡ ಸಾಂತ್ಯಡ್ಕ ಅವರು ಮೆಸ್ಕಾಂ ಇಲಾಖೆಗೆ ಕರೆ ಮಾಡಿ ಕೂಡಲೇ ಸಮಸ್ಯೆ ಬಗೆಹರಿಸುವಂತೆ ಸೂಚಿಸಿದರು.
ಸಭೆ ನಡೆದಪಕ್ಕದಲ್ಲೇ ಅಂಬೇಡ್ಕರ್ ಭವನನಿರ್ಮಿಸಿ ಸುಂದರಿಕಲ್ಲುಗುಡ್ಡೆ ಮಾತನಾಡಿ, ಕಲ್ಲುಗುಡ್ಡೆ ಪೇಟೆಯಲ್ಲಿ ಸಭೆ ನಡೆಸಲು ಸಭಾಭವನದವ್ಯವಸ್ಥೆಗಳಿಲ್ಲ, ಪೇಟೆಯಲ್ಲಿ ಅಂಬೇಡ್ಕರ್ ಭವನ ನಿರ್ಮಿಸುವಂತೆ ಆಗ್ರಹಿಸಿದಅವರು, ಪೇಟೆಯಲ್ಲಿಯೇ ಅಂಬೇಡ್ಕರ್ ಭವನ ನಿರ್ಮಾಣ ಜಾಗಕಾದಿರಿಸಲಾಗಿದೆ ಎಂಬಮಾಹಿತಿಯೂ ಇದೆ ಎಂದವರು ತಿಳಿಸಿದರು.ಉತ್ತರಿಸಿದ ತಾ.ಪಂ. ಮೆನೇಜರ್ಶಿವಕುಮಾರ್ ಈ ಬಗ್ಗೆ ಗ್ರಾ.ಪಂ. ವತಿಯಿಂದ ಜಾಗಪರಿಶೀಲಿಸಿ, ಅಂಬೇಡ್ಕರ್ ಭವನಕ್ಕೆ ಆರ್ಟಿಸಿಸಿದ್ಧಪಡಿಸಿ ಮುಂದಿನ ಕ್ರಮಕೈಗೊಳ್ಳುವಲ್ಲಿ ಮುಂದಾಗಿಎಂದರು.

ನೀರಿನಟ್ಯಾಂಕ್ ವಿತರಿಸಿ; ಹೆಚ್ಚಿನ ಎಲ್ಲ ಗ್ರಾ.ಪಂ.ಗಳಲ್ಲಿ ದಲಿತರಿಗೆನೀರಿನ ಟ್ಯಾಂಕ್ ವಿತರಿಸಲಾಗಿದೆ. ಆದರೆನಮ್ಮಲ್ಲಿ ಇದು ವಿತರಿಸಿಲ್ಲ ಯಾಕೆಎಂದು ಸುಧಾಕರ ಪ್ರಶ್ನಿಸಿದರು. ಉತ್ತರಿಸಿದಪಿಡಿಒ ಕ್ರಿಯಾಯೋಜನೆಯ ಪ್ರಕಾರ ಸೌಲಭ್ಯಗಳು ವಿತರಿಸಲಾಗುತ್ತದೆ.ನಾವು ಕ್ರೀಯಾಯೋಜನೆಯಲ್ಲಿ ಏನನ್ನು ಅಳವಡಿಸಿದ್ದೇವೆಯೋ ಅದೇಸೌಲಭ್ಯ ಬರುತ್ತದೆ ಎಂದರು. ಸುಂದರಿ ಮಾತನಾಡಿ,ನಮ್ಮ ಗ್ರಾ.ಪಂ,. ವ್ಯಾಪ್ತಿಗೂನೀರಿನ ಟ್ಯಾಂಕ್ ವಿತರಿಸಲು ಕ್ರಮಕೈಗೊಳ್ಳುವಂತೆಅವರು ಆಗ್ರಹಿಸಿದರು. ಕಲ್ಲುಗುಡ್ಡೆ ಕಾಲೋನಿಗೆ ಬೀದಿ ದೀಪ ಅಳವಡಿಸುವಂತೆ,ಗಂಗಾ ಕಲ್ಯಾಣ ಯೋಜನೆಯ ಪಂಪ್ಸರಿಪಡಿಸುವಂತೆ ಒತ್ತಾಯಿಸಿದರು.
ಉದ್ಯೋಗಖಾತರಿ ಯೋಜನೆಯ ಸಧುಪಯೋಗ ಪಡೆದುಕೊಳ್ಳಿ,ಮನೆತೆರಿಗೆಯನ್ನು ಕಡ್ಡಾಯವಾಗಿ ಪಾವತಿಸಿ ಎಂದು ಪಿಡಿಒಆನಂದ ಸಭೆಯಲ್ಲಿ ಹೇಳಿದರು. ನೂಜಿಬಾಳ್ತಿಲ ಗ್ರಾ.ಪಂ., ಪುತ್ತೂರು ತಾ.ಪಂ., ಹಾಗೂ ಕಾರ್ಕಳಯಶಸ್ವೀ ನಾಗರಿಕ ಸೇವಾ ಸಂಘವಾಸುದೇವ ನಗರ ಇವುಗಳ ಜಂಟಿಆಶ್ರಯದಲ್ಲಿ ಕಳೆದಸೋಮವಾರ ಈ ಕಾರ್ಯಕ್ರಮ ನಡೆದಿದೆ.ಕಾರ್ಕಳ ಯಶಸ್ವೀ ನಾಗರಿಕ ಸೇವಾ ಸಂಘದಮುರಳೀಧರ ಅವರು ಕಾರ್ಯಕ್ರಮದ ಮಾಹಿತಿನೀಡಿದರು. ಗ್ರಾ.ಪಂ. ಸದಸ್ಯರಾದಕೆ.ಜೆ. ತೋಮಸ್, ರಾಮಚಂದ್ರಎಸ್., ರಾಜುಗೋಳಿಯಡ್ಕ, ಜಾನಕಿ, ಪುಷ್ಪಲತಾ ಪೇರಡ್ಕವೇದಿಕೆಯಲ್ಲಿ ಉಪಸ್ಥಿತರಿದ್ದರು. ಆಶಾಕಾರ್ಯಕರ್ತೆಯರಾದ ದಯಾಕಿರಣ್, ಮಧುರಾ, ಪವರ್ಮೆನ್ರಮೇಶ್, ಗ್ರಾ.ಪಂ. ಮಾಜಿಸದಸ್ಯೆ ಭಾಗಿ ಸೇರಿದಂತೆ ಇತರರುಉಪಸ್ಥಿತರಿದ್ದರು. ಪಿಡಿಒ ಆನಂದ ಎ.ಸ್ವಾಗತಿಸಿ, ವಂದಿಸಿದರು. ಸಿಬ್ಬಂದಿಗಳು ಸಹಕರಿಸಿದರು. ಕಾಲೋನಿಯ ಜನರು ಪಾಲ್ಗೊಂಡಿದ್ದರು.