




ಕಡಬ ಟೈಮ್ಸ್ (KADABA TIMES) : ಅಡಿಕೆ ಸುಲಿಯಲು ಹೋದ ಕೂಲಿ ಕಾರ್ಮಿಕನಿಗೆ ವಿಷದ ಹಾವೊಂದು ಕಡಿದ ಪರಿಣಾಮ ಘಟನೆ ಬಂಟ್ವಾಳ ತಾಲೂಕಿನ ತೆಂಕಕಜೆಕಾರು ಗ್ರಾಮದಿಂದ ವರದಿಯಾಗಿದೆ.
ಪುಂಜಾಲಕಟ್ಟೆ ಠಾಣಾ ವ್ಯಾಪ್ತಿಯ ಪಾದೆಮನೆ ಎಂಬಲ್ಲಿ ಮಂಗಳವಾರ ಈ ಘಟನೆ ಸಂಭವಿಸಿದ್ದು ದಿ| ಇಸ್ಮಾಯಿಲ್ ಅವರ ಪುತ್ರ ಅಶ್ರಫ್ (28) ಮೃತಪಟ್ಟವರು.
ಕೂಲಿ ಕಾರ್ಮಿಕರಾಗಿದ್ದ ಅವರು ಪಾಂಡವರಕಲ್ಲಿನ ಮನೆಯೊಂದರಲ್ಲಿ ಮಧಾಹ್ನದ ಹೊತ್ತು ಅಡಿಕೆ ಸುಲಿಯುತ್ತಿದ್ದಾಗ ಕಾಲಿನ ಬೆರಳಿಗೆ ಹಾವು ಕಡಿದಿತ್ತು ಎನ್ನಲಾಗಿದೆ .
ಅವರಿಗೆ 6 ತಿಂಗಳ ಹಿಂದೆಯಷ್ಟೇ ವಿವಾಹವಾಗಿತ್ತು. ಈ ದುರ್ಘಟನೆಯಿಂದ ಅವರ ಕುಟುಂಬ ದುಖ ಸಾಗರದಲ್ಲಿ ಮುಳುಗಿದೆ.