ಕಡಬದಲ್ಲಿ ಮತ್ತೆ ಅಕ್ರಮ ಮರ ಸಾಗಾಟ ದಂಧೆ: ಅರಣ್ಯಾಧಿಕಾರಿಗಳಿಂದ ರೈಡ್,ಮೂರು ವಾಹನ ಸಹಿತ ಮರದ ದಿಮ್ಮಿಗಳು ವಶಕ್ಕೆ

ಕಡಬದಲ್ಲಿ ಮತ್ತೆ ಅಕ್ರಮ ಮರ ಸಾಗಾಟ ದಂಧೆ: ಅರಣ್ಯಾಧಿಕಾರಿಗಳಿಂದ ರೈಡ್,ಮೂರು ವಾಹನ ಸಹಿತ ಮರದ ದಿಮ್ಮಿಗಳು ವಶಕ್ಕೆ

Kadaba Times News

 ಕಡಬ ಟೈಮ್ (KADABA TIMES) :ಪಂಜ ಅರಣ್ಯ ಇಲಾಖಾ ವ್ಯಾಪ್ತಿಯ  ಕೋಡಿಂಬಾಳ ಗ್ರಾಮದ ಗಾಳಿಬೀಡು ಸಮೀಪ ಅಕ್ರಮ ಮರ ಸಾಗಾಟದ ಜಾಲವನ್ನು ಅರಣ್ಯಾಧಿಕಾರಿಗಳು ಪತ್ತೆ ಹಚ್ಚಿ ಹಲವು ಸೊತ್ತುಗಳನ್ನು ವಶಕ್ಕೆ ಪಡೆದ ಘಟನೆ ಜೂ .3ರಂದು ನಡೆದಿದೆ .



ಅರಣ್ಯಾಧಿಕಾರಿಗಳ ದಾಳಿ ಸಂದರ್ಭ ಹಲವು ಮಂದಿ ಪರಾರಿಯಾಗಿರುವುದಾಗಿ ತಿಳಿದು ಬಂದಿದೆ.  ಈ ಪ್ರಕರಣಕ್ಕೆ ಸಂಬಂಧಿಸಿದಂತೆ   ಕೆ.ಎ.19ಎ.ಎ.7499 ನಂಬರಿನ ಅಶೋಕ್ ಲೇಲ್ಯಾಂಡ್ ಲಾರಿ, ಏಸ್ 11 ಟನ್ ಮೊಬೈಲ್ ಕ್ರೇನ್,  ಮಹಾಗನಿ ಮರದ (7.508ಮೀಟರ್ ಉದ್ದ )22 ದಿಮ್ಮಿಗಳನ್ನು ಅರಣ್ಯಾಧಿಕಾರಿಗಳು  ವಶಕ್ಕೆ ಪಡೆದಿದ್ದಾರೆ.


ಈ ಬಹುದೊಡ್ದ ಅಕ್ರಮ ಮರ ಸಾಗಾಟ ಜಾಲದಲ್ಲಿ ಲಾರಿ ಚಾಲಕ ಕಾಸರಗೋಡುವಿನ ಪರಪ್ಪ ನಿವಾಸಿ  ಲತೀಫ್  ಎಂಬಾತನನ್ನು ಮಾತ್ರ ಆರೋಪಿಯಾಗಿ ಗುರುತಿಸಲಾಗಿದೆ. ಮರ ಕೊಟ್ಟವರು,ಮರ ಪಡೆದುಕೊಂಡವರು, ದಲ್ಲಾಳಿಗಳ ವಿವರಗಳನ್ನು ಅರಣ್ಯಾಧಿಕಾರಿಗಳು ಕಲೆ ಹಾಕುತ್ತಿದ್ದಾರೆ. ಈ ದೊಡ್ಡ ದಂಧೆಯಲ್ಲಿ ಸ್ಥಳೀಯರು,ಪ್ರಭಾವಿಗಳು ಸೇರಿರುವುದಾಗಿ ಮಾಹಿತಿ ಲಭಿಸಿದೆ.


ಮಾಹಿತಿಯೊಂದರ ಪ್ರಕಾರ  ಮೇ.3 ರ ರಾತ್ರಿ  ರಾಜಕೀಯ ಮುಖಂಡರೊಬ್ಬರ ಮನೆಯಲ್ಲಿ ಮರಗಳ್ಳರ ತಂಡ  ಸೇರಿ ಚರ್ಚಿಸುತ್ತಿದ್ದಾರೆಂದು ಹೇಳಲಾಗುತ್ತಿದೆ. ಅರಣ್ಯಾಧಿಕಾರಿಗಳ ದಿಢೀರ್ ದಾಳಿಯಿಂದ ಪ್ರಭಾವಿಗಳಲ್ಲಿ ನಡುಕ ಉಂಟಾಗಿದೆ. ಮರಕಳ್ಳತನ ವ್ಯಕ್ತಿಗಳ ರಕ್ಷಣೆಗೆ ಮುಂದಾದವರ ವಿರುದ್ದವೂ ಕಾನೂನು ಕ್ರಮ ಕೈಗೊಳ್ಳಬೇಕೆಂಬ ಆಗ್ರಹ ಕೇಳಿ ಬರುತ್ತಿದ್ದು  ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.   

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top