




ಕಡಬ ಟೈಮ್ (KADABA TIMES) :ಪಂಜ ಅರಣ್ಯ ಇಲಾಖಾ ವ್ಯಾಪ್ತಿಯ ಕೋಡಿಂಬಾಳ ಗ್ರಾಮದ ಗಾಳಿಬೀಡು ಸಮೀಪ ಅಕ್ರಮ ಮರ ಸಾಗಾಟದ ಜಾಲವನ್ನು ಅರಣ್ಯಾಧಿಕಾರಿಗಳು ಪತ್ತೆ ಹಚ್ಚಿ ಹಲವು ಸೊತ್ತುಗಳನ್ನು ವಶಕ್ಕೆ ಪಡೆದ ಘಟನೆ ಜೂ .3ರಂದು ನಡೆದಿದೆ .
ಅರಣ್ಯಾಧಿಕಾರಿಗಳ
ದಾಳಿ ಸಂದರ್ಭ ಹಲವು ಮಂದಿ ಪರಾರಿಯಾಗಿರುವುದಾಗಿ ತಿಳಿದು ಬಂದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆ.ಎ.19ಎ.ಎ.7499 ನಂಬರಿನ ಅಶೋಕ್ ಲೇಲ್ಯಾಂಡ್ ಲಾರಿ, ಏಸ್
11 ಟನ್ ಮೊಬೈಲ್ ಕ್ರೇನ್, ಮಹಾಗನಿ ಮರದ (7.508ಮೀಟರ್
ಉದ್ದ )22 ದಿಮ್ಮಿಗಳನ್ನು ಅರಣ್ಯಾಧಿಕಾರಿಗಳು ವಶಕ್ಕೆ
ಪಡೆದಿದ್ದಾರೆ.
ಈ
ಬಹುದೊಡ್ದ ಅಕ್ರಮ ಮರ ಸಾಗಾಟ ಜಾಲದಲ್ಲಿ ಲಾರಿ ಚಾಲಕ ಕಾಸರಗೋಡುವಿನ ಪರಪ್ಪ ನಿವಾಸಿ ಲತೀಫ್ ಎಂಬಾತನನ್ನು
ಮಾತ್ರ ಆರೋಪಿಯಾಗಿ ಗುರುತಿಸಲಾಗಿದೆ. ಮರ ಕೊಟ್ಟವರು,ಮರ ಪಡೆದುಕೊಂಡವರು, ದಲ್ಲಾಳಿಗಳ ವಿವರಗಳನ್ನು
ಅರಣ್ಯಾಧಿಕಾರಿಗಳು ಕಲೆ ಹಾಕುತ್ತಿದ್ದಾರೆ. ಈ ದೊಡ್ಡ ದಂಧೆಯಲ್ಲಿ ಸ್ಥಳೀಯರು,ಪ್ರಭಾವಿಗಳು ಸೇರಿರುವುದಾಗಿ
ಮಾಹಿತಿ ಲಭಿಸಿದೆ.
ಮಾಹಿತಿಯೊಂದರ
ಪ್ರಕಾರ ಮೇ.3 ರ ರಾತ್ರಿ ರಾಜಕೀಯ ಮುಖಂಡರೊಬ್ಬರ ಮನೆಯಲ್ಲಿ ಮರಗಳ್ಳರ ತಂಡ ಸೇರಿ ಚರ್ಚಿಸುತ್ತಿದ್ದಾರೆಂದು ಹೇಳಲಾಗುತ್ತಿದೆ. ಅರಣ್ಯಾಧಿಕಾರಿಗಳ
ದಿಢೀರ್ ದಾಳಿಯಿಂದ ಪ್ರಭಾವಿಗಳಲ್ಲಿ ನಡುಕ ಉಂಟಾಗಿದೆ. ಮರಕಳ್ಳತನ ವ್ಯಕ್ತಿಗಳ ರಕ್ಷಣೆಗೆ ಮುಂದಾದವರ
ವಿರುದ್ದವೂ ಕಾನೂನು ಕ್ರಮ ಕೈಗೊಳ್ಳಬೇಕೆಂಬ ಆಗ್ರಹ ಕೇಳಿ ಬರುತ್ತಿದ್ದು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.