ಕಡಬ: ಮೊಗೇರ ಸಂಘ ಆಲಂಕಾರು ಮಂಡಲದ ವತಿಯಿಂದ ಶೈಕ್ಷಣಿಕ ಮಾಹಿತಿ ಹಾಗೂ ಪುಸ್ತಕ ವಿತರಣಾ ಕಾರ್ಯಕ್ರಮ

ಕಡಬ: ಮೊಗೇರ ಸಂಘ ಆಲಂಕಾರು ಮಂಡಲದ ವತಿಯಿಂದ ಶೈಕ್ಷಣಿಕ ಮಾಹಿತಿ ಹಾಗೂ ಪುಸ್ತಕ ವಿತರಣಾ ಕಾರ್ಯಕ್ರಮ

Kadaba Times News

ಕಡಬ ಟೈಮ್ಸ್ (KADABA TIMES):  ಮೊಗೇರ ಸಂಘ ಆಲಂಕಾರು ಮಂಡಲ ಮತ್ತು ತನ್ನಿ ಮಾನಿಗ ಮೊಗೇರ  ಮಹಿಳಾ ಸಂಘ ಇದರ ಜಂಟಿ ಆಶ್ರಯದಲ್ಲಿ   ಶೈಕ್ಷಣಿಕ ಮಾಹಿತಿ ಹಾಗೂ ಪುಸ್ತಕ ವಿತರಣಾ ಕಾರ್ಯಕ್ರಮವು  ಜೂ. 8 ರಂದು ಆಲಂಕಾರು ಪಂಚಾಯತ್ ಸಭಾಭವನದಲ್ಲಿ  ನಡೆಯಿತು.



ಉಳ್ಳಾಲ ಕಂದಾಯ ಇಲಾಖೆಯ ಉಪ ತಹಶೀಲ್ದಾರ್  ವಿಜಯ್ ವಿಕ್ರಂ ಗಾಂಧಿ ಪೇಟೆಯವರು ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಉದ್ಘಾಟಿಸಿದರು.  ಈ ವೇಳೆ ಮಾತನಾಡಿದ ಅವರು “ರಾಜ್ಯವ್ಯಾಪಿ ಮುಗೇರ  ಸಂಘಟನೆ ಬಲಗೊಳ್ಳಲು ಆಲಂಕಾರಿನ ಮೊಗೇರ ಸಂಘದ ಕಾರ್ಯಚಟುವಟಿಗಳು  ಪ್ರೇರಣಾದಾಯಕವಾಗಿದೆ.  ಸಾಮಾಜಿಕ, ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಭಿನ್ನ ರೀತಿಯ   ಮಾದರಿ ಕಾರ್ಯಕ್ರಮಗಳು ಸಮುದಾಯದ ಬಲವರ್ಧನೆಗೆ ಸಹಕಾರಿಯಾಗಿದೆ ಎಂದರಲ್ಲದೆ  ಹೆತ್ತವರು ಮಕ್ಕಳಿಗೆ ಮನೆಯಲ್ಲೂ ಶೈಕ್ಷಣಿಕ ಕಲಿಕೆಗೆ ಪೂರಕವಾದ ವಾತಾವರಣ ನಿರ್ಮಿಸಬೇಕು, ದುಶ್ಚಟದಿಂದ ದೂರವಿದ್ದು ಮಕ್ಕಳ ಭವಿಷ್ಯಕ್ಕೆ ಪೂರಕವಾದ ಕೋರ್ಸ್ ಗಳನ್ನು ಕಲಿಸಲು ಉತ್ತೇಜಿಸಬೇಕು .ಅಲ್ಲದೆ ಸ್ಪರ್ಧಾತ್ಮಕ ಪರೀಕ್ಷೆಗೆ ತಯರಾಗಲು ಬಯಸುವ ವಿದ್ಯಾರ್ಥಿಗಳಿಗೆ  ತರಬೇತಿ ನೀಡಲು ಬಯಸಿದ್ದಲ್ಲಿ  ಸಹಕಾರ ಮತ್ತು ಬೆಂಬಲ ನೀಡುವುದಾಗಿ ಸಭೆಯಲ್ಲಿ ಘೋಷಿಸಿದರು.


ಕುಕ್ಕೆ  ಸುಬ್ರಹ್ಮಣ್ಯ ದೇವಸ್ಥಾನದ  ವ್ಯವಸ್ಥಾಪನಾ ಸಮಿತಿ ಸದಸ್ಯ   ಡಾ. ರಘು ಬೆಳ್ಳಿಪ್ಪಾಡಿ ಮಾತನಾಡಿ, ಸಮುದಾಯದ  ಜನರಿಗೆ ಸಂಘದ ಚಟುವಟಿಗಳು ಉಪಯೋಗವಾಗುತ್ತಿದೆ. ದೂರದೃಷ್ಟಿತ್ವದ ಕಾರ್ಯ ಯೋಜನೆಗಳನ್ನು ಅನುಷ್ಟಾನಗೊಳಿಸಲು ಸಮುದಾಯದ ನಾವೆಲ್ಲರೂ  ಒಗ್ಗಟ್ಟಿನಿಂದ ಕೆಲಸ ಮಾಡಬೇಕಿದೆ. ಮೊತ್ತ ಮೊದಲ ಬಾರಿಗೆ ಕುಕ್ಕೆ ಆಡಳಿತ ಮಂಡಳಿಯಲ್ಲಿ ನನ್ನ ಮೂಲಕ   ಮೊಗೇರ ಸಮುದಾಯಕ್ಕೆ  ಪ್ರಾತಿನಿಧ್ಯ ದೊರಕಿದೆ ಎಂದು ಹರ್ಷ ವ್ಯಕ್ತಪಡಿಸಿದರು.



ಮಂಗಳೂರು ರಥಬೀದಿಯ ಅನುದಾನಿತ ಪದವಿಪೂರ್ವ ಕಾಲೇಜಿನ ಇತಿಹಾಸ ಉಪನ್ಯಾಸಕ ಐತ್ತಪ್ಪ  ಅಲೆಕ್ಕಾಡಿ ಅವರು ಮಾತನಾಡಿ ಉನ್ನತ ವ್ಯಾಸಂಗ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳ  ತಯಾರಿಗೆ ಪೂರಕ ವಾತಾವರಣ ನಿರ್ಮಿಸಬೇಕು. ಸಂಘಟನಾತ್ಮಕವಾದ ನಿರ್ಧಾರಗಳಿಂದ ಸಮುದಾಯದ ವಿದ್ಯಾರ್ಥಿಗಳನ್ನು ಉನ್ನತ ಮಟ್ಟಕ್ಕೆ  ಕೊಂಡೊಯ್ಯಲು ಸಾಧ್ಯವಿದೆ ಎಂದರು.


ಬೆಳ್ತಂಗಡಿ  ಉಪವಲಯ ಅರಣ್ಯಾಧಿಕಾರಿ ರವಿಚಂದ್ರ ಪಡುಬೆಟ್ಟು  ಮಾತನಾಡಿ, ಭವಿಷ್ಯದ ಐ.ಪಿ.ಎಸ್, ಐ.ಎ.ಎಸ್  ನಂತಹ ಉನ್ನತ ಮಟ್ಟದ ಸಾಧಕರು ಆಲಂಕಾರಿನಿಂದಲೇ ಹೊರಹೊಮ್ಮಬೇಕು. ಈ ನಿಟ್ಟಿನಲ್ಲಿ ಮಕ್ಕಳಿಗೆ  ಸಂಘಟನೆ ಮೂಲಕ  ಸೂಕ್ತ ಮಾರ್ಗದರ್ಶನ ,ಉತ್ತೇಜನ ನೀಡುವ ಮಹಾ ಕಾರ್ಯಕ್ಕೆ ಮುಂದಾಗಬೇಕೆಂದರು.


ಮೊಗೇರ ಸಂಘದ ಅಧ್ಯಕ್ಷ  ಬಾಲಕೃಷ್ಣ ಕೇಪುಳು ಅಧ್ಯಕ್ಷತೆ  ಮಾತನಾಡಿ , ಸಂಘಟನೆಗೆ ಸೇರಬೇಕೆಂಬ ಇಚ್ಚೆ ಉಳ್ಳವರು  ಹಣ ಕೊಡುವುದು ಬೇಡ,  ಸಮಾಜಮುಖಿ ಕಾರ್ಯಕ್ರಮಗಳ  ಆಯೋಜನೆ ವೇಳೆ  ಸಮಯ ಕೊಡಿ ಎಂದರು .ಅಲ್ಲದೆ ಸಮುದಾಯದಲ್ಲಿ  ಶೈಕ್ಷಣಿಕ  ಅರಿವು ಕಾರ್ಯಕ್ರಮಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದರು. ಜಿಲ್ಲಾ ಪ್ರಶಸ್ತಿ ಪುರಸ್ಕೃತ ಶಿಕ್ಷಕಿ  ಸುಜಾತಾ ಏಕನಾಥ್ ಕೊಂಡಾಣ,  ಅಂಚೆ ಇಲಾಖೆಯ ಉಷಾ ಕೋಡಿ, ಸಂಘದ ಗೌರವ ಸಲಹೆಗಾರ ಕರಿಯ ಗಾಣಂತಿ, ಸಾಮಾಜಿಕ ಕಾರ್ಯಕರ್ತ ವಿಜಯ್ ಪಾಟಾಜೆ ,ಪತ್ರಕರ್ತ ವಿ.ಕೆ ಕಡಬ  ಶುಭಹಾರೈಸಿದರು.


ಕಡಬ ಪೊಲೀಸರಿಂದ ಶಾಲಾ ಮಕ್ಕಳಿಗೆ ಕಾನೂನು ಪಾಠ:  ಸಭೆಗೆ ವಿಶೇಷ ಆಹ್ವಾನಿತರಾಗಿ ಆಗಮಿಸಿದ  ಕಡಬ ಪೋಲಿಸ್ ಠಾಣೆಯ ಸಹಾಯಕ ಉಪನಿರೀಕ್ಷಕ  ಸುಂದರ ಶೆಟ್ಟಿ ,ಹೆಡ್ ಕಾನ್ ಸ್ಟೇಬಲ್ ಹರೀಶ್ , ಮಹಿಳಾ ಪೋಲಿಸ್ ಕಾನ್ಸ್ಟೇಬಲ್  ಕವಿತಾ ಬಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.   ಈ ಸಂದರ್ಭದಲ್ಲಿ ಮಾತನಾಡಿದ ಹೆಡ್ ಕಾನ್ ಸ್ಟೇಬಲ್ ಹರೀಶ್  ಅವರು, ಮಕ್ಕಳು ಹಾಗೂ ಹೆತ್ತವರು ಮೊಬೈಲನ್ನು ಎಚ್ಚರಿಕೆಯಿಂದ ಬಳಸಬೇಕು,  ಸಾಮಾಜಿಕ ಜಾಲತಾಣಗಳಲ್ಲಿ ಬರುವ ವಿವಿಧ್ಯ ವಿಚಾರಗಳನ್ನು ಗಮನಿಸಿ ಉತ್ತಮ ವಿಚಾರಗಳನ್ನು ಮಾತ್ರ ಹಂಚಿಕೆ ಮಾಡಬೇಕು. ಸಾಮಾಜದಲ್ಲಿ ಹಾನಿಯುಂಟು ಮಾಡುವ ಪೊಟೋ ,ವೀಡಿಯೋಗಳನ್ನು ಹಂಚಿಕೊಂಡರೆ ಪ್ರಕರಣ ದಾಖಲಾಗುತ್ತದೆ . ಮಕ್ಕಳು ಲೈಂಗಿಕ ಶೋಷಣೆಗೆ ಒಳಗಾದ ಸಂದರ್ಭ ಹೆತ್ತವರಿಗೆ, ಶಾಲೆಯ ಮುಖಸ್ಥರಿಗೆ ತಿಳಿಸಬೇಕು.ಅಥವಾ ಪೊಲೀಸರಿಗೆ ಮಾಹಿತಿ ನೀಡುವ ಕಾರ್ಯ ಮಾಡಬೇಕು. ಮುಖ್ಯವಾಗಿ ಹೆಣ್ಣು ಮಕ್ಕಳು  ಎಚ್ಚರಿಕೆಯಿಂದ ಇರಬೇಕು  .ಕುಟುಂಬದಲ್ಲೇ ಹೆಚ್ಚು ಮಕ್ಕಳು ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾರೆ,  ಶೋಷಣೆಗೆ ಒಳಗಾಗಿ ಸುಮ್ಮನಿದ್ದರೆ  ತೊಂದರೆ ಕೊಡುವವರನ್ನು ನಾವೇ   ಮತ್ತಷ್ಟು  ಬೆಳೆಸಿದಂತೆ ಆಗುತ್ತದೆ .ಕಾನೂನು ಅರಿವು ಎಲ್ಲರಿಗೂ ಇರಬೇಕೆಂದರು.  ಮಕ್ಕಳಿಗೆ ಹೆತ್ತವರು ವಾಹನಗಳನ್ನು ಚಲಾಯಿಸಲು ಅವಕಾಶ ಮಾಡಿಕೊಡಬಾರದು. ಅನಾಹುತಕ್ಕೆ ಹೆತ್ತವರೇ ಕಾರಣರಾಗುತ್ತಾರೆ ಅಲ್ಲದೆ ಶಿಕ್ಷೆಗೆ ಒಳಗಾಗುತ್ತಾರೆ. ಎಲ್ಲರೂ ಸಂಚಾರಿ ನಿಯಮಗಳನ್ನು ಪಾಲಿಸಬೇಕೆಂದರು.


ಐದು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ: 2025ನೇ ಸಾಲಿನಲ್ಲಿ ಡಿಸ್ಟಿಂಕ್ಷನ್ ಪಡೆದ  ದ್ವೀತಿಯ ಪಿಯುಸಿಯಲ್ಲಿ ಹೆಚ್ಚು ಅಂಕ ಗಳಿಸಿದ  ಪ್ರಿಯಾಶ್ರೀ, ಮಮತಾ, ಸ್ಮಿತಾ  ಹಾಗೂ ಹತ್ತನೇ ತರಗತಿಯಲ್ಲಿ ಅಧಿಕ ಅಂಕ ಪಡೆದ  ಕೃಪಾ ಕೆ ,ತೇಜಸ್  ಕುಮಾರ್ ಅವರುಗಳಿಗೆ  ಪ್ರತಿಭಾ ಪುರಸ್ಕಾರ ಮಾಡಲಾಯಿತು. ಇದೇ ವೇಳೆ 180  ಹೆಚ್ಚು ವಿದ್ಯಾರ್ಥಿಗಳಿಗೆ ಬರೆಯುವ  ಪುಸ್ತಕ ವಿತರಿಸಲಾಯಿತು.

 

ಸಂಘದ ಜೊತೆ ಕಾರ್ಯದರ್ಶಿ  ಮಹಾಬಲ ಪಡುಬೆಟ್ಟು ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಘದ ಸದಸ್ಯ  ಶೀನಪ್ಪ ದೇರೋಡಿ ಸ್ವಾಗತಿಸಿ  ಕೃಷ್ಣ ಗಾಣಂತಿ ಧನ್ಯವಾದವಿತ್ತರು.  ಉಪಾಧ್ಯಕ್ಷ ತಾರಾನಾಥ ಕಡೀರಡ್ಕ ವಾರ್ಷಿಕ ವರದಿ ವಾಚಿಸಿದರು.  ಕಾರ್ಯದರ್ಶಿ ಸಂದೀಪ್ ಪಾಂಜೋಡಿ ಕಾರ್ಯಕ್ರಮ ನಿರೂಪಿಸಿದರು.


ಮಹಿಳಾ ಸಂಘದ ಅಧ್ಯಕ್ಷೆ  ಅಕ್ಷತಾ ಕುಕ್ಕೆಜಾಲು, ಸದಸ್ಯರಾದ ಸುರೇಶ್ ತೋಟಂತಿಲ, ಜಗದೀಶ್ ಕೊಂಡಪ್ಪಾಡಿ, ಭಾರತಿ ಗಾಣಂತಿ,  ಗೀತಾ ದೇರೋಡಿ,  ಮಾಧವ ಖಂಡಿಗ,  ಲೋಲಾಕ್ಷಿ ಮರುವಂತಿಲ, ಕಮಲ ಕಡೀರಡ್ಕ,  ಲಲಿತಾ ಪುರುಷ ಬೆಟ್ಟು, ಗಿರಿಯಪ್ಪ ಕುಕ್ಕೆಜಾಲ್ , ಮೋನಪ್ಪ ಕೊನೆಮಜಲು,   ಭೀಮ್ ಆರ್ಮಿ ಏಕತಾ ಮಿಷನ್ ದ.ಕ  ಜಿಲ್ಲಾ ಉಪಾಧ್ಯಕ್ಷ  ರಾಘವ ಕಳಾರ  ಶಿಕ್ಷಕಿ ನೀಲಮ್ಮ ಪಟ್ಟೆ ,  ಪ್ರಾಧ್ಯಾಪಕಿ ಸುರೇಖಾ ಎಚ್ ,  ಸದಾನಂದ ಕಲ್ಪನೆ,  ದೇವಕಿ ಚಿದಾನಂದ ಬುಡೋಳಿ ಕಾರ್ಯಕ್ರಮ ನಿರ್ವಹಣೆಯಲ್ಲಿ ಸಹಕರಿಸಿದರು   

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top