




ಈ ಕಾರ್ಯಕ್ರಮದಲ್ಲಿ 2025 ನೇಸಾಲಿನ S.S.L.C & ದ್ವಿತೀಯ PUC ಯಲ್ಲಿ ಡಿಸ್ಟಿಂಕ್ಷನ್ (85% ಕ್ಕಿಂತಮೇಲ್ಪಟ್ಟು)ನಲ್ಲಿ ತೇರ್ಗಡೆಯಾದ ಸ್ವಾಜಾತಿ ಬಾಂಧವರ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನಡೆಯಲಿದೆ
ಕಡಬ ಟೈಮ್ಸ್ ( Kadaba times) ಆಲಂಕಾರು: ಇಲ್ಲಿನ ಮೋಗೆರ ಸಂಘ ಮಂಡಲ (ರಿ) ಮತ್ತು ತನ್ನಿಮಾನಿಗ ಮೊಗೇರ ಮಹಿಳಾ ಸಂಘ ಇದರ ಜಂಟಿ ಆಶ್ರಯದಲ್ಲಿ ಶೈಕ್ಷಣಿಕ ಮಾಹಿತಿ ಹಾಗೂ ಪುಸ್ತಕ ವಿತರಣಾ ಕಾರ್ಯಕ್ರಮವು ಜೂ.8 ರಂದು ಆಲಂಕಾರು ಗ್ರಾ.ಪಂ ಸಭಾಂಗಣದಲ್ಲಿ 9:30 ರಿಂದ ನಡೆಯಲಿದೆ.
ಉಳ್ಳಾಲ ವಲಯ ಉಪ ತಹಶೀಲ್ದಾರ್ ವಿಜಯ ವಿಕ್ರಮ್ ಗಾಂಧೀಪೇಟೆ ಉದ್ಘಾಟಿಸಲಿದ್ದು ಸಂಘದ ಅಧ್ಯಕ್ಷ ಬಾಲಕೃಷ್ಣ ಕೇಪುಳು ಅಧ್ಯಕ್ಷತೆಯಲ್ಲಿ ಈ ಕಾರ್ಯಕ್ರ ನಡೆಯಲಿದೆ.
ಮುಖ್ಯಾತಿಥಿಗಳಾಗಿ ಡಾ|| ರಘು ಬೆಳ್ಳಿಪ್ಪಾಡಿ ,ಪ್ರಾಧ್ಯಾಪಕ ಡಾ. ಕುಶಾಲಪ್ಪ ಎಸ್. ಶಿಕ್ಷಕಿ ಶ್ರೀಮತಿ ಸುಜಾತ ಏಕನಾಥ, ಉಪನ್ಯಾಸಕ ಐತ್ತಪ್ಪ ಅಲೆಕ್ಕಾಡಿ, ಅರಣ್ಯಾಧಿಕಾರಿ ರವಿಚಂದ್ರ ಪಡುಬೆಟ್ಟು,ಅಬಕಾರಿ ಇಲಾಖೆಯ ವಿಜಯ್ ಕುಮಾರ್ ಕುಂಬ್ರ, ತಾಲೂಕು ಮೊಗೇರ ಸಂಘದ ಅಧ್ಯಕ್ಷ ಶಶಿಧರ ಬೊಟ್ಟಡ್ಡ, ಅಂಚೆ ಇಲಾಖೆಯ ಉಷಾ ಕೋಡಿ, ಕರಿಯಗಾಣಂತಿ, ವಿಜಯ್ ಪಾಟಾಜೆ ಭಾಗವಹಿಸಲಿದ್ದಾರೆ.
ಈ ಕಾರ್ಯಕ್ರಮದಲ್ಲಿ 2025 ನೇಸಾಲಿನ S.S.L.C & ದ್ವಿತೀಯ PUC ಯಲ್ಲಿ ಡಿಸ್ಟಿಂಕ್ಷನ್ (85% ಕ್ಕಿಂತಮೇಲ್ಪಟ್ಟು)ನಲ್ಲಿ ತೇರ್ಗಡೆಯಾದ ಸ್ವಾಜಾತಿ ಬಾಂಧವರ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನಡೆಯಲಿದೆ ಎಂದು ಸಂಘಟಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.