




ಕಡಬ ಟೈಮ್ಸ್ (KADABA TIMES): ಕೊಕ್ಕಡ ಕೌಕ್ರಾಡಿ ಗ್ರಾಮದ ಕಾಪಿನಬಾಗಿಲು ಎಂಬಲ್ಲಿ ವೃದ್ದರೊಬ್ಬರು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ನಡೆದಿದೆ.
ಕಾಪಿನಬಾಗಿಲು
ನಿವಾಸಿ ಶ್ರೀನಿವಾಸ ಆಚಾರ್ಯ(70) ಎಂಬವರು ಜಿಗುಪ್ಸೆಗೊಂಡು
ಆತ್ಮಹತ್ಯೆಗೆ ಶರಣಾಗಿರುವುದಾಗಿದೆ.
ಮನೆ ಸದಸ್ಯರು ಅಮಲು ಪದಾರ್ಥವನ್ನು ತಂದು ಕೊಡುತ್ತಿದ್ದು, ಇತ್ತೀಚೆಗೆ ಅಮಲು ಪದಾರ್ಥ ಸೇವಿಸಿ ಮಾನಸಿಕ ಅಸ್ವಸ್ಥರಂತೆ ವರ್ತಿಸಿ ಮನೆಯಲ್ಲಿ ಎಲ್ಲರಿಗೂ ಕಿರಿಕಿರಿ ಮಾಡುತ್ತಿದ್ದ ಕಾರಣ ಅಮಲು ಪದಾರ್ಥವನ್ನು ತಂದು ಕೊಡುತ್ತಿರಲಿಲ್ಲ.
ಅಮಲು ಪದಾರ್ಥ ಸೇವಿಸುವ ದೀರ್ಘಕಾಲದ ಚಟ ಹೊಂದಿದ್ದ ಮೃತರು ಜೂ.12 ರಂದು ಸಂಜೆ 6 ಗಂಟೆಗೆ ಮನೆಯಿಂದ ಹೊರನಡೆದ ಅವರು, ರಾತ್ರಿಯಾದರೂ ಮನೆಗೆ ಮರಳದೆ ಕಾಣೆಯಾಗಿದ್ದರು. ಅವರಿಗಾಗಿ ಹುಡುಕಾಟ ಆರಂಭಿಸಿದ ಕುಟುಂಬಸ್ಥರು ಮನೆಯ ಸಮೀಪದಲ್ಲಿರುವ ಆವರಣವಿಲ್ಲದ ಬಾವಿಯ ಬಳಿ ತೆರಳಿದಾಗ, ಅಲ್ಲಿ ಅವರ ಕನ್ನಡಕ ಹಾಗೂ ಬೈರಸ್ ಪತ್ತೆಯಾಗಿತ್ತು.
ಬಾವಿಯೊಳಗೆ
ಟಾರ್ಚ್ಲೈಟ್ ಹಾಕಿ ಪರಿಶೀಲಿಸಿದರೂ ಅದೇ ರಾತ್ರಿ ಯಾವ ಮಾಹಿತಿಯೂ ಲಭಿಸಿರಲಿಲ್ಲ. ಆದರೆ ಮರುದಿನ
ಜೂ.13ರ ಬೆಳಿಗ್ಗೆ, ಪುನಃ ಪರಿಶೀಲನೆ ನಡೆಸಿದಾಗ ಬಾವಿಯೊಳಗೆ ಶ್ರೀನಿವಾಸ ಆಚಾರ್ಯ ಅವರ ಮೃತದೇಹ ಪತ್ತೆಯಾಗಿದೆ
ಈ ಕುರಿತು ಮೃತರ ಪುತ್ರ ಶ್ರೀಕಾಂತ ಆಚಾರ್ಯ ಅವರು ದೂರು ನೀಡಿದ್ದು ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ
ಪ್ರಕರಣ ದಾಖಲಾಗಿದೆ..