ಇಚಿಲಂಪಾಡಿ ಗ್ರಾಮದಲ್ಲಿ ರಸ್ತೆ ಉದ್ಘಾಟಿಸಿದ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ

ಇಚಿಲಂಪಾಡಿ ಗ್ರಾಮದಲ್ಲಿ ರಸ್ತೆ ಉದ್ಘಾಟಿಸಿದ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ

Kadaba Times News

ಈ ರಸ್ತೆಗೆಯ  ಅಭಿವೃದ್ಧಿಗೆ 2023–24ನೇ ಸಾಲಿನ ಶಾಸಕರ ಸ್ಥಳೀಯ ಪ್ರದೇಶ ಅಭಿವೃದ್ಧಿ ನಿಧಿಯಿಂದ ರೂ.5 ಲಕ್ಷ  ರೂ ಅನುದಾನ ಮಂಜೂರುಗೊಂಡಿತ್ತು.

ಕಡಬ ಟೈಮ್ಸ್ , ಇಚಿಲಂಪಾಡಿ:  ಇಲ್ಲಿನ  ಇಚಿಲಂಪಾಡಿ ಗ್ರಾಮದ ಕುಡಾಲದಿಂದ ಅರಿಮಜಲು  ಕಡೆಗೆ ತೆರಳುವ ರಸ್ತೆ ಕಾಂಕ್ರೀಟಿಕರಣ  ಕಾರ್ಯ ಪೂರ್ಣಗೊಂಡಿದ್ದು ಮೇ 24 ರಂದು  ಸುಳ್ಯ  ಶಾಸಕಿ ಕುಮಾರಿ ಭಾಗೀರಥಿ ಮುರುಳ್ಯ  ಅವರು ತೆಂಗಿನಕಾಯಿ ಒಡೆದು ರಸ್ತೆ ಉದ್ಘಾಟಿಸಿದ್ದಾರೆ.



ಈ ವೇಳೆ  ಮಾತನಾಡಿದ  ಶಾಸಕಿಯವರು “ಸಾರ್ವಜನಿಕರ  ಸುರಕ್ಷಿತ ಸಂಚಾರದ ದೃಷ್ಟಿಯಿಂದ ಈ ರಸ್ತೆಯನ್ನು ನಿರ್ಮಿಸಲಾಗಿದೆ.ಎಲ್ಲರಿಗೂ ಅನುಕೂಲವಾಗಲಿ ಎಂದರು. 


ಈ ರಸ್ತೆಗೆಯ  ಅಭಿವೃದ್ಧಿಗೆ 2023–24ನೇ ಸಾಲಿನ ಶಾಸಕರ ಸ್ಥಳೀಯ ಪ್ರದೇಶ ಅಭಿವೃದ್ಧಿ ನಿಧಿಯಿಂದ ರೂ.5 ಲಕ್ಷ  ರೂ ಅನುದಾನ ಮಂಜೂರುಗೊಂಡಿತ್ತು.


ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಕೃಷ್ಣ ಶೆಟ್ಟಿ ಕಡಬ, ಪುತ್ತೂರು ಭೂ ಅಭಿವೃದ್ಧಿ ಬ್ಯಾಂಕ್ ಅಧ್ಯಕ್ಷ ಭಾಸ್ಕರ ಗೌಡ ಇಚಿಲಂಪಾಡಿ.ಇಚಿಲಂಪಾಡಿ ಶಕ್ತಿ ಕೇಂದ್ರದ ಅಧ್ಯಕ್ಷ ದಿವ್ಯೇಶ ಕಲ್ಯ, ಗುತ್ತಿಗೆದಾರ ವಿನೋದ್, ಸಂದೇಶ್ ಹಾಗೂ ರಸ್ತೆ ಬಳಕೆದಾರರು ಉಪಸ್ಥಿತರಿದ್ದರು. 

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top