




ಕಡಬ ಟೈಮ್ಸ್(KADABA TIMES): ಕಡಬ: ಇಲ್ಲಿನ ತಾಲೂಕು ಒಕ್ಕಲಿಗ ಗೌಡ ಸೇವಾ ಸಂಘದ ವತಿಯಿಂದ ಎಲ್ಲಾ ಸಮುದಾಯದ ಪ್ರಸ್ತುತ ಸಾಲಿನ ಪ್ರೌಢ ಶಿಕ್ಷಣದಲ್ಲಿ 9 ನೇ ತರಗತಿ, 10 ನೇ ತರಗತಿ ಮತ್ತು 10 ನೇ ತರಗತಿ ಉತ್ತೀರ್ಣಗೊಂಡ ವಿದ್ಯಾರ್ಥಿಗಳಿಗೆ ಹಾಗೂ ದ್ವಿತೀಯ ಪಿ.ಯು.ಸಿ ಮತ್ತು ದ್ವಿತೀಯ ಪಿ.ಯು.ಸಿ ಉತ್ತೀರ್ಣಗೊಂಡ ವಿದ್ಯಾರ್ಥಿಗಳಿಗೆ ಮೇ.17 ರಂದು ಮುಂದಿನ ಶಿಕ್ಷಣ ಮತ್ತು ಉದ್ಯೋಗವಕಾಶಗಳು, ಉದ್ಯಮಶೀಲತೆ & ಕೌಶಲ್ಯಾಭಿವೃದ್ದಿ, ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿ ಮತ್ತು ಅವಕಾಶಗಳ ಬಗ್ಗೆ ಏರ್ಪಡಿಸಿರುವ ಶೈಕ್ಷಣಿಕ ಮಾರ್ಗದರ್ಶನ ಮತ್ತು ಮಾಹಿತಿ ಕಾರ್ಯಗಾರ ಹಮ್ಮಿಕೊಂಡಿದೆ.
ಪೂರ್ವಾಹ್ನ 9:30 ರಿಂದ ಹೊಸಮಠದಲ್ಲಿರುವ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ತಾಲೂಕು ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ಸುರೇಶ್ ಗೌಡ ಬೈಲು ಸಭಾಧ್ಯಕ್ಷತೆಯಲ್ಲಿ ಈ ಕಾರ್ಯಗಾರ ನಡೆಅಯ್ಲಿದ್ದು ನಿವೃತ್ತ ಮುಖ್ಯಗುರುಗಳಾದ ದೇವಣ್ಣ ಗೌಡ ನೆಲ್ಲ ಉದ್ಘಾಟಿಸಲಿದ್ದಾರೆ.
ದೇವನಹಳ್ಳಿ ನಾಗಾರ್ಜುನ ತಾಂತ್ರಿಕ ಮಹಾ ವಿದ್ಯಾಲಯದ ಪ್ರಾಧ್ಯಾಪಕ: ಡಾ. ಮಹೇಶ್ , ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವ ವಿದ್ಯಾಲಯ ಬೆಳಗಾಂ ಇಲ್ಲಿನ ವಿಶ್ರಾಂತ ಪ್ರಾದೇಶಿಕ ನಿರ್ದೇಶಕ ಡಾ. ಶಿವಕುಮಾರ್ ಹೊಸೊಳಿಕೆ, ಅಬಕಾರಿ ಇಲಾಖೆಯ ವಿಶ್ರಾಂತ ಜಂಟಿ ಆಯುಕ್ತ ಗೋಪಾಲಕೃಷ್ಣ ಪುಯಿಲ ಪಾಲ್ಗೊಳ್ಳಲಿದ್ದಾರೆ. ಹೆಚ್ಚಿನ ಮಾಹಿತಿಗಾಗಿ 7483085156/8050991722 ಸಂಖ್ಯೆಯನ್ನು ಸಂಪರ್ಕಿಸಬಹುದು.
1. ನೋಂದಾವಣೆ ಮತ್ತು ಉಪಹಾರ :
ಸಮಯ ಪೂರ್ವಾಹ್ನ 9:00 ರಿಂದ 9:30
2. ಉದ್ಘಾಟನಾ ಸಮಾರಂಭ :
ಸಮಯ ಪೂರ್ವಾಹ್ನ 10:00 ರಿಂದ10:20
3. ಮೊದಲ ಅಧಿವೇಶನ :
ವಿಷಯ : ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ ಶಿಕ್ಷಣದ ನಂತರ
ಮುಂದೇನು? ಮತ್ತು ಉದ್ಯೋಗವಕಾಶಗಳು
4. ಎರಡನೇ ಅಧಿವೇಶನ :
ಸಮಯ : ಪೂರ್ವಾಹ್ನ 11:35 ರಿಂದ 12:15
ಸಹಯ : ಉದ್ಯಮಶೀಲತೆ ಮತ್ತು ಕೌಶಲ್ಯಾಭಿವೃದ್ಧಿ
5. ಕೊನೆಯ ಅಧಿವೇಶನ :
ಸಮಯ : ಮಧ್ಯಾಹ್ನ 12:20 ರಿಂದ 12:50
ವಿಷಯ : ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿ ಮತ್ತು ಅವಕಾಶಗಳು
6. ಸಮಾರೋಪ ಸಮಾರಂಭ
7. ಭೋಜನ