




ಕಡಬ ಟೈಮ್ಸ್ ,ಬಿಳಿನೆಲೆ: ಕುಕ್ಕೆ ಸುಬ್ರಹ್ಮಣ್ಯದ ಕುಮಾರಧಾರ ಬಳಿ ವ್ಯಾಪಾರ ಮಾಡುತ್ತಿದ್ದ ಬಿಳಿನೆಲೆ ಗ್ರಾಮದ ಯುವಕನೋರ್ವ ಹೃದಯಾಘಾತದಿಂದ ನಿಧರಾಗಿದ್ದಾರೆ.
ಕಡಬ
ತಾಲೂಕಿನ ಬಿಳಿನೆಲೆ ಗ್ರಾಮದ ಕೈಕಂಬ ನಿವಾಸಿ ಬಾಲಚಂದ್ರ ಗೌಡ (38) ಹೃದಯಾಘಾತಕ್ಕೆ ಬಲಿಯಾದವರು.
ಈ
ಹಿಂದೆ ಇವರು ಕಡಬ ಕಾಲೇಜ್ ರಸ್ತೆಯ ಬೆಸ್ಟ್ ಎಲೆಕ್ಟ್ರಾನಿಕ್ಸ್ ಮತ್ತು
ಗುರುಶ್ರೀ ಆಗ್ರೋ ಸಂಸ್ಥೆಯಲ್ಲಿ ಕೆಲಸ ಮಾಡಿದ್ದರು. ಪ್ರಾಮಾಣಿಕತೆ ಮತ್ತು ಸ್ನೇಹಭಾವದಿಂದ
ಎಲ್ಲರೊಂದಿಗೂ
ಬೆರೆತು ಅಪಾರ ಸ್ನೇಹಿತ ಬಳಗ ಹೊಂದಿದ್ದರು. ಮೃತರು ಪತ್ನಿ,
ಇಬ್ಬರು ಮಕ್ಕಳನ್ನು ಅಗಲಿದ್ದಾರೆ.