




KADABA TIMES (ಕಡಬ ಟೈಮ್ಸ್): ಕಡಬ ತಾಲೂಕಿನ ಕಾಣಿಯೂರು ಮೂಲದ, ಪುತ್ತೂರಿನ ಪರ್ಲಡ್ಕ ಬಳಿ ಒಂಟಿಯಾಗಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ ಮಹಿಳೆಯೊಬ್ಬರ ಮನೆಯ ಬಾಗಿಲಿಗೆ ಮೇ 21 ರ ರಾತ್ರಿ ಹೊರಗಿನಿಂದ ಬೀಗ ಜಡಿದ ಘಟನೆ ನಡೆದಿದೆ.
ಮಾಹಿತಿ
ತಿಳಿದ ಕೂಡಲೇ ಪೊಲೀಸರು ಮತ್ತು ಹಿಂದೂ ಸಂಘಟನೆಯ ಕಾರ್ಯಕರ್ತರು ಸ್ಥಳಕ್ಕೆ ದೌಡಾಯಿಸಿದರು. ಪರಿಸ್ಥಿತಿಯ ಗಂಭೀರತೆ ಅರಿತು, ಮನೆಯ ಬೀಗ ಒಡೆದು ಮಹಿಳೆಯನ್ನು ರಕ್ಷಿಸಿ, ವಿಚಾರಣೆಗಾಗಿ ಠಾಣೆಗೆ ಕರೆದೊಯ್ಯಲಾಯಿತು ಎಂದು ಮೂಲಗಳಿಂದ ತಿಳಿದು ಬಂದಿದೆ.
ಮಹಿಳೆಯು ಕೆಲವು ವರ್ಷಗಳಿಂದ ಪರ್ಲಡ್ಕದಲ್ಲಿ ವಾಸವಾಗಿದ್ದು. ಸವಣೂರಿನ ಅನ್ಯಧರ್ಮೀಯ ವ್ಯಕ್ತಿಯೊಬ್ಬನ ಸ್ನೇಹವಿತ್ತು ಎನ್ನಲಾಗಿದೆ . ಸವಣೂರಿನ ವ್ಯಕ್ತಿಗೆ, ತಾನು ಇಲ್ಲದ ವೇಳೆ ಬೇರೊಬ್ಬ ಪುರುಷ ಆ ಮನೆಗೆ ಭೇಟಿ ನೀಡುತ್ತಿದ್ದಾನೆ ಎಂಬ ಸಂಶಯದ ಹಿನ್ನೆಲೆ ಆತ ರಾತ್ರಿ ಆಕೆಯ ಮನೆಯಿಂದ ಹೊರಡುವಾಗ, ಆಕೆಯನ್ನು ಒಳಗೆ ಕೂಡಿಹಾಕಿ, ಹೊರಗಿನಿಂದ ಚಿಲಕ ಜಡಿದು ಹೋಗುತ್ತಿದ್ದ ಎನ್ನಲಾಗಿದೆ. ನಿನ್ನೆ ಸವಣೂರಿನ ವ್ಯಕ್ತಿ ಹೋದ ಸ್ವಲ್ಪ ಹೊತ್ತಿನಲ್ಲೇ, ಮಹಿಳೆಯನ್ನು ಭೇಟಿಯಾಗಲು ‘ಮತ್ತೊಬ್ಬ’ ವ್ಯಕ್ತಿ ಆ ಮನೆಗೆ ಆಗಮಿಸಿದ್ದು ಬಾಗಿಲಿಗೆ ಬೀಗ ಕಂಡ ಆತ ಹಿಂದೂ ಸಂಘಟನೆಗಳ ಕಾರ್ಯಕರ್ತರಿಗೆ ಫೋನ್ ಮಾಡಿ ವಿಷಯ ಮುಟ್ಟಿಸಿದ್ದಾನೆ ಎಂದು ತಿಳಿದು ಬಂದಿದೆ.
ಸವಣೂರಿನ
ವ್ಯಕ್ತಿಯೇ ನನ್ನ ಸುರಕ್ಷತೆಗಾಗಿ ಹೊರಗಿನಿಂದ ಬೀಗ ಹಾಕಿ ಹೋಗಿದ್ದ ಎಂದು
ಆಕೆ ಸಬೂಬು ನೀಡಿದ್ದು ದೂರು ನೀಡಲು ಸಹ ಆಕೆ ಸ್ಪಷ್ಟವಾಗಿ
ನಿರಾಕರಿಸಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ. ಮಹಿಳೆಯ ಹೇಳಿಕೆ ಈ ಹೇಳಿಕೆ ಪೊಲೀಸರನ್ನೇ
ದಂಗುಬಡಿಸಿದೆ.
ಮಹಿಳೆಯ ಈ ಅನಿರೀಕ್ಷಿತ ಹೇಳಿಕೆ ಮತ್ತು ದೂರು ನೀಡಲು ನಿರಾಕರಿಸಿದ ಕಾರಣ, ಪೊಲೀಸರು ಆಕೆಯನ್ನು ಮನೆಗೆ ವಾಪಸ್ ಕಳುಹಿಸಿದ್ದಾರೆ. ಆದರೆ, ಈ ಘಟನೆ ಸ್ಥಳೀಯವಾಗಿ ಕೆಲಕಾಲ ಆತಂಕ ಸೃಷ್ಟಿಸಿತ್ತು . ಸದ್ಯ, “ಆ ಒಂಟಿ ಮಹಿಳೆಗೂ, ಸವಣೂರಿನ ಅನ್ಯಧರ್ಮೀಯ ವ್ಯಕ್ತಿಗೂ, ಹಾಗೂ ತಡರಾತ್ರಿ ಆಕೆಯನ್ನು ಹುಡುಕಿಕೊಂಡು ಬಂದಿದ್ದ ‘ಮೂರನೇ’ ವ್ಯಕ್ತಿಗೂ ಇರುವ ನಿಜವಾದ ಸಂಬಂಧವಾದರೂ ಏನು? , ಬೀಗದ ಹಿಂದಿನ ಅಸಲಿ ಕಥೆಯೇನು?” ಎಂಬುದು ಸಾರ್ವಜನಿಕ ವಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.