




ಕಡಬ ಟೈಮ್ಸ್ (KADABA TIMES) :ಸುಬ್ರಹ್ಮಣ್ಯ: ಇಲ್ಲಿನ ಠಾಣಾ ವ್ಯಾಪ್ತಿಯ ಗುತ್ತಿಗಾರಿನ ಚತ್ರಪ್ಪಾಡಿ ಕೊರಗಜ್ಜನ ಕಟ್ಟೆಯಲ್ಲಿ ಮೇ 29ರ ರಾತ್ರಿ ಕಳವು ಪ್ರಕರಣ ನಡೆದಿದೆ.
ಕಟ್ಟೆಯಲ್ಲಿ ದೇವರ ಸೇವೆಗೆ ಬಳಸಲಾಗುತ್ತಿದ್ದ ಬೆಳ್ಳಿ ಮತ್ತು ತಾಮ್ರದ ಮುಟ್ಟಾಳೆಗಳನ್ನು ಅಪರಿಚಿತ ವ್ಯಕ್ತಿಗಳು ಕಳವು ಮಾಡಿರುವುದು ಕಂಡು ಬಂದಿದೆ . ಈ ಬಗ್ಗೆ ಕೊರಗಜ್ಜ ಸನ್ನಿದಾನದ ಆಡಳಿತ ಮಂಡಳಿಯ ಸದಸ್ಯರು ಸುಬ್ರಹ್ಮಣ್ಯ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ.
ಘಟನೆ ನಡೆದ ನಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿರುವುದಾಗಿ ತಿಳಿದು ಬಂದಿದೆ .ಕಳವುಗೊಂಡ ಮುಟ್ಟಾಳೆಗಳು ಕೊರಗಜ್ಜನ ನೇಮೋತ್ಸವ ಸಂದರ್ಭದಲ್ಲಿ ಬಳಸಲಾಗುತ್ತಿತ್ತು.
ಈ ಕಳ್ಳತನ ಕೃತ್ಯ ಭಕ್ತರಲ್ಲಿ ಆಘಾತ ಮೂಡಿಸಿದ್ದು, ಅಪರಾಧಿಗಳನ್ನು ತಕ್ಷಣವೇ ಪತ್ತೆಹಚ್ಚಿ ಕ್ರಮ ಕೈಗೊಳ್ಳುವಂತೆ ಸ್ಥಳೀಯರಿಂದ ಒತ್ತಾಯ ಕೇಳಿ ಬಂದಿದೆ.