




ಕಡಬ ಟೈಮ್ಸ್ (KADABA TIMES) :ಕಡಬದ ಹಳೇಸ್ಟೇಷನ್ ಬಳಿ ಓಮಿನಿ ವಾಹನವನ್ನು ಓವರ್ ಟೇಕ್ ಮಾಡುವ ಭರದಲ್ಲಿ ರಸ್ತೆಯ ತೀರಾ ಬಲ ಬದಿಗೆ ಹೋಗಿ ಎದುರುಗಡೆಯಿಂದ ಬರುತ್ತಿದ್ದ ಬೈಕ್ ಗೆ ಡಿಕ್ಕಿ ಹೊಡೆದು ಬೈಕ್ ಸವಾರ ದುರ್ಮರಣ ಹೊಂದಿದ ಘಟನೆಗೆ ಸಂಬಂಧಿಸಿ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಭೀಕರ ಅಪಘಾತದಲ್ಲಿ ಬೈಕ್ ಸವಾರ ಕಡಬ ತಾಲೂಕಿನ ಕೋಡಿಂಬಾಳ ಗ್ರಾಮದ ಉದೇರಿ ನಿವಾಸಿ ದಿ. ಶ್ರೀಧರ ಗೌಡ ಎಂಬವರ ಪುತ್ರ ಬಿಶ್ವಜಿತ್(23) ಮೃತಪಟ್ಟಿದ್ದರು. ಯುವಕ ಮರ್ಧಾಳದ ಪಾಲತ್ತಡ್ಕದಲ್ಲಿ ಫ್ಯಾಬ್ರಿಕೇಷನ್ ವೃತ್ತಿ ಮಾಡುತ್ತಿದ್ದು.ಎಂದಿನಂತೆ ಕೆಲಸ ಮುಗಿಸಿ ಮನೆಗೆ ಹೊರಟು ಕಡಬ ಕಡೆ ಬೈಕಿನಲ್ಲಿ ಬರುತ್ತಿದ್ದಾಗ ಹಳೆಸ್ಟೇಷನ್ ಬಳಿ ಸುಬ್ರಹ್ಮಣ್ಯ ಕಡೆಗೆ ತೆರಳುತ್ತಿದ್ದ ಕೆಎಸ್ಸಾರ್ಟಿಸಿ ಬಸ್ ಒಮ್ನಿ ಕಾರೊಂದನ್ನು ಹಿಂದಿಕ್ಕಿ ಹೋಗುರವ ಭರದಲ್ಲಿ ಬೈಕ್ ಗೆ ಡಿಕ್ಕಿ ಹೊಡೆದಿತ್ತು.
ಇದೀಗ ಈ ಘಟನೆಗೆ ಸಂಬಂಧಿಸಿ ನೆಕ್ಕಿಲಾಡಿ ಗ್ರಾಮದ ಕೈಯೊಳೆ ನಿವಾಸಿ ಕುಮಾರ ಸುಬ್ರಹ್ಮಣ್ಯ ಎಂಬವರು ಈ ಬಗ್ಗೆ ಠಾಣೆಗೆ
ದೂರು ನೀಡಿದ್ದಾರೆ. ಕಡಬದಲ್ಲಿರುವ ತನ್ನ ಅಣ್ಣನ ಅಂಗಡಿಯಾದ
ಯಶೋಧ
ಜನರಲ್ ಸ್ಟೋರ್ ಗೆ ಬಂದು
ಓಮಿನಿ ವಾಹನದಲ್ಲಿ ಕಡಬದಿಂದ ಹೊರಟು ಸುಬ್ರಹ್ಮಣ್ಯ ಮಾರ್ಗವಾಗಿ ಹೋಗುತ್ತಿದ್ದೆ. ಕೃಷ್ಣನಗರ ಎಂಬಲ್ಲಿಗೆ ರಾತ್ರಿ ಸಮಯ 07-40 ಗಂಟೆಗೆ ತಲುಪಿದಾಗ ವಾಹನದ
ಹಿಂದಿನಿಂದ ಒಂದು KSRTC ಬಸ್ಸನ್ನು ಅದರ ಚಾಲಕನು
ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ತಾನು
ಚಲಾಯಿಸುತ್ತಿದ್ದ ಓಮಿನಿ ವಾಹನವನ್ನು ಓವರ್ ಟೇಕ್ ಮಾಡುವ
ಸಮಯ ರಸ್ತೆಯ ತೀರಾ ಬಲ ಬದಿಗೆ ಹೋಗಿ
ಎದುರುಗಡೆಯಿಂದ ಬರುತ್ತಿದ್ದ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದೆ.
ಈ ಸಂದರ್ಭ ಬಸ್ ರಸ್ತೆಯ ಎಡ ಬದಿಗೆ ಹೋಗಿ ನಿಂತಿರುತ್ತದೆ. ಡಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರ ವಾಹನದ ಸವಾರ ರಸ್ತೆಗೆ ಬಿದ್ದಿರುತ್ತಾನೆ. . ಕೂಡಲೇ ತಾನು ಹಾಗೂ ಬಸ್ಸಿನ ಚಾಲಕ ಸೇರಿ ಉಪಚರಿಸಿದ್ದು ಆ ವೇಳೆ ಅಲ್ಲಿಗೆ ವಿಘ್ನೇಶ್ ಎಂಬವರು ಬಂದಿರುತ್ತಾರೆ. ಅಪಘಾತಕ್ಕೊಳಗಾದ ದ್ವಿಚಕ್ರ ವಾಹನ ನಂಬ್ರ ನೋಡಲಾಗಿ KA 21 EB 5031 ನೇ ಆಗಿದ್ದು, ಅಪಘಾತಪಡಿಸಿದ ಬಸ್ ನಂಬ್ರ ನೋಡಲಾಗಿ KA 19 F 2959 ನೇ ಬಸ್ ಆಗಿರುತ್ತದೆ. ಕೂಡಲೇ ಮರ್ಧಾಳ ಕಡೆಯಿಂದ ಬಂದ ಒಂದು ಬೊಲೆರೊ ವಾಹನದಲ್ಲಿ ಗಾಯಾಳುವನ್ನು ಚಿಕಿತ್ಸೆ ಬಗ್ಗೆ ಕಡಬ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದು , ಅಲ್ಲಿಯ ವೈದ್ಯಾಧಿಕಾರಿಯವರು ಪರೀಕ್ಷಿಸಿ 07-50 ಗಂಟೆ ಸಮಯಕ್ಕೆ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಕಡಬ ಪೊಲೀಸ್ ಠಾಣಾ ಅ.ಕ್ರ 38/2025 ಕಲಂ: 281,106 BNS-2023 ಯಂತೆ ಪ್ರಕರಣ ದಾಖಲಾಗಿರುತ್ತದೆ.