




ತಡೆಯಾಜ್ಞೆಗೆ ಯಾರಾದರೂ ಕೋರ್ಟಿಗೆ ಹೋಗಬಹುದೆಂಬ ನಿರೀಕ್ಷೆ ಮೊದಲೇ ಇದ್ದುದರಿಂದ ಹರೀಶ್ ಇಂಜಾಡಿ ಮತ್ತವರ ತಂಡ ಕೋರ್ಟ್ ನಲ್ಲಿ ಕೇವಿಯೆಟ್ ಹಾಕಿತ್ತು. ದಾವೆಯಲ್ಲಿ ಪ್ರಧಾನವಾಗಿ ಹರೀಶ್ ಇಂಜಾಡಿಯವರ ಬಗ್ಗೆ ದೋಷಾರೋಪ ಮಾಡಲಾಗಿತ್ತು.
![]() |
ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಇಂಜಾಡಿ(KADABA TIMES) |
ಕಡಬ ಟೈಮ್ಸ್ (KADABA TIMES): ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರು ಮತ್ತು ಸದಸ್ಯರ ವಿರುದ್ಧ ಹೈಕೋರ್ಟ್ ನಲ್ಲಿ ಸಲ್ಲಿಸಲಾದ ದಾವೆಯ ಕುರಿತಂತೆ ಮೇ.20 ರಂದು ವಿಚಾರಣೆಗೆ ಬಂದಾಗ ಮೇ.29 ಕ್ಕೆ ಮುಂದೂಡಲ್ಪಟ್ಟಿತ್ತು. ಇಂದು ಹೈಕೋರ್ಟ್ ನಲ್ಲಿ ದಾವೆ ವಿಚಾರಣೆಗೆ ಬಂದಾಗ ಜೂ.3 ಕ್ಕೆ ಮುಂದೂಡಲ್ಪಟ್ಟಿರುವುದಾಗಿ ತಿಳಿದುಬಂದಿದೆ.
ದೇವಸ್ಥಾನಕ್ಕೆ ನಕಲಿ ಚೆಕ್ ನೀಡಿ ವಂಚಿಸಿದವರನ್ನೇ ದೇವಸ್ಥಾನಕ್ಕೆ ಟ್ರಸ್ಟಿಯಾಗಿ ನೇಮಿಸಲಾಗಿದೆ, ಅಲ್ಲದೆ ಈಗ ಅವರೇ ಅಧ್ಯಕ್ಷರಾಗಿದ್ದಾರೆ, ಅವರು ರೌಡಿಶೀಟರ್ ಕೂಡ ಆಗಿದ್ದರು, ವ್ಯವಸ್ಥಾಪನಾ ಸಮಿತಿಯ ಸದಸ್ಯರಲ್ಲಿ ಹಲವರು ರಾಜಕೀಯ ಪಕ್ಷದ ಪದಾಧಿಕಾರಿಗಳಾಗಿದ್ದಾರೆ, ಸುಬ್ರಹ್ಮಣ್ಯದಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವಾಗಲೇ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಘೋಷಣೆ ಮತ್ತು ಅಧ್ಯಕ್ಷರ ಆಯ್ಕೆ ನಡೆಸಲಾಗಿದೆ, ಈ ಎಲ್ಲಾ ಹಿನ್ನೆ ಲೆಯಲ್ಲಿ ಈಗ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ನೇಮಕಗೊಂಡಿರುವ ಇಡೀ ವ್ಯವಸ್ಥಾಪನಾ ಸಮಿತಿಯನ್ನು ರದ್ದುಪಡಿಸಬೇಕು ಮತ್ತು ವಿಚಾರಣೆ ಮುಗಿಯುವ ವರೆಗೆ ತಡೆಯಾಜ್ಞೆ ನೀಡಬೇಕು ಎಂದು ಸುಬ್ರಹ್ಮಣ್ಯದಲ್ಲಿ ಬೆಳ್ಳಿ ಬಾರ್ ನಡೆಸುತ್ತಿರುವ ಉದ್ಯಮಿ ಆಕಾಶ್ ಎಂಬವರು ನ್ಯಾಯಾಲಯದ ಮೆಟ್ಟಿಲೇರಿದ್ದರು.
ಆಕಾಶ್ ರವರು ಕಮಿಟಿಗೆ
ತಡೆಯಾಜ್ಞೆ ಕೋರಿ ಹೈಕೋರ್ಟ್ ನಲ್ಲಿ ಸಲ್ಲಿಸಿರುವ
ದಾವೆ ಮೇ.15 ರಂದು ಗುರುವಾರ ವಿಚಾರಣೆಗೆ ಸ್ವೀಕೃತಗೊಂಡಿತ್ತು. ಪರ
ವಿರೋಧ ಆಲಿಸಿದ ನ್ಯಾಯಾಧೀಶರು ವಿಚಾರಣೆಯನ್ನು ಮೇ.29 ಕ್ಕೆ ಮುಂದೂಡಿದ್ದರು.ಇದೀಗ ಜೂ.3 ಕ್ಕೆ ಮುಂದೂಡಲ್ಪಟ್ಟಿದೆ.
ದಾವೆಯಲ್ಲಿ ಪ್ರಧಾನವಾಗಿ ಹರೀಶ್ ಇಂಜಾಡಿಯವರ ಬಗ್ಗೆ ದೋಷಾರೋಪ ಮಾಡಲಾಗಿತ್ತು. ಅಲ್ಲದೆ ಮಹೇಶ್ ಕರಿಕ್ಕಳ, ಹರೀಶ್ ಇಂಜಾಡಿ, ಲೀಲಾ ಮನಮೋಹನ್, ಸೌಮ್ಯ ಭರತ್ ಇವರೆಲ್ಲ ಹಾಲಿ ಗ್ರಾಮ ಪಂಚಾಯತ್ ಸದಸ್ಯರಾಗಿದ್ದಾರೆ, ರಾಜಕೀಯ ಪಕ್ಷದಲ್ಲಿ ಗುರುತಿಸಿ ಕೊಂಡಿರುವವರು, ಲೀಲಾ ಮನಮೋಹನರ ನೇಮಕಕ್ಕೆ ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ ಭಂಡಾರಿಯವರು ಸಚಿವರಿಗೆ ಶಿಫಾರಸು ಪತ್ರ ನೀಡಿದ್ದಾರೆ, ಈ ಎಲ್ಲಾ ಕಾರಣದಿಂದ ದೇವಸ್ಥಾನದ ಹಿತದೃಷ್ಠಿಯಿಂದ ಈಗಿನ ಕಮಿಟಿಯನ್ನು ರದ್ದುಪಡಿಸಬೇಕು. ತಕ್ಷಣಕ್ಕೆ ತಡೆಯಾಜ್ಞೆ ನೀಡಬೇಕು ಎಂದು ದೂರುದಾರರು ನ್ಯಾಯಾಲಯವನ್ನು ವಿನಂತಿಸಿ ಕೊಂಡಿದ್ದರು.
ಈ ರೀತಿ ತಡೆಯಾಜ್ಞೆಗೆ ಯಾರಾದರೂ ಕೋರ್ಟಿಗೆ ಹೋಗಬಹುದೆಂಬ ನಿರೀಕ್ಷೆ ಮೊದಲೇ ಇದ್ದುದರಿಂದ ಹರೀಶ್ ಇಂಜಾಡಿ ಮತ್ತವರ ತಂಡ ಕೋರ್ಟ್ ನಲ್ಲಿ ಕೇವಿಯೆಟ್
ಹಾಕಿತ್ತು.ಆಕಾಶ್ ಪರವಾಗಿ ಹೈಕೋರ್ಟ್ ನ್ಯಾಯವಾದಿ ಬೆಂಗಳೂರಿನ ವಿವೇಕ್ ಸುಬ್ಬರೆಡ್ಡಿ ವಾದಿಸಿದ್ದರು.