


ಅಧಿಕಾರಿಗಳ ಮಾಹಿತಿ ಪ್ರಕಾರ ದಕ್ಷಿಣ ಕನ್ನಡ ಜಿಲ್ಲೆಯ 13 ನಗರ ಸ್ಥಳೀಯಾಡಳಿತ ಸಂಸ್ಥೆಗಳಾದ ಪುತ್ತೂರು, ಉಳ್ಳಾಲ ನಗರಸಭೆ, ಬಂಟ್ವಾಳ, ಮೂಡುಬಿದಿರೆ, ಸೋಮೇಶ್ವರ ಪುರಸಭೆ, ಮೂಲ್ಕಿ, ಕೋಟೆಕಾರು, ಸುಳ್ಯ, ಬೆಳ್ತಂಗಡಿ, ವಿಟ್ಲ, ಕಡಬ, ಬಜ್ಪೆ, ಕಿನ್ನಿಗೋಳಿ ಪ.ಪಂ ವ್ಯಾಪ್ತಿಯ ಸಾವಿರದಷ್ಟು ಫಲಾನುಭವಿಗಳಿಗೆ 2.70 ಕೋ.ರೂ. ಬರಬೇಕಿದ್ದು, 2024ರ ಜನವರಿ ಅಂತ್ಯದವರೆಗೆ 70 ಸಾವಿರ ರೂ.ಗಳಷ್ಟು ಅನುದಾನ ಬಂದಿದೆ.
ಕಡಬ ಟೈಮ್, ಪ್ರಮುಖ ಸುದ್ದಿ: ಪ್ರತೀ ನಗರ ಸ್ಥಳೀಯಾಡಳಿತ ಸಂಸ್ಥೆಗಳು 2023ರ ಪ್ರಾರಂಭದಲ್ಲೇ ಮುಖ್ಯಮಂತ್ರಿ ಅಮೃತ ನಗರೋತ್ಥಾನ ಯೋಜನೆ ಹಂತ-4ರ ಕ್ರಿಯಾ ಯೋಜನೆಯಲ್ಲಿ ಅನುದಾನ ಮೀಸಲಿರಿಸಿ ಜಿಲ್ಲಾ ನಗರಾಭಿವೃದ್ಧಿ ಕೋಶ (ಡಿಯುಡಿಸಿ) ದಿಂದ ಅನುಮೋದನೆ ಪಡೆದು ಅರ್ಹ ಫಲಾನುಭವಿಗಳಿಗೆ ಸಹಾಯಧನದ ಮಂಜೂರಾತಿ- ಕಾಮಗಾರಿ ಆದೇಶ ಪತ್ರ ನೀಡಿತ್ತು. ಆದರೆ ಆದೇಶ ಪತ್ರ ಪಡೆದ ಬಹುತೇಕ ಮಂದಿಗೆ ಬಿಡಿಗಾಸು ಕೂಡ ಬಂದಿಲ್ಲ ಎಂಬ ಆರೋಪ ಕೇಳಿಬಂದಿದೆ.
ನಿಮ್ಮ ವ್ಯಾಪ್ತಿಯಲ್ಲಿ ಫಲಾನುಭವಿಗಳನ್ನು ಗುರುತಿಸಿ ಅವರಿಂದ ಕೆಲಸ ಮಾಡಿಸಿ ಬಿಲ್ ಕಳುಹಿಸಿ ಎಂದು ಜಿಲ್ಲಾ ನಗರಾಭಿವೃದ್ಧಿ ಕೋಶದ ಅಧಿಕಾರಿಗಳು ಸ್ಥಳೀಯಾಡಳಿತ ಸಂಸ್ಥೆಗಳ ಸಿಬಂದಿಗೆ ಒತ್ತಡ ಹೇರಿದ್ದು, ಅವರು ಫಲಾನು ಭವಿಗಳಿಗೆ ಒತ್ತಡ ಹಾಕಿ ಕೆಲಸ ಮಾಡಿಸಿ ಕೊಂಡಿದ್ದಾರೆ. ಯೋಜನೆಯಲ್ಲಿ ಪರಿಶಿಷ್ಟರು, ಅಂಗವಿಕಲರು, ಇತರ ಬಡ ಕುಟುಂಬಗಳಿಗೆ ಮನೆ
ದುರಸ್ತಿ, ಶೌಚಾಲಯ ನಿರ್ಮಾಣ, ಅಂಗವಿಕಲರಿಗೆ ಸಹಾಯಧನ, ವಿದ್ಯಾರ್ಥಿ ವೇತನ, ಸ್ವಉದ್ಯಮ ಆರಂಭ ಮೊದಲಾದ ಕಾರ್ಯಗಳಿಗೆ ಮಂಜೂರಾತಿ ಪತ್ರ ನೀಡಲಾಗಿದೆ.
2023ರ ವಿಧಾನಸಭಾ ಚುನಾವಣೆಯ
ಆಸುಪಾಸಿನಲ್ಲಿ ಮಂಜೂರಾತಿ ಆದೇಶ ಪತ್ರಗಳನ್ನು ನೀಡಲಾಗಿದ್ದು, ಆದರೆ ಈ ವೇಳೆ ಸರಕಾರದ
ಬದಲಾವಣೆಯಿಂದ ಗೊಂದಲ ಉಂಟಾಗಿತ್ತು. ಬಳಿಕ ಈ ಕುರಿತು ಸರಕಾರಕ್ಕೆ
ಪತ್ರ ಬರೆದಾಗ ಪೂರಕ ಸ್ಪಂದನೆ ವ್ಯಕ್ತವಾಗಿ ಇಂತಹ ಅನುದಾನಗಳನ್ನು ಬಿಡುಗಡೆ ಮಾಡಬಹುದು ಎಂಬ ಒಪ್ಪಿಗೆಯನ್ನು ನೀಡಿತ್ತು. ಬಳಿಕ ಕೆಲವು ಮಂದಿಗೆ ಅನುದಾನ ಬಂದಿರುವುದು ಬಿಟ್ಟರೆ ಬಹುತೇಕ ಮಂದಿಗೆ ಇನ್ನೂ ಕೂಡ ಬಿಡಿಗಾಸು ಕೂಡ ಬಂದಿಲ್ಲ.
ಲೋಕಾಯುಕ್ತಕ್ಕೆ ದೂರು: ಮೂಡುಬಿದಿರೆ ಪುರಸಭಾ ವ್ಯಾಪ್ತಿಯ ಫಲಾನುಭವಿ ಎಂ. ಬಾಲಕೃಷ್ಣ ನಾಯಕ್ ಇಂತಹ ಅವ್ಯವಸ್ಥೆಯ ವಿರುದ್ಧ ಕರ್ನಾಟಕ ಲೋಕಾಯುಕ್ತ ಹಾಗೂ ರಾಜ್ಯ ಪೌರಾಡಳಿತ ನಿರ್ದೇಶನಾಲಯಕ್ಕೆ ದೂರು ನೀಡಿದ್ದು,2023ರ ಫೆಬ್ರವರಿ ತಿಂಗಳಲ್ಲಿ ನಮಗೆ ಮಂಜೂರು ಪತ್ರವನ್ನು ನೀಡಿದ್ದು, ಮೂರ್ನಾಲ್ಕು ದಿನಗಳಲ್ಲಿ ಹಣ ಬರುತ್ತದೆ ಎಂದು ಹೇಳಿದ್ದರು. ಆದರೆ 2 ವರ್ಷವಾಗುತ್ತಿದ್ದರೂ ಇನ್ನೂ ಸಹಾಯಧನ ಬಂದಿಲ್ಲ. ಹೀಗಾಗಿ ತಾವುಗಳು ಫಲಾನುಭವಿಗಳಿಗೆ ನ್ಯಾಯೋಚಿತವಾಗಿ ಸಿಗಬೇಕಾದ ಹಣವನ್ನು ಒದಗಿಸಿಕೊಡುವಂತೆ ಆಗ್ರಹಿಸಿದ್ದಾರೆ.
ದ.ಕ.ಕ್ಕೆ
2 ಕೋ.ರೂ : ಅಧಿಕಾರಿಗಳ ಮಾಹಿತಿ ಪ್ರಕಾರ ದಕ್ಷಿಣ ಕನ್ನಡ ಜಿಲ್ಲೆಯ 13 ನಗರ ಸ್ಥಳೀಯಾಡಳಿತ ಸಂಸ್ಥೆಗಳಾದ ಪುತ್ತೂರು,
ಉಳ್ಳಾಲ ನಗರಸಭೆ, ಬಂಟ್ವಾಳ, ಮೂಡುಬಿದಿರೆ, ಸೋಮೇಶ್ವರ ಪುರಸಭೆ, ಮೂಲ್ಕಿ, ಕೋಟೆಕಾರು, ಸುಳ್ಯ, ಬೆಳ್ತಂಗಡಿ, ವಿಟ್ಲ, ಕಡಬ, ಬಜ್ಪೆ, ಕಿನ್ನಿಗೋಳಿ ಪ.ಪಂ ವ್ಯಾಪ್ತಿಯ
ಸಾವಿರದಷ್ಟು ಫಲಾನುಭವಿಗಳಿಗೆ 2.70 ಕೋ.ರೂ. ಬರಬೇಕಿದ್ದು,
2024ರ
ಜನವರಿ ಅಂತ್ಯದವರೆಗೆ 70 ಸಾವಿರ ರೂ.ಗಳಷ್ಟು ಅನುದಾನ
ಬಂದಿದೆ. ಉಳಿದಂತೆ 2 ಕೋ.ರೂ.ಗಳಷ್ಟು
ಅನುದಾನ ಇನ್ನೂ ಕೂಡ ಬಂದಿಲ್ಲ ಎಂದು ಜಿಲ್ಲಾ ನಗರಾಭಿವೃದ್ಧಿ ಕೋಶದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
20 ದಿನಗಳ ಹಿಂದೆಯಷ್ಟೇ ಪ್ರಭಾರ ನೆಲೆಯಲ್ಲಿ ಜವಾಬ್ದಾರಿ ತೆಗೆದು ಕೊಂಡಿದ್ದು, ಅನುದಾನ ಬಾರದೇ ಇರು ವುದು ಹಾಗೂ ಕಚೇರಿಯಿಂದ ತೆಗೆದು ಕೊಂಡಿರುವ ಕ್ರಮದ ಕುರಿತು ಎಂಜಿನಿಯರ್ ಅವರಿಂದ ಮಾಹಿತಿ ಪಡೆದು ಕೊಳ್ಳು ತ್ತೇನೆ. ಅಗತ್ಯವಿದ್ದರೆ ಸರಕಾರಕ್ಕೆ ಪತ್ರ ಬರೆದು ಅನುದಾನ ಬಾಕಿ ಯಾಗಿ ರುವ ಕುರಿತು ಮನವಿ ಮಾಡಲಾಗುವುದು.– ಜಯಲಕ್ಷ್ಮೀ, ಯೋಜನಾ ನಿರ್ದೇಶಕರು, ಜಿಲ್ಲಾ ನಗರಾಭಿವೃದ್ಧಿ ಕೋಶ,ದ.ಕ