


ಕಡಬ ಟೈಮ್, ಸುಳ್ಯ: ಕಾಡಿನಲ್ಲಿ ಸಿಗುವ ತಿನ್ನಬಹುದಾದ ಐರೋಳ್ ಎನ್ನುವ ಹಣ್ಣನ್ನು ವರ್ಷದ ಹಿಂದೆ ಸೇವಿಸಿ ಅಸ್ವಸ್ಥಗೊಂಡು ಅಲ್ಪ ಗುಣಮುಖರಾಗಿದ್ದ ವ್ಯಕ್ತಿ ಮೃತಪಟ್ಟ ಘಟನೆ ಸುಳ್ಯದಿಂದ ವರದಿಯಾಗಿದೆ.
ಅಮರಪಟ್ನೂರು ಗ್ರಾಮದ ಕುಳ್ಳಾಜೆಯಲ್ಲಿ ಸಂಭವಿಸಿದೆ. ಕುಳ್ಳಾಜೆಯ ಲೋಕಯ್ಯ (60) ಮೃತರು.
2023ರ ಅಕ್ಟೋಬರ್ನಲ್ಲಿ ಲೋಕಯ್ಯ ಹಾಗೂ ಅವರ ಮಗಳು ಲೀಲಾವತಿ ಅವರು ಐರೋಳ್ ಹಣ್ಣನ್ನು ತಿಂದಿದ್ದು, ಪರಿಣಾಮ ಇಬ್ಬರೂ ಅಸ್ವಸ್ಥಗೊಂಡಿದ್ದರು. ಔಷಧ ಪಡೆದುಕೊಂಡಿದ್ದ ಲೋಕಯ್ಯ ಅವರು ಗುಣಮುಖರಾಗಿದ್ದರೆ, ಲೀಲಾವತಿ ಕೆಲವು ದಿನಗಳ ಬಳಿಕ ಮೃತರಾಗಿದ್ದರು.
ಲೋಕಯ್ಯ ಗುಣಮುಖರಾಗಿದ್ದರೂ, ಕೆಲವು ದಿನಗಳಿಂದ ಅಸೌಖ್ಯಗೊಂಡಿದ್ದು, ಬುಧವಾರ ಮೃತರಾಗಿದ್ದಾರೆ.