ನೆಲ್ಯಾಡಿಯಲ್ಲಿ ಏಕಾಏಕಿ ಹೆಜ್ಜೇನು ದಾಳಿ: ಮಹಿಳೆ ಸಹಿತ ಇಬ್ಬರು ಆಸ್ಪತ್ರೆಗೆ ದಾಖಲು

Kadaba Times News

ಕಡಬ ಟೈಮ್,  ನೆಲ್ಯಾಡಿ: ದಿಢೀರ್  ಹೆಜ್ಜೇನು ದಾಳಿಗೆ ಇಬ್ಬರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ .9ರಂದು ಮುಂಜಾನೆ ನೆಲ್ಯಾಡಿ ಗ್ರಾಮದಲ್ಲಿ ನಡೆದಿದೆ.



ಮಾದೇರಿ ಸಮೀಪದ  ತುಂಬೆತ್ತಡ್ಕ ನಿವಾಸಿ ರೂಪಾವತಿ(30ವ.),  ತಿಮ್ಮಪ್ಪ ಕುಂಬಾರ(49ವ.)ಗಾಯಗೊಂಡವರು.


ರೂಪಾವತಿ ಎಂಬವರ ಮನೆ ಸಮೀಪವೇ ಏಕಾಏಕಿ ಹೆಜ್ಜೇನುಗಳು ದಾಳಿ ಮಾಡಿವೆ. ಇದರಿಂದ ವಿಚಲಿತಗೊಂಡು ಬೊಬ್ಬೆ ಹೊಡೆದಿದ್ದು ಇದನ್ನು ಕೇಳಿ ಪಕ್ಕದ ಮನೆಯ ತಿಮ್ಮಪ್ಪ ಕುಂಬಾರ ಅವರು ರಕ್ಷಣೆಗಾಗಿ ಗೋಣಿ ಚೀಲ ಹಿಡಿದು ಓಡಿ ಬಂದಿದ್ದಾರೆ.


ಈ ವೇಳೆ ಹೆಜ್ಜೇನುಗಳು ಇಬ್ಬರ ಮೇಲೆಯೂ ದಾಳಿ ಮಾಡಿದೆ ಎಂದು ತಿಳಿದು ಬಂದಿದೆ. ಗಾಯಾಳುಗಳು ನೆಲ್ಯಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆಗಾಗಿ ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ.


ಅಲ್ಲೇ ಸಮೀಪದ ಮನೆಯ ಉಪೇಂದ್ರ ಎಂಬವರ ಕೊಟ್ಟಿಗೆಯಲ್ಲಿದ್ದ ಗಬ್ಬದ ಹಸುವಿನ ಮೇಲೂ ಹೆಜ್ಜೇನು ದಾಳಿ ನಡೆಸಿದ್ದು ಹಸು ಸಹ ತೀವ್ರ ಅಸ್ವಸ್ಥಗೊಂಡಿದೆ ಎಂಬ ಮಾಹಿತಿಯನ್ನು  ಸ್ಥಳೀಯರು ನೀಡಿದ್ದಾರೆ.


#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top