ಆರು ಜನ ನಕ್ಸಲರು ಕಾಡಿನಿಂದ ನಾಡಿಗೆ ಆಗಮನ :ಕೊನೆ ಕ್ಷಣದಲ್ಲಿ ಶರಣಾಗತಿ ಜಾಗ ಬದಲಾವಣೆ

ಆರು ಜನ ನಕ್ಸಲರು ಕಾಡಿನಿಂದ ನಾಡಿಗೆ ಆಗಮನ :ಕೊನೆ ಕ್ಷಣದಲ್ಲಿ ಶರಣಾಗತಿ ಜಾಗ ಬದಲಾವಣೆ

Kadaba Times News

ಕಡಬ ಟೈಮ್, ಪ್ರಮುಖ ಸುದ್ದಿ: ಚಿಕ್ಕಮಗಳೂರು ಜಿಲ್ಲಾಡಳಿತ ಮುಂದೆ ಶರಣಾಗಬೇಕಿದ್ದ ಆರು ಜನ ನಕ್ಸಲರು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಮ್ಮುಖದಲ್ಲಿ ಶರಣಾಗತಿಯಾಗಲಿದ್ದಾರೆ.


ಆರು ಜನ ನಕ್ಸಲರ ಪೋಷಕರು ಚಿಕ್ಕಮಗಳೂರು ಜಿಲ್ಲಾಡಳಿದ ಮುಂದೆ ತಮ್ಮವರನ್ನು ನೋಡಲು ಕಾತರದಿಂದ ಕಾದಿದ್ದರು. ಆದರೆ, ಇದು ದಿಢೀರ್ ಬದಲಾವಣೆಗೊಂಡಿದ್ದು, ಇದೀಗ ಪೋಷಕರನ್ನು ಬೆಂಗಳೂರಿಗೆ ಕಳಿಸಲು ವಾಹನದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.

ಶರಣಾಗತಿ ಸಮಿತಿಯ ಜೊತೆ ನಕ್ಸಲರ ತಂಡ(KADABA TIMES)


ಇಂದು (ಜ.8) ಮಧ್ಯಾಹ್ನ ಅಥವಾ ಸಂಜೆ ವೇಳೆಗೆ ಬೆಂಗಳೂರಿನಲ್ಲಿ ಸಿ.ಎಂ.ಸಮ್ಮುಖದಲ್ಲಿ ಶರಣಾಗಲಿದ್ದಾರೆ. ನರಸಿಂಹರಾಜಪುರವರೆಗೂ ಆಗಮಿಸಿದ ನಕ್ಸಲರು ನಂತರ ಸಿ.ಎಂ ಆದೇಶದ ಮೇರೆಗೆ ಮಾರ್ಗ ಬದಲಾಯಿಸಿ ಬೆಂಗಳೂರಿಗೆ ತೆರಳಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಚಿಕ್ಕಮಗಳೂರಿಗೆ  ಆಗಮಿಸಿದ ಸಂಘಟನೆ ಮುಖಂಡರು ಬೆಂಗಳೂರಿನತ್ತ ಮುಖ ಮಾಡಿದ್ದಾರೆ.


ಬೆಂಗಳೂರಿಗೆ ತೆರಳುವ ವಿಚಾರವನ್ನು ಶಾಂತಿಗಾಗಿ ಎಂದು ನಾಗರಿಕ ವೇದಿಕೆ ಮುಖಂಡ ಕೆ.ಎಲ್.ಅಶೋಕ್ ಘೋಷಿಸಿರುವುದಾಗಿ ಮಾದ್ಯಮವೊಂದು ವರದಿ ಬಿತ್ತರಿಸಿದೆ.


ಚಿಕ್ಕಮಗಳೂರು ಜಿಲ್ಲೆಯ ಮುಂಡಗಾರು ಲತಾ, ಬಾಳೆಹೊಳೆಯ ವನಜಾಕ್ಷಿ, ದಕ್ಷಿಣ ಕನ್ನಡ ಜಿಲ್ಲೆಯ ಸುಂದರಿ ಕುತ್ಲೂರು, ರಾಯಚೂರಿನ ಮಾರಪ್ಪಅರೋಲಿ, ತಮಿಳುನಾಡಿನ ಕೆ.ವಸಂತ್, ಕೇರಳದ ಟಿ.ಎನ್.ಜೀಶ ಅವರು ಸಮಾಜದ ಮುಖ್ಯವಾಹಿನಿಗೆ ಬರಲಿದ್ದಾರೆ.


ಬೆಳ್ತಂಗಡಿಯ ಸುಂದರಿ 17 ವರ್ಷಗಳ ಬಳಿಕ ನಾಡಿಗೆ:  ಆರು ಜನ ನಕ್ಸಲರ ತಂಡದಲ್ಲಿರುವ ಬೆಳ್ತಂಗಡಿ ತಾಲೂಕಿನ ಕುತ್ಲೂರು ಗ್ರಾಮದ ಕೋಟ್ಯಂದಡ್ಕ ನಿವಾಸಿ ಸುಂದರಿ @ಗೀತಾ (46) ಎರಡು ದಶಕದ ಹೋರಾಟವನ್ನು ಅಂತ್ಯ ಹಾಡಿಲಿದ್ದಾರೆ . 2007 ರಲ್ಲಿ ಹೋರಾಟ ಮಾಡಲು ಮನೆ ಬಿಟ್ಟು ಹೋಗಿ ಭೂಗತವಾಗಿದ್ದುಕೊಂಡು ಬಂದೂಕು ಹಿಡಿದ 17 ವರ್ಷದ ಬಳಿಕ ಮತ್ತೆ ನಾಡಿಗೆ ಬರುತ್ತಿದ್ದಾರೆ  ಭೂಗತವಾಗಿ ಯಾರಿಗೂ ಕಾಣದೆ ಇದ್ದ ಸುಂದರಿ ಮೊದಲ ಬಾರಿಗೆ ಕಾಡಿನಲ್ಲಿ ತಲೆಗೆ ಕ್ಯಾಪ್ ಧರಿಸಿ ಇಂದು ತಿಂಡಿ ಮಾಡುತ್ತಿರುವ ದೃಶ್ಯ ಮಾದ್ಯಮಗಳಿಗೆ ಲಭ್ಯವಾಗಿದೆ. 

 

ಕಾಡಿನಲ್ಲಿ ಆರು ನಕ್ಸಲರು ಚಿಕನ್ , ಪಲಾವ್ , ಕೇಸರಿಬಾತ್ ತಯಾರಿಸಿದ್ದು  ಇದನ್ನು ಶರಣಾಗತಿ ಸಮಿತಿಯವರಿಗೆ ನೀಡಿ ಎಲ್ಲರೂ ಜೊತೆಯಲ್ಲಿ ಸೇವಿಸಿ ಕಾಡಿನ ಹೋರಾಟಕ್ಕೆ ಗುಡ್ ಬೈ ಹೇಳಿರುವುದಾಗಿ ತಿಳಿದು ಬಂದಿದೆ. 

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top