


ಕಡಬ:ಪಟ್ಟಣ ಸುದ್ದಿ: ಜೇಸಿಐ ಕಡಬ ಕದಂಬ ಘಟಕದ ವತಿಯಿಂದ ಸರಸ್ವತೀ ವಿದ್ಯಾಲಯದ ಪ್ರೌಢಶಾಲೆಯ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಪರೀಕ್ಷಾ ಪೂರ್ವ ಸಿದ್ಧತೆ ತರಬೇತಿ ಕಾರ್ಯಾಗಾರ ಆಯೋಜಿಸಲಾಗಿತ್ತು.
![]() |
ತರಬೇತಿ ಕಾರ್ಯಕ್ರಮ ನಡೆಸಿಕೊಡುತ್ತಿರುವುದು(KADABA TIMES) |
ಕಡಬ ಸರಸ್ವತೀ ವಿದ್ಯಾಲಯದ ಸಂಚಾಲಕಿ ಸವಿತಾ ಶಿವಸುಬ್ರಹ್ಮಣ್ಯ ಭಟ್ ಉದ್ಘಾಟಿಸಿ ಮಾತನಾಡಿ, ನಿರಂತರ ಅಭ್ಯಾಸ ಮಾಡುವ ಮೂಲಕ ನಾವು ಯಾವುದೇ ಪರೀಕ್ಷೆಗಳನ್ನು ಯಶಸ್ವಿಯಾಗಿ ಎದುರಿಸಬಹುದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
![]() |
ಕಾರ್ಯಕ್ರಮ ಉದ್ಘಾಟಿಸಿದ ಸಂದರ್ಭ( KADABA TIMES) |
ಜೇಸಿಐ ಬೆಳ್ತಂಗಡಿಯ ವಲಯ ತರಬೇತುದಾರ ಶಂಕರ್ರಾವ್
ಶುಭ ಹಾರೈಸಿದರು. ಸರಸ್ವತೀ ವಿದ್ಯಾಲಯ ಪ್ರೌಢಶಾಲೆಯ ಮುಖ್ಯಶಿಕ್ಷಕಿ ಶೈಲಶ್ರೀ ರೈ, ಜೇಸಿ ನಿಕಟಪೂರ್ವಾಧ್ಯಕ್ಷ
ಜಾಫಿರ್ ಮಹಮ್ಮದ್, ಕಾರ್ಯಕ್ರಮ ನಿರ್ದೇಶಕ ಶ್ರಿಕೃಷ್ಣ ಎಂ.ಆರ್., ರಾಜೇಶ್ ಎ.ಕೆ. ಮುಂತಾದವರು ಈ
ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಜೇಸಿ ಅಧ್ಯಕ್ಷೆ ವಿಶ್ರುತಾ ರಾಜೇಶ್ ಅಧ್ಯಕ್ಷತೆ
ವಹಿಸಿ ಸ್ವಾಗತಿಸಿದರು. ಮಮತಾ ದಿನೇಶ್ ಅತಿಥಿಯನ್ನು ಪರಿಚಯಿಸಿ ದರು. ಕಾರ್ಯದರ್ಶಿ ನವ್ಯಕೃಷ್ಣ ವಂದಿಸಿದರು.