ಮೀಸಲು ಅರಣ್ಯ ಪ್ರದೇಶದಲ್ಲಿ ಪಾರ್ಟಿ ಮಾಡಲು ಸಿದ್ದತೆ: ಕಡಬದ ಯುವಕರು ಸಹಿತ 30 ಮಂದಿ ವಶಕ್ಕೆ

ಮೀಸಲು ಅರಣ್ಯ ಪ್ರದೇಶದಲ್ಲಿ ಪಾರ್ಟಿ ಮಾಡಲು ಸಿದ್ದತೆ: ಕಡಬದ ಯುವಕರು ಸಹಿತ 30 ಮಂದಿ ವಶಕ್ಕೆ

Kadaba Times News

 ಕಡಬ ಟೈಮ್ಸ್, ಸುಳ್ಯ:  ಹೊಸ ವರ್ಷದ ನೆಪದಲ್ಲಿ ಮೀಸಲು ಅರಣ್ಯ ಪ್ರದೇಶದಲ್ಲಿ ಪಾರ್ಟಿ ಮಾಡಲು ಸಿದ್ದತೆ ಮಾಡುತ್ತಿದ್ದ ತಂಡವೊಂದನ್ನು ಅರಣ್ಯ ಇಲಾಖೆಯವರು ವಶಕ್ಕೆ ಪಡೆದ ಘಟನೆ ನಡೆದಿತ್ತು.


ಸುಳ್ಯದ  ತೊಡಿಕಾನ ಸಮೀಪದ ಕೊಡಗು ಭಾಗಮಂಡಲ ರೇಂಜ್ ಮೀಸಲು ಅರಣ್ಯ ಪ್ರದೇಶದ ಕೋಳಿಕಲ್ಲು ಮಲೆ ಬೆಟ್ಟಕ್ಕೆ ಅಕ್ರಮವಾಗಿ ಪ್ರವೇಶಿಸಿ ಪಾರ್ಟಿಗೆ ಸಿದ್ಧತೆ ಮಾಡುತ್ತಿದ್ದ ಆರೋಪದಲ್ಲಿ 30 ಮಂದಿ ಯುವಕರನ್ನು ಅರಣ್ಯ ಇಲಾಖೆಯವರು ವಶಕ್ಕೆ ಪಡೆದಿದ್ದರು.

ಮುಚ್ಚಳಿಕೆ ಬರೆಯುತ್ತಿರುವ ಬಂಧಿತರು


ಮಂಗಳವಾರ ಸಂಜೆ ಕೋಳಿಕಲ್ಲು ಮಲೆ ಬೆಟ್ಟಕ್ಕೆ ಯುವಕರು ತೆರಳುತ್ತಿದ್ದಂತೆ ಯುವಕರು ಅರಣ್ಯ ಇಲಾಖೆಯ ವಶವಾಗಿದ್ದರು ಎನ್ನಲಾಗಿದೆ. ಬಂಧಿತರಿಂದ  ಮುಚ್ಚಳಿಕೆ ಬರೆಸಿ, ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ ಎಂದು ತಿಳಿದು ಬಂದಿದೆ.


ಆಲೆಟ್ಟಿ ಗ್ರಾಮದ ರೋಶನ್ ಕೆ.(27), ಪೆರಾಜೆಯ ಮನು (39), ಪಿ.ಜಿ. ಜೀತನ್ (21), ಸಂಪಾಜೆ ಗ್ರಾಮದ ಹರ್ಷಿತ್ ಎಚ್.ಟಿ. (38), ಮಂಡೆಕೋಲು ಗ್ರಾಮದ ನಿತಿನ್ (19), ಅಡ್ಕಾರಿನ ಸಚಿನ್ (26), ಪೆರಾಜೆ ಗ್ರಾಮದ ಸಂಜಯ್ (22), ಜಾಲ್ಸೂರು ಗ್ರಾಮದ ಶ್ರವಣ್ ಕೆ.ಜೆ., ಸುಳ್ಯದ ಸಂಪ್ರೀತ್ (29), ಆಶಿತ್ ಎ.ಎಸ್.,(28), ಕೀರ್ತನ್ ಎ.ಆರ್.(26), ಮೋಕ್ಷಿತ್ ಡಿ.ಯು. (23), ಉಪದೇಶ್ ಕೆ. (29), ದಿಶಾಲ್ ಕೆ. (26), ಪೆರಾಜೆಯ ಚಂದ್ರಶೇಖರ ಕೆ.ಆರ್., ಧನಂಜಯ ಕೆ.ಸಿ.(24), ಕಡಬದ ಸುನೀಶ್ ಜಿ. (29), ಪೆರಾಜೆಯ ಶ್ರೀಧರ ಸಿ. (32), ವಿಟ್ಲದ ಮಹೇಶ್ ನಾಯಕ್( 21), ನೆಲ್ಲೂರಿನ ಶಶಿಕಾಂತ(24), ಆಲೆಟ್ಟಿ ಗ್ರಾಮದ ಮುರಳೀಧರ್ ಪಿ.ಸಿ. (25), ಪೆರಾಜೆಯ ಜೀವಿತ್ ಕೆ.ಜಿ. (27), ಮನೋಜ್ ಸಿ.ಎನ್. (27), ಗೂನಡ್ಕದ ಪವನ್ ಕುಮಾರ್ ಜಿ. (27), ಸುಳ್ಯದ ಹರಿಶ್ಚಂದ್ರ .ಕೆ(29), ಅಲಂಕಾರು ಗ್ರಾಮದ ಶಿವಪ್ರಸಾದ(20), ಲಿಂಗಪ್ಪ ನಾಯಕ, ಜಯಪ್ರಕಾಶ್ ಜಿ. (30), ಪೆರಾಜೆಯ ಪ್ರದೀಪ್ ಪಿ.ಬಿ. (20), ದರ್ಶನ್ ಪಿ.ಪಿ. (20), ನಿತಿನ್ ಬಿ.ಪಿ. (23), ಆಕಾಶ್ (21) ಗರಗುಂಜ ಅಕ್ರಮ ಪ್ರವೇಶ ಮಾಡಿದವರು.


#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top