



ಕಡಬ ಟೈಮ್, ನೆಲ್ಯಾಡಿ: ನೆಲ್ಯಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಪಟ್ಟೆಜಾಲು-ಪಡ್ಪಗುಡ್ಡೆಗೆ 4 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡ ಕಾಂಕ್ರಿಟ್ ರಸ್ತೆಯನ್ನು ನೆಲ್ಯಾಡಿ ಗ್ರಾ.ಪಂ.ಅಧ್ಯಕ್ಷ ಸಲಾಂ ಬಿಲಾಲ್ ಮತ್ತು ಉಪಾಧ್ಯಕ್ಷೆ ರೇಶ್ಮಾ ಶಶಿ ರಿಬ್ಬನ್ ಕತ್ತರಿಸುವ ಮೂಲಕ ಉದ್ಘಾಟಿಸಿದರು.
![]() |
ರಿಬ್ಬನ್ ಕತ್ತರಿಸುವ ಮೂಲಕ ರಸ್ತೆ ಉದ್ಘಾಟಿಸುತ್ತಿರುವುದು (KADABA TIMES) |
ಕಾರ್ಯನಿರ್ವಾಹಕ
ಇಂಜಿನಿಯರ್ ಬಸವರಾಜ್ ಮಾತನಾಡಿ, ಯಾವುದೇ ಕೆಲಸವನ್ನು ನಾವು ಕೈಗೆತ್ತಿಕೊಂಡಾಗ ಊರ ಜನರ ಸಹಕಾರ
ಇದ್ದರೆ ಖಂಡಿತ ಒಳ್ಳೆಯ ಅಭಿವೃಧ್ಧಿ ಸಾಧ್ಯವಾಗುತ್ತದೆ ಎಂದು ತಿಳಿಸಿ, ಕಾಮಗಾರಿಯನ್ನು ಶ್ಲಾಘಿಸಿದರು. ಪಂಚಾಯಿತಿ ನ ಮಾಜಿ ಅಧ್ಯಕ್ಷ ಧರ್ಣಪ್ಪ ಹೆಗ್ಡೆ ಸಮಯೋಚಿತವಾಗಿ ಮಾತನಾಡಿ ಹಾರೈಸಿದರು.
ಇದೇ ಸಂದರ್ಭದಲ್ಲಿ ಪಂಚಾಯಿತಿ ಸದಸ್ಯ ಮಹಮ್ಮದ್ ಇಕ್ಬಾಲ್ ಅವರನ್ನು ಸಮಾಜಸೇವೆಗಾಗಿ ಸನ್ಮಾನಿಸಲಾಯಿತು. ಗ್ರಾ.ಪಂ ಕಾರ್ಯದರ್ಶಿ ಅಂಗು, ಕಾಂಟ್ರಾಕ್ಟರ್, ಶಿವಪ್ರಸಾದ್, ಊರ ಹಿರಿಯರಾದ ಜೋಸೆಫ್ ಡಿಸೋಜಾ ಪಡ್ಪಗುಡ್ಡೆ, ಆನಂದ ಹೆಗಡೆ, ಧರ್ಣಪ್ಪ ಹೆಗ್ಡೆ, ಡೆನಿಸ್ ಡಿಸೋಜಾ, ದೇವಕಿ, ನಾರಾಯಣ ಹೆಗಡೆ ಉಪಸ್ಥಿತರಿದ್ದರು. ಸಂಪಾವತಿ ಕಾರ್ಯಕ್ರಮ ನಿರೂಪಿಸಿದರು.